ಬೆಂಗಳೂರು: ಆರಂಭಿಕ ಜೋಡಿಯ ಶತಕದ ಜೊತೆಯಾಟದ ನೆರವಿನಿಂದ ಭಾರತ ತಂಡ ಶನಿವಾರ ಮುಕ್ತಾಯಗೊಂಡ ಅಂಧರ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಸರಣಿಯ ಪ್ರಶಸ್ತಿ ಗೆದ್ದಿತು. ಗೋವಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯರು ಶ್ರೀಲಂಕಾವನ್ನು 10 ವಿಕೆಟ್ಗಳಿಂದ ಮಣಿಸಿದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮೊದಲ ಓವರ್ನಲ್ಲೇ ವಿಕೆಟ್ ಕಳೆದುಕೊಂಡಿತು. ಈ ಆಘಾತದಿಂದ ಚೇತರಿಸಿಕೊಳ್ಳಲಾಗದ ತಂಡ 20ನೇ ಓವರ್ನಲ್ಲಿ 119 ರನ್ಗಳಿಗೆ ಆಲೌಟಾಯಿತು. ನಾಯಕ ಅಜಯ್ ಕುಮಾರ್ ರೆಡ್ಡಿ ನಾಲ್ಕು ವಿಕೆಟ್ ಗಳಿಸಿದರೆ ಎದುರಾಳಿ ತಂಡದ ನಾಯಕ ಪ್ರಿಯಾಂತ 30 ರನ್ ಗಳಿಸಿ ಅಜೇಯರಾಗಿ ಉಳಿದರು.
ಸುಲಭ ಗುರಿಯನ್ನು ಭಾರತ 13.1 ಓವರ್ಗಳಲ್ಲಿ ದಾಟಿತು. ಭಾರತ ಹೊಸ ಜೋಡಿಯನ್ನು ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಕಳುಹಿಸುವ ದಿಟ್ಟ ನಿರ್ಧಾರ ಕೈಗೊಂಡಿತು. ಇದಕ್ಕೆ ಫಲವನ್ನೂ ಕಂಡಿತು. ದುರ್ಗಾ ರಾವ್ 63 ಮತ್ತು ಅನಿಲ್ ಘರಿಯಾ 45 ರನ್ ಗಳಿಸಿ ಅಜೇಯರಾಗಿ ಉಳಿದರು.