<p><strong>ವಡೋದರಾ</strong>: ಈ ಸಲದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಹರಿಯಾಣ ಮುಖಾಮುಖಿಯಾಗಲಿದೆ. </p>.<p>ಭಾನುವಾರ ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ಫೈನಲ್ನಲ್ಲಿ ಹರಿಯಾಣ ತಂಡವು 2 ವಿಕೆಟ್ಗಳಿಂದ ಗುಜರಾತ್ ಎದುರು ಜಯಿಸಿತು. </p>.<p>ಟಾಸ್ ಗೆದ್ದ ಹರಿಯಾಣ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನುಜ್ ಟಕ್ರಾಲ್ (39ಕ್ಕೆ3) ಮತ್ತು ನಿಶಾಂತ್ ಸಿಂಧು (40ಕ್ಕೆ3) ಬೌಲಿಂಗ್ ಮುಂದೆ ಕುಸಿದ ಗುಜರಾತ್ 45.2 ಓವರ್ಗಳಲ್ಲಿ 196 ರನ್ಗಳ ಸಾಧಾರಣ ಮೊತ್ತ ಗಳಿಸಿತು. ತಂಡವು ಒಂದು ಹಂತದಲ್ಲಿ 84 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಆದರೆ, ಕೆಳಕ್ರಮಾಂಕದ ಬ್ಯಾಟರ್ ಹೇಮಂಗ್ ಪಟೇಲ್ (54; 62ಎ, 4X2, 6X5) ಅರ್ಧಶತಕ ಗಳಿಸಿ ಮೊತ್ತ ಹೆಚ್ಚಿಸುವಲ್ಲಿ ನೆರವಾದರು. </p>.<p>ಗುರಿ ಬೆನ್ನತ್ತಿದ ಹರಿಯಾಣ ತಂಡಕ್ಕೆ ಜಯ ಸುಲಭವಾಗಿ ದಕ್ಕಲಿಲ್ಲ. ಸ್ಪಿನ್ನರ್ ರವಿ ಬಿಷ್ಣೋಯಿ (46ಕ್ಕೆ4) ಅವರು ತೀವ್ರ ಪ್ರತಿರೋಧ ಒಡ್ಡಿದರು. ಆದರೆ ಹರಿಯಾಣದ ಹಿಮಾಂಶು ರಾಣಾ (66; 89ಎ, 4X10) ಅವರ ಬ್ಯಾಟಿಂಗ್ ಬಲದಿಂದ 44.2 ಓವರ್ಗಳಲ್ಲಿ 8 ವಿಕೆಟ್ಗಳಿಗೆ 201 ರನ್ ಗಳಿಸಿ ಗೆದ್ದಿತು. </p>.<p>ಸಂಕ್ಷಿಪ್ತ ಸ್ಕೋರು: ಗುಜರಾತ್: 45.2 ಓವರ್ಗಳಲ್ಲಿ 196 (ಆರ್ಯಾ ದೇಸಾಯಿ 23, ಊರ್ವಿಲ್ ಪಟೇಲ್ 23, ಚಿಂತನ್ ಗಜ 32, ಸೌರವ್ ಚೌಹಾಣ್ 23, ಹೆಮಂಗ್ ಪಟೇಲ್ 54, ಅನ್ಷುಲ್ ಕಾಂಭೋಜ್ 36ಕ್ಕೆ2, ಅನುಜ್ ಟಕ್ರಾಲ್ 39ಕ್ಕೆ3, ನಿಶಾಂತ್ ಸಿಂಧು 40ಕ್ಕೆ3) ಹರಿಯಾಣ: 44.2 ಓವರ್ಗಳಲ್ಲಿ 8 ವಿಕೆಟ್ಗಳಿಗೆ 201 (ಅರ್ಷ ರಂಗಾ 25, ಹಿಮಾಂಶು ರಾಣಾ 66, ಅಂಕಿತ್ ಕುಮಾರ್ 20, ಪಾರ್ಥ ವತ್ಸ 38, ನಿಶಾಂತ್ ಸಿಂಧು 21, ಅರ್ಜನ್ ನಾಗವಸ್ವಾಲ್ಲಾ 34ಕ್ಕೆ2, ರವಿ ಬಿಷ್ಣೋಯಿ 46ಕ್ಕೆ4) ಫಲಿತಾಂಶ: ಹರಿಯಾಣ ತಂಡಕ್ಕೆ 2 ವಿಕೆಟ್ ಜಯ. </p>.<p>ಸೆಮಿಫೈನಲ್ ಪಂದ್ಯಗಳು</p>.<p>ಹರಿಯಾಣ–ಕರ್ನಾಟಕ (ಜ.15)</p>.<p>ವಿದರ್ಭ–ಮಹಾರಾಷ್ಟ್ರ (ಜ.16)</p>.<p><strong>ಕರುಣ್ ನಾಯರ್ ಐದನೇ ಶತಕ</strong></p><p>ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿರುವ ಬೆಂಗಳೂರಿನ ಕರುಣ್ ನಾಯರ್ ಅವರು ಈ ಸಲದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಐದನೇ ಶತಕ ದಾಖಲಿಸಿದರು. ಮೋತಿಭಾಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಕರುಣ್ (ಅಜೇಯ 122; 82ಎ 4X13 6X5) ಮತ್ತು ಧ್ರುವ ಶೋರೆ (ಅಜೇಯ 118; 131ಎ 4X10 6X3) ಅವರಿಬ್ಬರ ದ್ವಿಶತಕದ ಜೊತೆಯಾಟದ ಬಲದಿಂದ ವಿದರ್ಭ ತಂಡವು 9 ವಿಕೆಟ್ಗಳಿಂದ ರಾಜಸ್ಥಾನ ವಿರುದ್ಧ ಗೆದ್ದಿತು. ಸೆಮಿಫೈನಲ್ನಲ್ಲಿ ವಿದರ್ಭ ತಂಡವು ಮಹಾರಾಷ್ಟ್ರ ಎದುರು ಆಡಲಿದೆ. ಟಾಸ್ ಗೆದ್ದ ವಿದರ್ಭ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶುಭಂ ಗರ್ವಾಲ್ (59; 59ಎ 4X6 6X4) ಮತ್ತು ಕಾರ್ತಿಕ್ ಶರ್ಮಾ (62; 61ಎ 4X2 6X4) ಅವರ ಅರ್ಧಶತಕಗಳ ಬಲದಿಂದ ರಾಜಸ್ಥಾನ ತಂಡವು 50 ಓವರ್ಗಳಲ್ಲಿ 8 ವಿಕೆಟ್ಗಳಿಗೆ 291 ರನ್ ಗಳಿಸಿತು. ಅದಕ್ಕುತ್ತರವಾಗಿ ವಿದರ್ಭ ತಂಡವು 43.3 ಓವರ್ಗಳಲ್ಲಿ 1 ವಿಕೆಟ್ಗೆ 292 ರನ್ ಗಳಿಸಿ ಜಯಿಸಿತು. ಈ ಟೂರ್ನಿಯಲ್ಲಿ ಕರುಣ್ 7 ಪಂದ್ಯಗಳಿಂದ ಒಟ್ಟು 664 ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ (619ರನ್) ನಾಲ್ಕು ಶತಕ ಗಳಿಸಿದ್ದಾರೆ. ಅವರನ್ನು ಕರುಣ್ ಹಿಂದಿಕ್ಕಿದರು. ಸಂಕ್ಷಿಪ್ತ ಸ್ಕೋರು: ರಾಜಸ್ಥಾನ: 50 ಓವರ್ಗಳಲ್ಲಿ 8ಕ್ಕೆ 291 (ಮಹಿಪಾಲ್ ಲೊಮ್ರೊರ್ 32 ದೀಪಕ್ ಹೂಡಾ 45 ಶುಭಂ ಗರ್ವಾಲ್ 59 ಕಾರ್ತಿಕ್ ಶರ್ಮಾ 62 ಸಂಪ್ರೀತ್ ಜೋಶಿ 23 ದೀಪಕ್ ಚಾಹರ್ 31 ಯಶ್ ಠಾಕೂರ್ 39ಕ್ಕೆ4) ವಿದರ್ಭ: 43.3 ಓವರ್ಗಳಲ್ಲಿ 1 ವಿಕಟ್ಗೆ 292 (ಧ್ರುವ ಶೋರೆ ಔಟಾಗದೇ 118 ಯಶ್ ರಾಥೋಡ್ 39 ಕರುಣ್ ನಾಯರ್ ಔಟಾಗದೇ 122) ಫಲಿತಾಂಶ: ವಿದರ್ಭ ತಂಡಕ್ಕೆ 9 ವಿಕೆಟ್ಗಳ ಜಯ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡೋದರಾ</strong>: ಈ ಸಲದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಹರಿಯಾಣ ಮುಖಾಮುಖಿಯಾಗಲಿದೆ. </p>.<p>ಭಾನುವಾರ ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ಫೈನಲ್ನಲ್ಲಿ ಹರಿಯಾಣ ತಂಡವು 2 ವಿಕೆಟ್ಗಳಿಂದ ಗುಜರಾತ್ ಎದುರು ಜಯಿಸಿತು. </p>.<p>ಟಾಸ್ ಗೆದ್ದ ಹರಿಯಾಣ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನುಜ್ ಟಕ್ರಾಲ್ (39ಕ್ಕೆ3) ಮತ್ತು ನಿಶಾಂತ್ ಸಿಂಧು (40ಕ್ಕೆ3) ಬೌಲಿಂಗ್ ಮುಂದೆ ಕುಸಿದ ಗುಜರಾತ್ 45.2 ಓವರ್ಗಳಲ್ಲಿ 196 ರನ್ಗಳ ಸಾಧಾರಣ ಮೊತ್ತ ಗಳಿಸಿತು. ತಂಡವು ಒಂದು ಹಂತದಲ್ಲಿ 84 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಆದರೆ, ಕೆಳಕ್ರಮಾಂಕದ ಬ್ಯಾಟರ್ ಹೇಮಂಗ್ ಪಟೇಲ್ (54; 62ಎ, 4X2, 6X5) ಅರ್ಧಶತಕ ಗಳಿಸಿ ಮೊತ್ತ ಹೆಚ್ಚಿಸುವಲ್ಲಿ ನೆರವಾದರು. </p>.<p>ಗುರಿ ಬೆನ್ನತ್ತಿದ ಹರಿಯಾಣ ತಂಡಕ್ಕೆ ಜಯ ಸುಲಭವಾಗಿ ದಕ್ಕಲಿಲ್ಲ. ಸ್ಪಿನ್ನರ್ ರವಿ ಬಿಷ್ಣೋಯಿ (46ಕ್ಕೆ4) ಅವರು ತೀವ್ರ ಪ್ರತಿರೋಧ ಒಡ್ಡಿದರು. ಆದರೆ ಹರಿಯಾಣದ ಹಿಮಾಂಶು ರಾಣಾ (66; 89ಎ, 4X10) ಅವರ ಬ್ಯಾಟಿಂಗ್ ಬಲದಿಂದ 44.2 ಓವರ್ಗಳಲ್ಲಿ 8 ವಿಕೆಟ್ಗಳಿಗೆ 201 ರನ್ ಗಳಿಸಿ ಗೆದ್ದಿತು. </p>.<p>ಸಂಕ್ಷಿಪ್ತ ಸ್ಕೋರು: ಗುಜರಾತ್: 45.2 ಓವರ್ಗಳಲ್ಲಿ 196 (ಆರ್ಯಾ ದೇಸಾಯಿ 23, ಊರ್ವಿಲ್ ಪಟೇಲ್ 23, ಚಿಂತನ್ ಗಜ 32, ಸೌರವ್ ಚೌಹಾಣ್ 23, ಹೆಮಂಗ್ ಪಟೇಲ್ 54, ಅನ್ಷುಲ್ ಕಾಂಭೋಜ್ 36ಕ್ಕೆ2, ಅನುಜ್ ಟಕ್ರಾಲ್ 39ಕ್ಕೆ3, ನಿಶಾಂತ್ ಸಿಂಧು 40ಕ್ಕೆ3) ಹರಿಯಾಣ: 44.2 ಓವರ್ಗಳಲ್ಲಿ 8 ವಿಕೆಟ್ಗಳಿಗೆ 201 (ಅರ್ಷ ರಂಗಾ 25, ಹಿಮಾಂಶು ರಾಣಾ 66, ಅಂಕಿತ್ ಕುಮಾರ್ 20, ಪಾರ್ಥ ವತ್ಸ 38, ನಿಶಾಂತ್ ಸಿಂಧು 21, ಅರ್ಜನ್ ನಾಗವಸ್ವಾಲ್ಲಾ 34ಕ್ಕೆ2, ರವಿ ಬಿಷ್ಣೋಯಿ 46ಕ್ಕೆ4) ಫಲಿತಾಂಶ: ಹರಿಯಾಣ ತಂಡಕ್ಕೆ 2 ವಿಕೆಟ್ ಜಯ. </p>.<p>ಸೆಮಿಫೈನಲ್ ಪಂದ್ಯಗಳು</p>.<p>ಹರಿಯಾಣ–ಕರ್ನಾಟಕ (ಜ.15)</p>.<p>ವಿದರ್ಭ–ಮಹಾರಾಷ್ಟ್ರ (ಜ.16)</p>.<p><strong>ಕರುಣ್ ನಾಯರ್ ಐದನೇ ಶತಕ</strong></p><p>ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿರುವ ಬೆಂಗಳೂರಿನ ಕರುಣ್ ನಾಯರ್ ಅವರು ಈ ಸಲದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಐದನೇ ಶತಕ ದಾಖಲಿಸಿದರು. ಮೋತಿಭಾಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಕರುಣ್ (ಅಜೇಯ 122; 82ಎ 4X13 6X5) ಮತ್ತು ಧ್ರುವ ಶೋರೆ (ಅಜೇಯ 118; 131ಎ 4X10 6X3) ಅವರಿಬ್ಬರ ದ್ವಿಶತಕದ ಜೊತೆಯಾಟದ ಬಲದಿಂದ ವಿದರ್ಭ ತಂಡವು 9 ವಿಕೆಟ್ಗಳಿಂದ ರಾಜಸ್ಥಾನ ವಿರುದ್ಧ ಗೆದ್ದಿತು. ಸೆಮಿಫೈನಲ್ನಲ್ಲಿ ವಿದರ್ಭ ತಂಡವು ಮಹಾರಾಷ್ಟ್ರ ಎದುರು ಆಡಲಿದೆ. ಟಾಸ್ ಗೆದ್ದ ವಿದರ್ಭ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶುಭಂ ಗರ್ವಾಲ್ (59; 59ಎ 4X6 6X4) ಮತ್ತು ಕಾರ್ತಿಕ್ ಶರ್ಮಾ (62; 61ಎ 4X2 6X4) ಅವರ ಅರ್ಧಶತಕಗಳ ಬಲದಿಂದ ರಾಜಸ್ಥಾನ ತಂಡವು 50 ಓವರ್ಗಳಲ್ಲಿ 8 ವಿಕೆಟ್ಗಳಿಗೆ 291 ರನ್ ಗಳಿಸಿತು. ಅದಕ್ಕುತ್ತರವಾಗಿ ವಿದರ್ಭ ತಂಡವು 43.3 ಓವರ್ಗಳಲ್ಲಿ 1 ವಿಕೆಟ್ಗೆ 292 ರನ್ ಗಳಿಸಿ ಜಯಿಸಿತು. ಈ ಟೂರ್ನಿಯಲ್ಲಿ ಕರುಣ್ 7 ಪಂದ್ಯಗಳಿಂದ ಒಟ್ಟು 664 ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ (619ರನ್) ನಾಲ್ಕು ಶತಕ ಗಳಿಸಿದ್ದಾರೆ. ಅವರನ್ನು ಕರುಣ್ ಹಿಂದಿಕ್ಕಿದರು. ಸಂಕ್ಷಿಪ್ತ ಸ್ಕೋರು: ರಾಜಸ್ಥಾನ: 50 ಓವರ್ಗಳಲ್ಲಿ 8ಕ್ಕೆ 291 (ಮಹಿಪಾಲ್ ಲೊಮ್ರೊರ್ 32 ದೀಪಕ್ ಹೂಡಾ 45 ಶುಭಂ ಗರ್ವಾಲ್ 59 ಕಾರ್ತಿಕ್ ಶರ್ಮಾ 62 ಸಂಪ್ರೀತ್ ಜೋಶಿ 23 ದೀಪಕ್ ಚಾಹರ್ 31 ಯಶ್ ಠಾಕೂರ್ 39ಕ್ಕೆ4) ವಿದರ್ಭ: 43.3 ಓವರ್ಗಳಲ್ಲಿ 1 ವಿಕಟ್ಗೆ 292 (ಧ್ರುವ ಶೋರೆ ಔಟಾಗದೇ 118 ಯಶ್ ರಾಥೋಡ್ 39 ಕರುಣ್ ನಾಯರ್ ಔಟಾಗದೇ 122) ಫಲಿತಾಂಶ: ವಿದರ್ಭ ತಂಡಕ್ಕೆ 9 ವಿಕೆಟ್ಗಳ ಜಯ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>