ಟಾಸ್ ಗೆದ್ದ ಕರ್ನಾಟಕದ ನಾಯಕ ಮಯಂಕ್ ಅಗರವಾಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಮಯಂಕ್ ಸೇರಿದಂತೆ ಐವರು ಬ್ಯಾಟರ್ಗಳಲ್ಲಿ ಕೇವಲ 59 ರನ್ಗಳಿಸಿದ್ದಾಗ ಔಟಾದರು. ಈ ಹೊತ್ತಿನಲ್ಲಿ ಶ್ರೇಯಸ್ (ಅಜೇಯ 48; 38ಎ, 4X4, 6X1) ಹಾಗೂ ಮನೋಜ್ ಬಾಂಢಗೆ (41; 23ಎ, 4X2, 4X6) ಆರನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಗಳಿಸಿದರು. ಇದರಿಂದಾಗಿ ತಂಡವು 20 ಓವರ್ಗಳಲ್ಲಿ 7ಕ್ಕೆ147 ರನ್ಗಳ ಗೌರವಯುತ ಮೊತ್ತ ಗಳಿಸಿತು.