<p><strong>ಲಖನೌ</strong>: ಮುಂಬೈ ಕ್ರಿಕೆಟ್ ತಂಡವು 27 ವರ್ಷಗಳ ನಂತರ ಇರಾನಿ ಕಪ್ ಜಯಿಸಿತು. ತಂಡವು 15ನೇ ಬಾರಿ ಈ ಸಾಧನೆ ಮಾಡಿದೆ. </p>.<p>ಶನಿವಾರ ಮುಕ್ತಾಯವಾದ ಪಂದ್ಯದಲ್ಲಿ ಮುಂಬೈ ತಂಡವು ಭಾರತ ಇತರೆ ತಂಡದ ಎದುರು ಡ್ರಾ ಸಾಧಿಸುವಲ್ಲಿ ಸಫಲವಾಯಿತು. ಮೊದಲ ಇನಿಂಗ್ಸ್ನಲ್ಲಿ ಗಳಿಸಿದ್ದ ಮುನ್ನಡೆಯ ಆಧಾರದ ಮೇಲೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮುಂಬೈ ತಂಡವು ಕಳೆದ ಋತುವಿನಲ್ಲಿ ರಣಜಿ ಚಾಂಪಿಯನ್ ಕೂಡ ಆಗಿತ್ತು. </p>.<p>ಎಂಟನೇ ಕ್ರಮಾಂಕದ ಬ್ಯಾಟರ್ ತನುಷ್ ಕೋಟ್ಯಾನ್ (ಅಜೇಯ 114; 150ಎ) ಮತ್ತು ಹತ್ತನೇ ಕ್ರಮಾಂಕದ ಮೋಹಿತ್ ಅವಸ್ತಿ (ಔಟಾಗದೆ 51; 93ಎ) ಅವರು ಮುರಿಯದ 9ನೇ ವಿಕೆಟ್ ಜೊತೆಯಾಟದಲ್ಲಿ 162 ರನ್ ಸೇರಿಸಿದರು. ಇದರಿಂದಾಗಿ ತಂಡವು ಯಾವುದೇ ಒತ್ತಡಕ್ಕೊಳಗಾಗದೇ ಪ್ರಶಸ್ತಿ ಜಯಿಸುವಂತಾಯಿತು. </p>.<p>ಪಂದ್ಯದ ನಾಲ್ಕನೇ ದಿನದಾಟದ (ಶುಕ್ರವಾರ) ಅಂತ್ಯಕ್ಕೆ ಮುಂಬೈ ತಂಡವು 6 ವಿಕೆಟ್ಗಳಿಗೆ 153 ರನ್ ಗಳಿಸಿತ್ತು. ಕೊನೆಯ ದಿನದಾಟದ ಬೆಳಿಗ್ಗೆಯೇ ಉಳಿದ ವಿಕೆಟ್ಗಳನ್ನು ಕಬಳಿಸಿದ ನಂತರ ಲಭಿಸುವ ಗುರಿಯನ್ನು ಬೆನ್ನಟ್ಟಿ ಜಯಿಸುವ ಭಾರತ ಇತರೆ ತಂಡದ ಯೋಚನೆ ಫಲಿಸಲಿಲ್ಲ. </p>.<p>ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದ ತನುಷ್ ಎರಡನೇಯದ್ದರಲ್ಲಿಯೂ ಮಿಂಚಿದರು. ಅವರೊಂದಿಗೆ ಮೋಹಿತ್ ಕೂಡ ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ತೋರಿಸಿದರು. ಇದರಿಂದಾಗಿ ತಂಡವು ಒಟ್ಟು 450 ರನ್ಗಳ ಮುನ್ನಡೆ ಸಾಧಿಸಿತು. ಮಧ್ಯಾಹ್ನದ ನಂತರ ಈ ಗುರಿಯನ್ನು ಬೆನ್ನತ್ತಿ ಜಯಿಸುವುದು ಅಸಾಧ್ಯ ಎಂಬುದನ್ನು ಅರಿತ ಭಾರತ ಇತರೆ ತಂಡದ ನಾಯಕ ಋತುರಾಜ್ ಗಾಯಕವಾಡ ಅವರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿ, ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಅವರ ಕೈಕುಲುಕಿದರು. </p>.<p><strong>ಸಂಕ್ಷಿಪ್ತ ಸ್ಕೋರು:</strong> </p><p>ಮೊದಲ ಇನಿಂಗ್ಸ್: ಮುಂಬೈ: 141 ಓವರ್ಗಳಲ್ಲಿ 537. ಭಾರತ ಇತರೆ: 110 ಓವರ್ಗಳಲ್ಲಿ 416. ಎರಡನೇ ಇನಿಂಗ್ಸ್: ಮುಂಬೈ: 78 ಓವರ್ಗಳಲ್ಲಿ 8 ವಿಕೆಟ್ಗಳಿಗೆ 329 (ಸರ್ಫರಾಜ್ ಖಾನ್ 17, ತನುಷ್ ಕೋಟ್ಯಾನ್ ಔಟಾಗದೆ 114, ಮೋಹಿತ್ ಅವಸ್ತಿ ಔಟಾಗದೆ 51, ಸಾರಾಂಶ್ ಜೈನ್ 121ಕ್ಕೆ6, ಮಾನವ್ ಸುತಾರ್ 78ಕ್ಕೆ2) ಫಲಿತಾಂಶ: ಡ್ರಾ. ಪಂದ್ಯದ ಆಟಗಾರ: ಸರ್ಫರಾಜ್ ಖಾನ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಮುಂಬೈ ಕ್ರಿಕೆಟ್ ತಂಡವು 27 ವರ್ಷಗಳ ನಂತರ ಇರಾನಿ ಕಪ್ ಜಯಿಸಿತು. ತಂಡವು 15ನೇ ಬಾರಿ ಈ ಸಾಧನೆ ಮಾಡಿದೆ. </p>.<p>ಶನಿವಾರ ಮುಕ್ತಾಯವಾದ ಪಂದ್ಯದಲ್ಲಿ ಮುಂಬೈ ತಂಡವು ಭಾರತ ಇತರೆ ತಂಡದ ಎದುರು ಡ್ರಾ ಸಾಧಿಸುವಲ್ಲಿ ಸಫಲವಾಯಿತು. ಮೊದಲ ಇನಿಂಗ್ಸ್ನಲ್ಲಿ ಗಳಿಸಿದ್ದ ಮುನ್ನಡೆಯ ಆಧಾರದ ಮೇಲೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮುಂಬೈ ತಂಡವು ಕಳೆದ ಋತುವಿನಲ್ಲಿ ರಣಜಿ ಚಾಂಪಿಯನ್ ಕೂಡ ಆಗಿತ್ತು. </p>.<p>ಎಂಟನೇ ಕ್ರಮಾಂಕದ ಬ್ಯಾಟರ್ ತನುಷ್ ಕೋಟ್ಯಾನ್ (ಅಜೇಯ 114; 150ಎ) ಮತ್ತು ಹತ್ತನೇ ಕ್ರಮಾಂಕದ ಮೋಹಿತ್ ಅವಸ್ತಿ (ಔಟಾಗದೆ 51; 93ಎ) ಅವರು ಮುರಿಯದ 9ನೇ ವಿಕೆಟ್ ಜೊತೆಯಾಟದಲ್ಲಿ 162 ರನ್ ಸೇರಿಸಿದರು. ಇದರಿಂದಾಗಿ ತಂಡವು ಯಾವುದೇ ಒತ್ತಡಕ್ಕೊಳಗಾಗದೇ ಪ್ರಶಸ್ತಿ ಜಯಿಸುವಂತಾಯಿತು. </p>.<p>ಪಂದ್ಯದ ನಾಲ್ಕನೇ ದಿನದಾಟದ (ಶುಕ್ರವಾರ) ಅಂತ್ಯಕ್ಕೆ ಮುಂಬೈ ತಂಡವು 6 ವಿಕೆಟ್ಗಳಿಗೆ 153 ರನ್ ಗಳಿಸಿತ್ತು. ಕೊನೆಯ ದಿನದಾಟದ ಬೆಳಿಗ್ಗೆಯೇ ಉಳಿದ ವಿಕೆಟ್ಗಳನ್ನು ಕಬಳಿಸಿದ ನಂತರ ಲಭಿಸುವ ಗುರಿಯನ್ನು ಬೆನ್ನಟ್ಟಿ ಜಯಿಸುವ ಭಾರತ ಇತರೆ ತಂಡದ ಯೋಚನೆ ಫಲಿಸಲಿಲ್ಲ. </p>.<p>ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದ ತನುಷ್ ಎರಡನೇಯದ್ದರಲ್ಲಿಯೂ ಮಿಂಚಿದರು. ಅವರೊಂದಿಗೆ ಮೋಹಿತ್ ಕೂಡ ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ತೋರಿಸಿದರು. ಇದರಿಂದಾಗಿ ತಂಡವು ಒಟ್ಟು 450 ರನ್ಗಳ ಮುನ್ನಡೆ ಸಾಧಿಸಿತು. ಮಧ್ಯಾಹ್ನದ ನಂತರ ಈ ಗುರಿಯನ್ನು ಬೆನ್ನತ್ತಿ ಜಯಿಸುವುದು ಅಸಾಧ್ಯ ಎಂಬುದನ್ನು ಅರಿತ ಭಾರತ ಇತರೆ ತಂಡದ ನಾಯಕ ಋತುರಾಜ್ ಗಾಯಕವಾಡ ಅವರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿ, ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಅವರ ಕೈಕುಲುಕಿದರು. </p>.<p><strong>ಸಂಕ್ಷಿಪ್ತ ಸ್ಕೋರು:</strong> </p><p>ಮೊದಲ ಇನಿಂಗ್ಸ್: ಮುಂಬೈ: 141 ಓವರ್ಗಳಲ್ಲಿ 537. ಭಾರತ ಇತರೆ: 110 ಓವರ್ಗಳಲ್ಲಿ 416. ಎರಡನೇ ಇನಿಂಗ್ಸ್: ಮುಂಬೈ: 78 ಓವರ್ಗಳಲ್ಲಿ 8 ವಿಕೆಟ್ಗಳಿಗೆ 329 (ಸರ್ಫರಾಜ್ ಖಾನ್ 17, ತನುಷ್ ಕೋಟ್ಯಾನ್ ಔಟಾಗದೆ 114, ಮೋಹಿತ್ ಅವಸ್ತಿ ಔಟಾಗದೆ 51, ಸಾರಾಂಶ್ ಜೈನ್ 121ಕ್ಕೆ6, ಮಾನವ್ ಸುತಾರ್ 78ಕ್ಕೆ2) ಫಲಿತಾಂಶ: ಡ್ರಾ. ಪಂದ್ಯದ ಆಟಗಾರ: ಸರ್ಫರಾಜ್ ಖಾನ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>