ಫಿಯೆಟ್ ಕಾರಿಗೆ ಬಣ್ಣ ಬಳಿಯುವ ಮೂಲಕ ಅದರ ಮೇಲೆ ಸಂತೋಷ್ ಅವರು ‘ಈ ಸಲ ಕಪ್ ನಮ್ದೆ’ ಎಂಬ ಘೋಷಣೆ ಬರೆಸಿದ್ದಾರೆ. ಅಲ್ಲದೇ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ನಾಗ್, ಪುನೀತ್ ರಾಜ್ಕು ಮಾರ್ ಅವರ ಭಾವಚಿತ್ರಗಳನ್ನೂ ಕಾರಿನ ಮೇಲೆ ಚಿತ್ರಿಸುವ ಮೂಲಕ ಆರ್ಸಿಬಿ ತಂಡಕ್ಕೆ ಶುಭ ಕೋರಿದ್ದಾರೆ. ಈ ರೀತಿ ವರ್ಣರಂಜಿತವಾಗಿರುವ ಈ ಕಾರು ನಗರದ ವಿವಿಧೆಡೆ ಸಂಚರಿಸುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.