ಕೋಲ್ಕತ್ತ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಗುರುವಾರ ಆ್ಯಂಜಿಯೊಪ್ಲಾಸ್ಟಿ ಮಾಡಲಾಯಿತು.
48 ವರ್ಷದ ಗಂಗೂಲಿ, ಬುಧವಾರ ಎದೆನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆಗಳನ್ನು ನಡೆಸಿದ ನಂತರ ವೈದ್ಯಕೀಯ ತಂಡವು ಎರಡು ಸ್ಟೆಂಟ್ಗಳನ್ನು ಅಳವಡಿಸ ಲಾಯಿತು.
ಅವರಿಗೆ ಈ ಚಿಕಿತ್ಸೆ ನೀಡುತ್ತಿ ರುವುದು ಈ ತಿಂಗಳಲ್ಲಿ ಎರಡನೇ ಬಾರಿ. ಜನವರಿ ಎರಡರಂದು ಅವರು ಲಘುಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಆ್ಯಂಜಿಯೊಪ್ಲಾಸ್ಟಿ ಮಾಡಿ, ಒಂದು ಸ್ಟೆಂಟ್ ಅಳವಡಿಸ ಲಾಗಿತ್ತು.
’ಗಂಗೂಲಿ ಅವರ ಹೃದಯದ ಕೊರೊನರಿ ಆರ್ಟರಿಸ್ನಲ್ಲಿ ರಕ್ತಪ ರಿಚಲನೆ ಸರಾಗಗೊಳಿಸಲು ಎರಡು ಸ್ಟೆಂಟ್ ಅಳವಡಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ‘ ಎಂದು ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ಧಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಂಗೂಲಿ ಅವರ ಆರೋಗ್ಯ ಕುರಿತ ಮಾಹಿತಿ ಪಡೆದರು.