ಬಳಿಕ 'ಎನ್ಡಿಟಿವಿ'ಗೆ ಸ್ಪಷ್ಟನೆ ಕೊಟ್ಟಿರುವ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್, 'ರಾಯುಡು ನಿವೃತ್ತಿಯಾಗುತ್ತಿಲ್ಲ. ಉತ್ತಮ ಪ್ರದರ್ಶನ ನೀಡದಿರುವುದರಿಂದ ಅವರು ನಿರಾಸೆಗೊಂಡಿದ್ದರು. ಹಾಗಾಗಿ ಎಡವಟ್ಟಾಗಿ ಟ್ವೀಟ್ ಹಾಕಿದ್ದಾರೆ. ನಾನು ಅವರಿಗೆ ವಿಷಯ ವಿವರಿಸಿದ್ದೇನೆ. ಅವರು ನಿವೃತ್ತಿಯಾಗುತ್ತಿಲ್ಲ. ನಮ್ಮೊಂದಿಗೆ ಇರುತ್ತಾರೆ' ಎಂದು ಹೇಳಿದ್ದಾರೆ.