ಈ ಕುರಿತು ಪ್ರತಿಕ್ರಿಯಿಸಿರುವ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್, ‘ನಾವು ಅಧಿಕಾರದಲ್ಲಿದ್ದಾಗ ಒಂದು ನಿರ್ಣಯ ಮಾಡಿಕೊಂಡಿದ್ದೆವು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯುವ ಸರಣಿಗಳಿಗೆ ವಿಕೆಟ್ಕೀಪರ್ ಸ್ಥಾನದಲ್ಲಿ ರಿಷಭ್ ಪಂತ್ ಅದ್ಯತೆ ನೀಡುವುದು. ಸಹಾ ಎರಡನೇ ಆಯ್ಕೆಯಾಗಿದ್ದರು.ಪಂತ್ ಈಗ ತಮ್ಮ ಫಿಟ್ನೆಸ್ಗೆ ಮರಳಿದ್ದಾರೆ. ಲವಲವಿಕೆಯಿಂದ ಆಡಬಲ್ಲರು. ಅವರಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ಕೊಡುವುದು ಸೂಕ್ತ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನಲ್ಲಿ ಅವರ ಹಿಂದಿನ ಸಾಧನೆಯು ಉತ್ತಮವಾಗಿಯೂ ಇದೆ’ಎಂದಿದ್ದಾರೆ.