<p><strong>ರಾಂಚಿ:</strong> ಪುಲ್ವಾಮಾ ಘಟನೆಯಲ್ಲಿ ಮಡಿದ ಹುತಾತ್ಮರಿಗೆ ಮತ್ತು ಭಾರತೀಯ ಸೇನೆಗೆ ಗೌರವ ಸಲ್ಲಿಸಲು ಭಾರತ ಕ್ರಿಕೆಟ್ ತಂಡದ ಆಟಗಾರರು ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಮಿಲಿಟರಿ ಕ್ಯಾಪ್ ಧರಿಸಿ ಆಡಿದರು. ತಮ್ಮ ಈ ಪಂದ್ಯದ ಶುಲ್ಕವನ್ನು ಸೇನಾ ನಿಧಿಗೆ ಕಾಣಿಕೆ ನೀಡಿದರು.</p>.<p>ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಮಹೇಂದ್ರಸಿಂಗ್ ಧೋನಿ ಅವರು ಎಲ್ಲ ಆಟಗಾರರಿಗೆ ಕ್ಯಾಪ್ ಪ್ರದಾನ ಮಾಡಿದರು. ತಾವೂ ಧರಿಸಿಕೊಂಡರು. ಈ ಕ್ಯಾಪ್ ಮೇಲೆ ಬಿಸಿಸಿಐ ಲೋಗೊ ಅಳವಡಿಸಲಾಗಿತ್ತು.</p>.<p>2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕರಾಗಿದ್ದ ಧೋನಿ ಅವರಿಗೆ ಸೇನೆಯು ಈ ಹುದ್ದೆ ನೀಡಿ ಗೌರವಿಸಿತ್ತು.</p>.<p>‘ಇದು ವಿಶೇಷವಾದ ಕ್ಯಾಪ್. ಸಶಸ್ತ್ರ ಪಡೆಗೆ ನಮ್ಮ ತಂಡವು ಈ ಮೂಲಕ ಗೌರವ ಅರ್ಪಿಸುತ್ತಿದೆ. ನಮ್ಮ ಈ ಪಂದ್ಯದ ಶುಲ್ಕವನ್ನೂ ನಾವು ರಕ್ಷಣಾ ನಿಧಿಗೆ ಕಾಣಿಕೆ ನೀಡುತ್ತೇವೆ. ದೇಶವಾಸಿಗಳೆಲ್ಲರೂ ಸೇನೆ ಮತ್ತು ಅವರ ಕುಟುಂಬದವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ’ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದರು.</p>.<p>ಪಂದ್ಯದಲ್ಲಿ ಕಣಕ್ಕಿಳಿದ 11 ಆಟಗಾರರು ತಲಾ ಎಂಟು ಲಕ್ಷ ರೂಪಾಯಿಮತ್ತು ಬೆಂಚ್ನಲ್ಲಿರುವ ಆಟಗಾರರು ತಲಾ ನಾಲ್ಕು ಲಕ್ಷ ಪಂದ್ಯದ ಶುಲ್ಕ ಪಡೆಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಚಿ:</strong> ಪುಲ್ವಾಮಾ ಘಟನೆಯಲ್ಲಿ ಮಡಿದ ಹುತಾತ್ಮರಿಗೆ ಮತ್ತು ಭಾರತೀಯ ಸೇನೆಗೆ ಗೌರವ ಸಲ್ಲಿಸಲು ಭಾರತ ಕ್ರಿಕೆಟ್ ತಂಡದ ಆಟಗಾರರು ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಮಿಲಿಟರಿ ಕ್ಯಾಪ್ ಧರಿಸಿ ಆಡಿದರು. ತಮ್ಮ ಈ ಪಂದ್ಯದ ಶುಲ್ಕವನ್ನು ಸೇನಾ ನಿಧಿಗೆ ಕಾಣಿಕೆ ನೀಡಿದರು.</p>.<p>ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಮಹೇಂದ್ರಸಿಂಗ್ ಧೋನಿ ಅವರು ಎಲ್ಲ ಆಟಗಾರರಿಗೆ ಕ್ಯಾಪ್ ಪ್ರದಾನ ಮಾಡಿದರು. ತಾವೂ ಧರಿಸಿಕೊಂಡರು. ಈ ಕ್ಯಾಪ್ ಮೇಲೆ ಬಿಸಿಸಿಐ ಲೋಗೊ ಅಳವಡಿಸಲಾಗಿತ್ತು.</p>.<p>2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕರಾಗಿದ್ದ ಧೋನಿ ಅವರಿಗೆ ಸೇನೆಯು ಈ ಹುದ್ದೆ ನೀಡಿ ಗೌರವಿಸಿತ್ತು.</p>.<p>‘ಇದು ವಿಶೇಷವಾದ ಕ್ಯಾಪ್. ಸಶಸ್ತ್ರ ಪಡೆಗೆ ನಮ್ಮ ತಂಡವು ಈ ಮೂಲಕ ಗೌರವ ಅರ್ಪಿಸುತ್ತಿದೆ. ನಮ್ಮ ಈ ಪಂದ್ಯದ ಶುಲ್ಕವನ್ನೂ ನಾವು ರಕ್ಷಣಾ ನಿಧಿಗೆ ಕಾಣಿಕೆ ನೀಡುತ್ತೇವೆ. ದೇಶವಾಸಿಗಳೆಲ್ಲರೂ ಸೇನೆ ಮತ್ತು ಅವರ ಕುಟುಂಬದವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ’ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದರು.</p>.<p>ಪಂದ್ಯದಲ್ಲಿ ಕಣಕ್ಕಿಳಿದ 11 ಆಟಗಾರರು ತಲಾ ಎಂಟು ಲಕ್ಷ ರೂಪಾಯಿಮತ್ತು ಬೆಂಚ್ನಲ್ಲಿರುವ ಆಟಗಾರರು ತಲಾ ನಾಲ್ಕು ಲಕ್ಷ ಪಂದ್ಯದ ಶುಲ್ಕ ಪಡೆಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>