<p><strong>‘ಗುಳ್ಟು’</strong><br /> ಹೀಗೊಂದು ವಿಚಿತ್ರ ಹೆಸರಿಟ್ಟುಕೊಂಡು ಸಸ್ಪೆನ್ಸ್ ಚಿತ್ರವೊಂದನ್ನು ರೂಪಿಸಿದೆ ಯುವ ಉತ್ಸಾಹಿ ತಂಡ. ಎಂಜಿನಿಯರಿಂಗ್ ಪದವಿ ಮುಗಿಸಿ, ಕ್ಯಾಂಪಸ್ ಇಂಟರ್ವ್ಯೂಗೆ ಹೋಗದೆ ಗಾಂಧಿನಗರದ ದಿಕ್ಕಿಗೆ ಮುಖಮಾಡಿದ ಜನಾರ್ದನ್ ಈ ಚಿತ್ರದ ನಿರ್ದೇಶಕ. ಅವರ ಕನಸಿನ ಕಥೆಗೆ ಅವರ ಸ್ನೇಹಿತ ಪ್ರಶಾಂತ್ ರೆಡ್ಡಿ ಮತ್ತು ದೇವರಾಜ್ ಚಿಕ್ಕಣ್ಣ ಆರ್ಥಿಕ ಇಂಧನ ಎರೆದಿದ್ದಾರೆ. ನವೀನ್ ನಾಯಕನಾಗಿ ನಟಿಸುತ್ತಿದ್ದಾರೆ. ಸೋನು ಗೌಡ ನಾಯಕಿ. ಈ ಹೊಸಬರ ಪ್ರಯತ್ನಕ್ಕೆ ಹಿರಿಯ ನಟರಾದ ಅವಿನಾಶ್ ಮತ್ತು ರಂಗಾಯಣ ರಘು ತುಂಬು ಖುಷಿಯಿಂದಲೇ ಬೆಂಬಲ ನೀಡಿದ್ದಾರೆ.</p>.<p>‘ಗುಳ್ಟು’ ಎಂದರೇನು? ಇದು ಯಾವ ಭಾಷೆಯ ಚಿತ್ರ? ಈ ಚಿತ್ರದ ಕಥೆಗೂ ಶೀರ್ಷಿಕೆಗೂ ಏನು ಸಂಬಂಧ?</p>.<p>ಈ ಎಲ್ಲ ಪ್ರಶ್ನೆಗಳಿಗೂ ಒಂದು ನಗುವಿನ ಉತ್ತರ ಎಸೆದು ಸುಮ್ಮನಾಗುತ್ತಾರೆ ನಿರ್ದೇಶಕರು. ಇನ್ನೂ ಕೆದಕ ಹೊರಟರೆ ‘ಗುಳ್ಟು’ ಅಂತ ಒಂದು ಶಬ್ದ ಇಲ್ಲ. ಅದಕ್ಕೆ ಇಂಥದ್ದೇ ಅಂತ ಅರ್ಥ ಇಲ್ಲ, ಆದರೆ ಈ ಚಿತ್ರಕ್ಕೆ ಯಾಕೆ ಈ ಹೆಸರಿಟ್ಟಿದ್ದೇವೆ ಎನ್ನುವುದಕ್ಕೆ ಸಿನಿಮಾದಲ್ಲಿ ತಕ್ಕ ಸಮರ್ಥನೆ ಇದೆ. ಚಿತ್ರದ ಶೀರ್ಷಿಕೆಯಿಂದಲೇ ಸಸ್ಪೆನ್ಸ್ ಶುರುಮಾಡುವುದು ನಮ್ಮ ಉದ್ದೇಶ’ ಎಂದು ಹುಳ ಬಿಡುತ್ತಾರೆ ಜನಾರ್ದನ್.</p>.<p>‘ಹಣ ಇದೆ ಎನ್ನುವ ಕಾರಣಕ್ಕೇ ಸಿನಿಮಾ ಮಾಡುವುದಕ್ಕಾಗುವುದಿಲ್ಲ. ಕಥೆ, ಪ್ರತಿಭೆ ಇವುಗಳು ಇವೆ ಎಂದಾಕ್ಷಣವೂ ಸಿನಿಮಾ ಮಾಡುವುದು ಸಾಧ್ಯವಿಲ್ಲ. ಈ ಎಲ್ಲವೂ ಒಟ್ಟಿಗೆ ಸೇರಿದಾಗ ಒಂದು ಒಳ್ಳೆಯ ಸಿನಿಮಾ ನಿರ್ಮಾಣವಾಗುತ್ತದೆ. ಗುಳ್ಟು ಸಿನಿಮಾದಲ್ಲಿ ಹೀಗೆಯೇ ಆಗಿದೆ’ ಎಂದರು ನಿರ್ಮಾಪಕ ಪ್ರಶಾಂತ್.</p>.<p>‘ಗುಳ್ಟು’ ಸಿನಿಮಾ ಪ್ರಕ್ರಿಯೆ ಶುರುವಾಗಿ ಎರಡು ವರ್ಷಗಳಾಗಿವೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ನಿರೂಪಣೆಯಲ್ಲಿ ಹೊಸತನವಿದೆ’ ಎಂದು ನಿರ್ದೇಶಕರು ಸ್ಪಷ್ಟಪಡಿಸಿದರು.</p>.<p>‘ಕನ್ನಡ ಚಿತ್ರರಂಗದಲ್ಲಿ ಎಷ್ಟೊಂದು ಹೊಸ ಬಗೆಯ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ನಾನೇಕೆ ಅಂಥ ಪ್ರಯೋಗದ ಭಾಗವಾಗಬಾರದು ಎಂದು ಅನಿಸಿತು. ಆದ್ದರಿಂದಲೇ ಈ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ಆರಂಭದಲ್ಲಿ ಇಂಥದ್ದೊಂದು ಪಾತ್ರದಲ್ಲಿ ನಾನು ನಟಿಸಬಲ್ಲೆನಾ ಎಂಬ ಅನುಮಾನ, ಆತಂಕ ಇದ್ದೇ ಇತ್ತು. ಆದರೆ, ಕಲಾವಿದೆಯಾಗಿ ನನಗೆ ತುಂಬ ಖುಷಿಕೊಟ್ಟ ಪಾತ್ರ ಇದು’ ಎಂದು ಖುಷಿಯಿಂದ ಹೇಳಿಕೊಂಡರು ಸೋನು ಗೌಡ.</p>.<p>ರಂಗಾಯಣ ರಘು ಈ ಚಿತ್ರದ ಅರ್ಥದ ಬಗ್ಗೆ ವಿವರಣೆ ಕೇಳಿದಾಗ ‘ಅದು ಕಂಪ್ಯೂಟರ್ ಭಾಷೆ ಸರ್’ ಎಂದುಬಿಟ್ಟಿದ್ದರಂತೆ ನಿರ್ದೇಶಕರು. ‘ಇದ್ಯಾವ್ದೋ ನನಗೆ ಅರ್ಥವಾಗದ ಭಾಷೆ ಎಂದು ಕೊಂಡು ಸುಮ್ಮನಾದೆ’ ಎಂದರು ಅವರು. ಪತ್ರಕರ್ತನಾಗಿ ಕೆಲಸ ಮಾಡಿಯೂ ಅನುಭವ ಇರುವ ನವೀನ್ ಶಂಕರ್ ಈ ಚಿತ್ರದ ಮೂಲಕ ನಾಯಕ ನಟನಾಗಿ ಪರಿಚಿತರಾಗುತ್ತಿದ್ದಾರೆ.</p>.<p>ಹೊಸ ಹುಡುಗರ ತಂಡದ ಕುರಿತು ಮೆಚ್ಚುಗೆಯಿಂದಲೇ ಮಾತನಾಡಿದರು ನಟ ಅವಿನಾಶ್. ಅಮಿತ್ ಆನಂದ ಸಂಗೀತ, ಶಾಂತಿಸಾಗರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.</p>.<p><br /> <strong><em>-ಜನಾರ್ದನ್</em></strong></p>.<p><strong><em>*<br /> </em></strong></p>.<p><strong><em><br /> -ನವೀನ್ ಶಂಕರ್</em></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಗುಳ್ಟು’</strong><br /> ಹೀಗೊಂದು ವಿಚಿತ್ರ ಹೆಸರಿಟ್ಟುಕೊಂಡು ಸಸ್ಪೆನ್ಸ್ ಚಿತ್ರವೊಂದನ್ನು ರೂಪಿಸಿದೆ ಯುವ ಉತ್ಸಾಹಿ ತಂಡ. ಎಂಜಿನಿಯರಿಂಗ್ ಪದವಿ ಮುಗಿಸಿ, ಕ್ಯಾಂಪಸ್ ಇಂಟರ್ವ್ಯೂಗೆ ಹೋಗದೆ ಗಾಂಧಿನಗರದ ದಿಕ್ಕಿಗೆ ಮುಖಮಾಡಿದ ಜನಾರ್ದನ್ ಈ ಚಿತ್ರದ ನಿರ್ದೇಶಕ. ಅವರ ಕನಸಿನ ಕಥೆಗೆ ಅವರ ಸ್ನೇಹಿತ ಪ್ರಶಾಂತ್ ರೆಡ್ಡಿ ಮತ್ತು ದೇವರಾಜ್ ಚಿಕ್ಕಣ್ಣ ಆರ್ಥಿಕ ಇಂಧನ ಎರೆದಿದ್ದಾರೆ. ನವೀನ್ ನಾಯಕನಾಗಿ ನಟಿಸುತ್ತಿದ್ದಾರೆ. ಸೋನು ಗೌಡ ನಾಯಕಿ. ಈ ಹೊಸಬರ ಪ್ರಯತ್ನಕ್ಕೆ ಹಿರಿಯ ನಟರಾದ ಅವಿನಾಶ್ ಮತ್ತು ರಂಗಾಯಣ ರಘು ತುಂಬು ಖುಷಿಯಿಂದಲೇ ಬೆಂಬಲ ನೀಡಿದ್ದಾರೆ.</p>.<p>‘ಗುಳ್ಟು’ ಎಂದರೇನು? ಇದು ಯಾವ ಭಾಷೆಯ ಚಿತ್ರ? ಈ ಚಿತ್ರದ ಕಥೆಗೂ ಶೀರ್ಷಿಕೆಗೂ ಏನು ಸಂಬಂಧ?</p>.<p>ಈ ಎಲ್ಲ ಪ್ರಶ್ನೆಗಳಿಗೂ ಒಂದು ನಗುವಿನ ಉತ್ತರ ಎಸೆದು ಸುಮ್ಮನಾಗುತ್ತಾರೆ ನಿರ್ದೇಶಕರು. ಇನ್ನೂ ಕೆದಕ ಹೊರಟರೆ ‘ಗುಳ್ಟು’ ಅಂತ ಒಂದು ಶಬ್ದ ಇಲ್ಲ. ಅದಕ್ಕೆ ಇಂಥದ್ದೇ ಅಂತ ಅರ್ಥ ಇಲ್ಲ, ಆದರೆ ಈ ಚಿತ್ರಕ್ಕೆ ಯಾಕೆ ಈ ಹೆಸರಿಟ್ಟಿದ್ದೇವೆ ಎನ್ನುವುದಕ್ಕೆ ಸಿನಿಮಾದಲ್ಲಿ ತಕ್ಕ ಸಮರ್ಥನೆ ಇದೆ. ಚಿತ್ರದ ಶೀರ್ಷಿಕೆಯಿಂದಲೇ ಸಸ್ಪೆನ್ಸ್ ಶುರುಮಾಡುವುದು ನಮ್ಮ ಉದ್ದೇಶ’ ಎಂದು ಹುಳ ಬಿಡುತ್ತಾರೆ ಜನಾರ್ದನ್.</p>.<p>‘ಹಣ ಇದೆ ಎನ್ನುವ ಕಾರಣಕ್ಕೇ ಸಿನಿಮಾ ಮಾಡುವುದಕ್ಕಾಗುವುದಿಲ್ಲ. ಕಥೆ, ಪ್ರತಿಭೆ ಇವುಗಳು ಇವೆ ಎಂದಾಕ್ಷಣವೂ ಸಿನಿಮಾ ಮಾಡುವುದು ಸಾಧ್ಯವಿಲ್ಲ. ಈ ಎಲ್ಲವೂ ಒಟ್ಟಿಗೆ ಸೇರಿದಾಗ ಒಂದು ಒಳ್ಳೆಯ ಸಿನಿಮಾ ನಿರ್ಮಾಣವಾಗುತ್ತದೆ. ಗುಳ್ಟು ಸಿನಿಮಾದಲ್ಲಿ ಹೀಗೆಯೇ ಆಗಿದೆ’ ಎಂದರು ನಿರ್ಮಾಪಕ ಪ್ರಶಾಂತ್.</p>.<p>‘ಗುಳ್ಟು’ ಸಿನಿಮಾ ಪ್ರಕ್ರಿಯೆ ಶುರುವಾಗಿ ಎರಡು ವರ್ಷಗಳಾಗಿವೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ನಿರೂಪಣೆಯಲ್ಲಿ ಹೊಸತನವಿದೆ’ ಎಂದು ನಿರ್ದೇಶಕರು ಸ್ಪಷ್ಟಪಡಿಸಿದರು.</p>.<p>‘ಕನ್ನಡ ಚಿತ್ರರಂಗದಲ್ಲಿ ಎಷ್ಟೊಂದು ಹೊಸ ಬಗೆಯ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ನಾನೇಕೆ ಅಂಥ ಪ್ರಯೋಗದ ಭಾಗವಾಗಬಾರದು ಎಂದು ಅನಿಸಿತು. ಆದ್ದರಿಂದಲೇ ಈ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ಆರಂಭದಲ್ಲಿ ಇಂಥದ್ದೊಂದು ಪಾತ್ರದಲ್ಲಿ ನಾನು ನಟಿಸಬಲ್ಲೆನಾ ಎಂಬ ಅನುಮಾನ, ಆತಂಕ ಇದ್ದೇ ಇತ್ತು. ಆದರೆ, ಕಲಾವಿದೆಯಾಗಿ ನನಗೆ ತುಂಬ ಖುಷಿಕೊಟ್ಟ ಪಾತ್ರ ಇದು’ ಎಂದು ಖುಷಿಯಿಂದ ಹೇಳಿಕೊಂಡರು ಸೋನು ಗೌಡ.</p>.<p>ರಂಗಾಯಣ ರಘು ಈ ಚಿತ್ರದ ಅರ್ಥದ ಬಗ್ಗೆ ವಿವರಣೆ ಕೇಳಿದಾಗ ‘ಅದು ಕಂಪ್ಯೂಟರ್ ಭಾಷೆ ಸರ್’ ಎಂದುಬಿಟ್ಟಿದ್ದರಂತೆ ನಿರ್ದೇಶಕರು. ‘ಇದ್ಯಾವ್ದೋ ನನಗೆ ಅರ್ಥವಾಗದ ಭಾಷೆ ಎಂದು ಕೊಂಡು ಸುಮ್ಮನಾದೆ’ ಎಂದರು ಅವರು. ಪತ್ರಕರ್ತನಾಗಿ ಕೆಲಸ ಮಾಡಿಯೂ ಅನುಭವ ಇರುವ ನವೀನ್ ಶಂಕರ್ ಈ ಚಿತ್ರದ ಮೂಲಕ ನಾಯಕ ನಟನಾಗಿ ಪರಿಚಿತರಾಗುತ್ತಿದ್ದಾರೆ.</p>.<p>ಹೊಸ ಹುಡುಗರ ತಂಡದ ಕುರಿತು ಮೆಚ್ಚುಗೆಯಿಂದಲೇ ಮಾತನಾಡಿದರು ನಟ ಅವಿನಾಶ್. ಅಮಿತ್ ಆನಂದ ಸಂಗೀತ, ಶಾಂತಿಸಾಗರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.</p>.<p><br /> <strong><em>-ಜನಾರ್ದನ್</em></strong></p>.<p><strong><em>*<br /> </em></strong></p>.<p><strong><em><br /> -ನವೀನ್ ಶಂಕರ್</em></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>