ಬೆಳಗಾವಿ: ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಆತಿಥೇಯ ಕರ್ನಾಟಕ ತಂಡ, ಇಲ್ಲಿ ನಡೆದ 19 ವರ್ಷದೊಳಗಿನವರ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 9 ವಿಕೆಟ್ ಅಂತದ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.
ಭಾನುವಾರ ಮೂರನೇ ದಿನದಾಟದ ಅಂತ್ಯಕ್ಕೆ ತಮಿಳುನಾಡು ಎರಡನೇ ಇನ್ನಿಂಗ್ಸ್ನಲ್ಲಿ 70.5 ಓವರ್ಗಳಲ್ಲಿ 302ಕ್ಕೆ ಆಲೌಟ್ ಆಗಿ, ಕರ್ನಾಟಕಕ್ಕೆ 11 ರನ್ಗಳ ಗುರಿ ನೀಡಿತ್ತು. ಕರ್ನಾಟಕ ತಂಡವು ಸೋಮವಾರ 1.1 ಓವರ್ಗಳಲ್ಲಿ 12 ರನ್ ಗಳಿಸಿ, ಗೆಲುವಿನ ನಗೆ ಬೀರಿತು.
ಸಂಕ್ಷಿಪ್ತ ಸ್ಕೋರು
ಮೊದಲ ಇನ್ನಿಂಗ್ಸ್
ತಮಿಳುನಾಡು : 54.5 ಓವರ್ಗಳಲ್ಲಿ 126;
ಕರ್ನಾಟಕ: 129.3 ಓವರ್ಗಳಲ್ಲಿ 418.
ಎರಡನೇ ಇನ್ನಿಂಗ್ಸ್
ತಮಿಳುನಾಡು: 70.5 ಓವರ್ಗಳಲ್ಲಿ 302.
ಕರ್ನಾಟಕ: 1.1 ಓವರ್ಗಳಲ್ಲಿ 12(ಪ್ರಖರ್ ಚತುರ್ವೇದಿ 4, ಕಾರ್ತಿಕ್ ಎಸ್.ಯು ಔಟಾಗದೆ 4, ಹರ್ಷಿಲ್ ಧರ್ಮಾನಿ ಔಟಾಗದೆ 4;ಬಿ.ಸಚಿನ್ 8ಕ್ಕೆ1)
ಶಿವಮೊಗ್ಗದಲ್ಲಿ ಜ.12ರಿಂದ 15ರವರೆಗೆ ನಡೆಯಲಿರುವ ಫೈನಲ್ನಲ್ಲಿ ಕರ್ನಾಟಕ–ಮಹಾರಾಷ್ಟ್ರ ತಂಡಗಳು ಸೆಣಸಲಿವೆ.