<p><strong>ನವದೆಹಲಿ:</strong> ಒಂದು ಹೊಸ ಫುಟ್ಬಾಲ್ ತಂಡದ ಸೇರ್ಪಡೆಗಾಗಿ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಶುಕ್ರವಾರ ಬಿಡ್ ಆಹ್ವಾನಿಸಿದೆ.</p>.<p>ಇದರಿಂದಾಗಿ ಕೋಲ್ಕತ್ತದ ಈಸ್ಟ್ ಬೆಂಗಾಲ್ ತಂಡವು ಐಎಸ್ಎಲ್ ಸೇರ್ಪಡೆಗೆ ಅವಕಾಶ ಲಭಿಸಿದಂತಾಗಿದೆ.</p>.<p>ಬುಧವಾರ ಈಸ್ಟ್ ಬೆಂಗಾಲ್ ತಂಡದ ಪರ ಹಣ ಹೂಡಲು ಕೋಲ್ಕತ್ತ ಮೂಲದ ಶ್ರೀ ಸಿಮೆಂಟ್ಸ್ ಮುಂದೆ ಬಂದಿದೆ. ಈ ಕಂಪೆನಿಯು ಹೂಡಿಕೆ ಮಾಡುವಂತೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮನವೊಲಿಸಿದ್ದರು ಎಂದು ಹೇಳಲಾಗಿದೆ.</p>.<p>‘ಲೀಗ್ನಲ್ಲಿ ಇನ್ನೊಂದು ತಂಡದ ಸೇರ್ಪಡೆಗೆ ಅವಕಾಶ ನೀಡಲಾಗಿದೆ. ಅದಕ್ಕಾಗಿ ಬಿಡ್ ಸಲ್ಲಿಸಲು ಜಾಹೀರಾತು ನೀಡಲಾಗಿದೆ. 2020–2021ರ ಟೂರ್ನಿಯಲ್ಲಿ ಈ ತಂಡವು ಕಣಕ್ಕಿಳಿಯುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಆರು ನಗರಗಳಾದ ದೆಹಲಿ, ಲುಧಿಯಾನಾ, ಅಹಮದಾಬಾದ್, ಕೋಲ್ಕತ್ತ, ಸಿಲಿಗುರಿ ಮತ್ತು ಭೋಪಾಲ್ ನಿಂದ ಬಿಡ್ಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಲಾಗಿದೆ.</p>.<p>ಸೆಪ್ಟೆಂಬರ್ 7 ಮತ್ತು 8ರಂದು ಸಂಜೆ 5ರೊಳಗೆ ಇ ಮೇಲ್ ಮೂಲಕ ಬಿಡ್ ಸಲ್ಲಿಸಬೇಕು. ಮರುಪಾವತಿಸದ ಮತ್ತು ಮರುಹೊಂದಾಣಿಕೆ ಮಾಡಲು ಅವಕಾಶವಿಲ್ಲದ ₹5 ಲಕ್ಷ ಶುಲ್ಕ ಕಟ್ಟಬೇಕು ಎಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಒಂದು ಹೊಸ ಫುಟ್ಬಾಲ್ ತಂಡದ ಸೇರ್ಪಡೆಗಾಗಿ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಶುಕ್ರವಾರ ಬಿಡ್ ಆಹ್ವಾನಿಸಿದೆ.</p>.<p>ಇದರಿಂದಾಗಿ ಕೋಲ್ಕತ್ತದ ಈಸ್ಟ್ ಬೆಂಗಾಲ್ ತಂಡವು ಐಎಸ್ಎಲ್ ಸೇರ್ಪಡೆಗೆ ಅವಕಾಶ ಲಭಿಸಿದಂತಾಗಿದೆ.</p>.<p>ಬುಧವಾರ ಈಸ್ಟ್ ಬೆಂಗಾಲ್ ತಂಡದ ಪರ ಹಣ ಹೂಡಲು ಕೋಲ್ಕತ್ತ ಮೂಲದ ಶ್ರೀ ಸಿಮೆಂಟ್ಸ್ ಮುಂದೆ ಬಂದಿದೆ. ಈ ಕಂಪೆನಿಯು ಹೂಡಿಕೆ ಮಾಡುವಂತೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮನವೊಲಿಸಿದ್ದರು ಎಂದು ಹೇಳಲಾಗಿದೆ.</p>.<p>‘ಲೀಗ್ನಲ್ಲಿ ಇನ್ನೊಂದು ತಂಡದ ಸೇರ್ಪಡೆಗೆ ಅವಕಾಶ ನೀಡಲಾಗಿದೆ. ಅದಕ್ಕಾಗಿ ಬಿಡ್ ಸಲ್ಲಿಸಲು ಜಾಹೀರಾತು ನೀಡಲಾಗಿದೆ. 2020–2021ರ ಟೂರ್ನಿಯಲ್ಲಿ ಈ ತಂಡವು ಕಣಕ್ಕಿಳಿಯುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಆರು ನಗರಗಳಾದ ದೆಹಲಿ, ಲುಧಿಯಾನಾ, ಅಹಮದಾಬಾದ್, ಕೋಲ್ಕತ್ತ, ಸಿಲಿಗುರಿ ಮತ್ತು ಭೋಪಾಲ್ ನಿಂದ ಬಿಡ್ಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಲಾಗಿದೆ.</p>.<p>ಸೆಪ್ಟೆಂಬರ್ 7 ಮತ್ತು 8ರಂದು ಸಂಜೆ 5ರೊಳಗೆ ಇ ಮೇಲ್ ಮೂಲಕ ಬಿಡ್ ಸಲ್ಲಿಸಬೇಕು. ಮರುಪಾವತಿಸದ ಮತ್ತು ಮರುಹೊಂದಾಣಿಕೆ ಮಾಡಲು ಅವಕಾಶವಿಲ್ಲದ ₹5 ಲಕ್ಷ ಶುಲ್ಕ ಕಟ್ಟಬೇಕು ಎಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>