<p><strong>ಬೆಂಗಳೂರು:</strong> ‘ನಾವು ಮೊದಲೆರಡೂ ಪಂದ್ಯಗಳಿಗೆ ಬ್ಯಾಟಿಂಗ್ ಸ್ನೇಹಿ ಪಿಚ್ ಸಿದ್ಧಪಡಿಸಲು ಕೇಳಿದ್ದೆವು. ಆದರೆ ಬ್ಯಾಟಿಂಗ್ ಮಾಡಲು ಕಠಿಣ ಸವಾಲೊಡ್ಡುವಂತಹ ಅಂಕಣ ಸಿದ್ಧಪಡಿಸಿದ್ದಾರೆ. ಇದರಿಂದಾಗಿ ತವರಿನಂಗಳದ ಲಾಭ ಸಂಪೂರ್ಣವಾಗಿ ನಮಗೆ ಸಿಗಲಿಲ್ಲ’–</p>.<p>ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಅವರು ಹೇಳಿದ ಮಾತುಗಳಿವು. ಈ ಪಂದ್ಯದಲ್ಲಿ ಆರ್ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಎದುರು 6 ವಿಕೆಟ್ಗಳಿಂದ ಸೋತಿತು. ತವರಿನಂಗಳದಲ್ಲಿ ಆರ್ಸಿಬಿ ಸೋತ ಎರಡನೇ ಪಂದ್ಯ ಇದಾಗಿದೆ. </p>.<p>‘ನಮಗೆ ಯಾವ ರೀತಿಯ ಪಿಚ್ ಲಭಿಸಿತ್ತೋ ಅದೇ ರೀತಿ ಆಡಿದ್ದೇವೆ. ಈ ಕುರಿತು ಅವರೊಂದಿಗೆ (ಪಿಚ್ ಕ್ಯುರೇಟರ್) ಚರ್ಚಿಸುತ್ತೇವೆ. ಅವರ ಮೇಲೆ ನಮಗೆ ತುಂಬಾ ನಂಬಿಕೆ ಇದೆ. ಅವರು ಉತ್ತಮವಾದ ಪಿಚ್ ಸಿದ್ಧಗೊಳಿಸಬಲ್ಲರು’ ಎಂದು ದಿನೇಶ್ ಹೇಳಿದರು. </p>.<p>‘ಪಿಚ್ ತುಸು ಜಿಗುಟುತನದಿಂದ ಕೂಡಿತ್ತು. ಇನಿಂಗ್ಸ್ ಆರಂಭದಲ್ಲಿ ನಾಲ್ಕು ಓವರ್ ಬ್ಯಾಟಿಂಗ್ ಸುಲಭವಾಗಿತ್ತು. ನಂತರ 13ನೇ ಓವರ್ನವರೆಗೂ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಿದೆವು. ದೊಡ್ಡ ಸ್ಕೋರ್ ಗಳಿಸುವ ಹಾದಿಯಲ್ಲಿ ಸ್ವಲ್ಪ ತಡಬಡಾಯಿಸಿದೆವು. ಆ ತಂಡ (ಡೆಲ್ಲಿ) ಕೂಡ ಆರಂಭದಲ್ಲಿಯೇ ಸಂಕಷ್ಟಕ್ಕೊಳಗಾಗಿತ್ತು. 50 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು’ ಎಂದು ದಿನೇಶ್ ವಿಶ್ಲೇಷಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನಾವು ಮೊದಲೆರಡೂ ಪಂದ್ಯಗಳಿಗೆ ಬ್ಯಾಟಿಂಗ್ ಸ್ನೇಹಿ ಪಿಚ್ ಸಿದ್ಧಪಡಿಸಲು ಕೇಳಿದ್ದೆವು. ಆದರೆ ಬ್ಯಾಟಿಂಗ್ ಮಾಡಲು ಕಠಿಣ ಸವಾಲೊಡ್ಡುವಂತಹ ಅಂಕಣ ಸಿದ್ಧಪಡಿಸಿದ್ದಾರೆ. ಇದರಿಂದಾಗಿ ತವರಿನಂಗಳದ ಲಾಭ ಸಂಪೂರ್ಣವಾಗಿ ನಮಗೆ ಸಿಗಲಿಲ್ಲ’–</p>.<p>ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಅವರು ಹೇಳಿದ ಮಾತುಗಳಿವು. ಈ ಪಂದ್ಯದಲ್ಲಿ ಆರ್ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಎದುರು 6 ವಿಕೆಟ್ಗಳಿಂದ ಸೋತಿತು. ತವರಿನಂಗಳದಲ್ಲಿ ಆರ್ಸಿಬಿ ಸೋತ ಎರಡನೇ ಪಂದ್ಯ ಇದಾಗಿದೆ. </p>.<p>‘ನಮಗೆ ಯಾವ ರೀತಿಯ ಪಿಚ್ ಲಭಿಸಿತ್ತೋ ಅದೇ ರೀತಿ ಆಡಿದ್ದೇವೆ. ಈ ಕುರಿತು ಅವರೊಂದಿಗೆ (ಪಿಚ್ ಕ್ಯುರೇಟರ್) ಚರ್ಚಿಸುತ್ತೇವೆ. ಅವರ ಮೇಲೆ ನಮಗೆ ತುಂಬಾ ನಂಬಿಕೆ ಇದೆ. ಅವರು ಉತ್ತಮವಾದ ಪಿಚ್ ಸಿದ್ಧಗೊಳಿಸಬಲ್ಲರು’ ಎಂದು ದಿನೇಶ್ ಹೇಳಿದರು. </p>.<p>‘ಪಿಚ್ ತುಸು ಜಿಗುಟುತನದಿಂದ ಕೂಡಿತ್ತು. ಇನಿಂಗ್ಸ್ ಆರಂಭದಲ್ಲಿ ನಾಲ್ಕು ಓವರ್ ಬ್ಯಾಟಿಂಗ್ ಸುಲಭವಾಗಿತ್ತು. ನಂತರ 13ನೇ ಓವರ್ನವರೆಗೂ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಿದೆವು. ದೊಡ್ಡ ಸ್ಕೋರ್ ಗಳಿಸುವ ಹಾದಿಯಲ್ಲಿ ಸ್ವಲ್ಪ ತಡಬಡಾಯಿಸಿದೆವು. ಆ ತಂಡ (ಡೆಲ್ಲಿ) ಕೂಡ ಆರಂಭದಲ್ಲಿಯೇ ಸಂಕಷ್ಟಕ್ಕೊಳಗಾಗಿತ್ತು. 50 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು’ ಎಂದು ದಿನೇಶ್ ವಿಶ್ಲೇಷಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>