<p><strong>ಬೆಂಗಳೂರು</strong>: ‘ಇದು ನನ್ನ ನೆಲ. ನನ್ನ ತವರು. ಇಲ್ಲಿನ ಮೈದಾನದ ಬಗ್ಗೆ ಉಳಿದ ಎಲ್ಲರಿಗಿಂತ ಹೆಚ್ಚು ತಿಳಿದುಕೊಂಡಿದ್ದೇನೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್– ಬ್ಯಾಟರ್ ಕೆ.ಎಲ್.ರಾಹುಲ್ ಪ್ರತಿಕ್ರಿಯಿಸಿದರು.</p><p>‘20 ಓವರುಗಳ ಕಾಲ ವಿಕೆಟ್ ಹಿಂದುಗಡೆ ನಿಂತು ಪಿಚ್ ಹೇಗೆ ವರ್ತಿಸುತ್ತದೆ ಎಂದು ಗಮನಿಸುತ್ತಿದ್ದುದು ನನಗೆ ನೆರವಾಯಿತು’ ಎಂದು ಅವರು ಗುರುವಾರ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p><p>‘ನಾನು ಉತ್ತಮ ಆರಂಭ ಪಡೆಯಲು ಬಯಸಿದ್ದೆ. ಅದಾದ ಬಳಿಕ ನಂತರ ಚೆಂಡನ್ನು ಎಲ್ಲಿ ಆಡಬೇಕೆಂಬುದನ್ನು ಮನಸ್ಸಿನಲ್ಲಿ ಸ್ಪಷ್ಟಮಾಡಿ ಕೊಂಡೆ. ಇಂಥ ಪಿಚ್ಗಳಲ್ಲಿ ನನ್ನ ಸಾಮರ್ಥ್ಯ ಏನೆಂಬುದರ ಅಂದಾಜು ನನಗಿತ್ತು. ಕೀಪಿಂಗ್ ವೇಳೆ ಬ್ಯಾಟರ್ಗಳು ಹೇಗೆ ಔಟಾದರು; ಎಲ್ಲಿ ಸಿಕ್ಸರ್ ಹೊಡೆದರು ಎಂಬುದನ್ನು ಗಮನಿಸಿದ್ದೆ. ಜೀವದಾನ ದೊರಕಿದ್ದು ವರವಾಯಿತು’ ಎಂದು 32 ವರ್ಷ ವಯಸ್ಸಿನ ಆಟಗಾರ ತಿಳಿಸಿದರು.</p><p>ಈ ಹಿಂದೆಯೂ ರಾಹುಲ್, ಆರ್ಸಿಬಿ ತಂಡವನ್ನು ಕಾಡಿದ್ದು ಇದೆ. ದುಬೈನಲ್ಲಿ ನಡೆದಿದ್ದ (2020 ಸೆಪ್ಟೆಂಬರ್) ಐಪಿಎಲ್ ಪಂದ್ಯದಲ್ಲಿ ಅವರು ಪಂಜಾಬ್ ಕಿಂಗ್ಸ್ ನಾಯಕನಾಗಿ ಅಜೇಯ 132 ರನ್ ಬಾರಿಸಿದ್ದರು. ಆ ಪಂದ್ಯವನ್ನು ಆರ್ಸಿಬಿ 97 ರನ್ಗಳಿಂದ ಸೋತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಇದು ನನ್ನ ನೆಲ. ನನ್ನ ತವರು. ಇಲ್ಲಿನ ಮೈದಾನದ ಬಗ್ಗೆ ಉಳಿದ ಎಲ್ಲರಿಗಿಂತ ಹೆಚ್ಚು ತಿಳಿದುಕೊಂಡಿದ್ದೇನೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್– ಬ್ಯಾಟರ್ ಕೆ.ಎಲ್.ರಾಹುಲ್ ಪ್ರತಿಕ್ರಿಯಿಸಿದರು.</p><p>‘20 ಓವರುಗಳ ಕಾಲ ವಿಕೆಟ್ ಹಿಂದುಗಡೆ ನಿಂತು ಪಿಚ್ ಹೇಗೆ ವರ್ತಿಸುತ್ತದೆ ಎಂದು ಗಮನಿಸುತ್ತಿದ್ದುದು ನನಗೆ ನೆರವಾಯಿತು’ ಎಂದು ಅವರು ಗುರುವಾರ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p><p>‘ನಾನು ಉತ್ತಮ ಆರಂಭ ಪಡೆಯಲು ಬಯಸಿದ್ದೆ. ಅದಾದ ಬಳಿಕ ನಂತರ ಚೆಂಡನ್ನು ಎಲ್ಲಿ ಆಡಬೇಕೆಂಬುದನ್ನು ಮನಸ್ಸಿನಲ್ಲಿ ಸ್ಪಷ್ಟಮಾಡಿ ಕೊಂಡೆ. ಇಂಥ ಪಿಚ್ಗಳಲ್ಲಿ ನನ್ನ ಸಾಮರ್ಥ್ಯ ಏನೆಂಬುದರ ಅಂದಾಜು ನನಗಿತ್ತು. ಕೀಪಿಂಗ್ ವೇಳೆ ಬ್ಯಾಟರ್ಗಳು ಹೇಗೆ ಔಟಾದರು; ಎಲ್ಲಿ ಸಿಕ್ಸರ್ ಹೊಡೆದರು ಎಂಬುದನ್ನು ಗಮನಿಸಿದ್ದೆ. ಜೀವದಾನ ದೊರಕಿದ್ದು ವರವಾಯಿತು’ ಎಂದು 32 ವರ್ಷ ವಯಸ್ಸಿನ ಆಟಗಾರ ತಿಳಿಸಿದರು.</p><p>ಈ ಹಿಂದೆಯೂ ರಾಹುಲ್, ಆರ್ಸಿಬಿ ತಂಡವನ್ನು ಕಾಡಿದ್ದು ಇದೆ. ದುಬೈನಲ್ಲಿ ನಡೆದಿದ್ದ (2020 ಸೆಪ್ಟೆಂಬರ್) ಐಪಿಎಲ್ ಪಂದ್ಯದಲ್ಲಿ ಅವರು ಪಂಜಾಬ್ ಕಿಂಗ್ಸ್ ನಾಯಕನಾಗಿ ಅಜೇಯ 132 ರನ್ ಬಾರಿಸಿದ್ದರು. ಆ ಪಂದ್ಯವನ್ನು ಆರ್ಸಿಬಿ 97 ರನ್ಗಳಿಂದ ಸೋತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>