ಬೆಂಗಳೂರು:ಇದೇ 24ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣದ ಟ್ವೆಂಟಿ-20 ಪಂದ್ಯವನ್ನು 27ಕ್ಕೆ ಮುಂದೂಡಲಾಗಿದೆ.
ಬೆಂಗಳೂರಿನಲ್ಲಿ ಏರ್ ಶೋ ನಡೆಯುವ ಕಾರಣ ಪಂದ್ಯದ ಭದ್ರತಾ ವ್ಯವಸ್ಥೆಗೆ ಅಡಚಣೆಯಾಗುವ ಕಾರಣ ದಿನಾಂಕ ಬದಲಿಸಿಕೊಡಲು ಕೆಎಸ್ಸಿಎ, ಬಿಸಿಸಿಐಗೆ ಮನವಿ ಮಾಡಿತ್ತು.
‘ಬಿಸಿಸಿಐ ನಮ್ಮ ಮನವಿಯನ್ನು ಪುರಸ್ಕರಿಸಿದೆ. ಇಲ್ಲಿ ನಡೆಯಬೇಕಿದ್ದಪಂದ್ಯವನ್ನು ಆಂಧ್ರಕ್ಕೆ ನೀಡಲಾಗಿದೆ. ಅಲ್ಲಿ 27ರಂದು ಆಗಬೇಕಿದ್ದ ಪಂದ್ಯ ಇಲ್ಲಿ ನಡೆಯಲಿದೆ. ಆಂಧ್ರ ಕ್ರಿಕೆಟ್ ಸಂಸ್ಥೆ ಕೂಡ ಸಮ್ಮತಿಸಿದೆ’ಎಂದು ಕೆಎಸ್ ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.