ಕರ್ನಾಟಕವು ಮೊದಲ ಇನಿಂಗ್ಸ್ನಲ್ಲಿ ಪಡೆದಿದ್ದ 71 ರನ್ಗಳ ಲೆಕ್ಕವನ್ನು ಬುಧವಾರ ಸಂಜೆಯೇ ಚುಕ್ತಾ ಮಾಡಿದ್ದ ವಿದರ್ಭ ತಂಡವು ಎಡಗೈ ಸ್ಪಿನ್ನರ್ ಜೆ.ಸುಚಿತ್ (70ಕ್ಕೆ5) ಸ್ಪಿನ್ ಮೋಡಿಯ ನಡುವೆಯೂ 228 ರನ್ಗಳನ್ನು ಗಳಿಸಿತು. ಮೊದಲ ಇನಿಂಗ್ಸ್ನಲ್ಲಿಯೂ ಅರ್ಧಶತಕ ಹೊಡೆದಿದ್ದ ಕನ್ನಡದ ಹುಡುಗ ಗಣೇಶ್ ಸತೀಶ್ (79; 164ಎಸೆತ, 10ಬೌಂಡರಿ) ಎರಡನೇ ಇನಿಂಗ್ಸ್ನಲ್ಲಿಯೂ ಕರ್ನಾಟಕ ಬಳಗವನ್ನು ಕಾಡಿದರು. ಅವರು ಅಕ್ಷಯ್ ವಾಂಖೆಡೆ ( 51; 75ಎಸೆತ, 7ಬೌಂಡರಿ) ಅವರೊಂದಿಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 64 ರನ್ಗಳನ್ನು ಗಳಿಸಿದರು.