ಬೆಂಗಳೂರು: ಭಾರತ ತಂಡದ ಆಟಗಾರ ಆರ್. ವಿನಯಕುಮಾರ್ ಅವರು ಐಪಿಎಲ್ ಟೂರ್ನಿಗಾಗಿ ಸ್ಟಾರ್ ಸ್ಪೋರ್ಟ್ಟ್ ಕನ್ನಡ ವಾಹಿನಿಯಲ್ಲಿ ವೀಕ್ಷಕ ವಿವರಣೆ ನೀಡಲಿದ್ದಾರೆ.
ವಿನಯಕುಮಾರ್ ನಾಯಕತ್ವದಲ್ಲಿ ಕರ್ನಾಟಕ ಕ್ರಿಕೆಟ್ ತಂಡವು ಎರಡು ಬಾರಿ ರಣಜಿ ಟ್ರೋಫಿ ಜಯಿಸಿತ್ತು. ಹೋದ ದೇಶಿ ಋತುವಿನಲ್ಲಿ ಅವರು ಪುದುಚೇರಿ ತಂಡವನ್ನು ಪ್ರತಿನಿಧಿಸಿದ್ದರು.
ಭಾರತ ತಂಡದ ಇನ್ನೊಬ್ಬ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್, ಭರತ್ ಚಿಪ್ಲಿ, ಅಖಿಲ್ ಬಾಲಚಂದ್ರ, ಜೆ.ಕೆ. ಅನಿಲಕುಮಾರ್, ಶ್ರೀನಿವಾಸ್ ಮೂರ್ತಿ ಕನ್ನಡ ವೀಕ್ಷಕವಿವರಣೆಕಾರರಾಗಿ ಕಾರ್ಯನಿರ್ವಹಿಸುವರು. ರೀನಾ ಡಿಸೋಜಾ, ಮಧು ಹಾಗೂ ಶ್ರೀನಿವಾಸ್ ನಿರೂಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.