ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಯದ್ ಮುಷ್ತಾಕ್‌ ಅಲಿ ಟ್ರೋಫಿಗೆ ಸಂಭಾವ್ಯರ ತಂಡ: ಮನ್ವಂತ್‌, ಸ್ಮರಣ್‌ಗೆ ಅವಕಾಶ

Published 4 ಸೆಪ್ಟೆಂಬರ್ 2023, 15:49 IST
Last Updated 4 ಸೆಪ್ಟೆಂಬರ್ 2023, 15:49 IST
ಅಕ್ಷರ ಗಾತ್ರ

ಬೆಂಗಳೂರು: ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ 28 ಸಂಭಾವ್ಯ ಆಟಗಾರರ ಕರ್ನಾಟಕ ತಂಡವನ್ನು ಕೆಎಸ್‌ಸಿಎ ಆಯ್ಕೆ ಸಮಿತಿ ಸೋಮವಾರ ಪ್ರಕಟಿಸಿತು.

ಈಚೆಗೆ ನಡೆದ ಮಹಾರಾಜ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಗಮನ ಸೆಳೆದಿದ್ದ ಮನ್ವಂತ್‌ ಕುಮಾರ್, ಆರ್‌.ಸ್ಮರಣ್, ಸಿ.ಎ.ಕಾರ್ತಿಕ್ ಮತ್ತು ಮೋನಿಶ್ ರೆಡ್ಡಿ ಒಳಗೊಂಡಂತೆ ಕೆಲವು ಯುವ ಆಟಗಾರರು ಸೀನಿಯರ್‌ ವಿಭಾಗದ ಸಂಭಾವ್ಯರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿ ಅ.16 ರಿಂದ ನಡೆಯಲಿದೆ. ಡೆಹ್ರಾಡೂನ್‌ನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ ಸೆಣಸಲಿದೆ.

ಅ.28 ರಿಂದ ಆರಂಭವಾಗಲಿರುವ 23 ವರ್ಷದೊಳಗಿನ ಟೂರ್ನಿಗೆ 26 ಸದಸ್ಯರ ಸಂಭಾವ್ಯರ ತಂಡವನ್ನೂ ಇದೇ ವೇಳೆ ಪ್ರಕಟಿಸಲಾಯಿತು.

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಗೆ ಸಂಭಾವ್ಯರ ತಂಡ: ಕೆ.ಎಲ್‌.ರಾಹುಲ್, ಮಯಂಕ್‌ ಅಗರವಾಲ್, ಪ್ರಸಿದ್ಧ ಕೃಷ್ಣ, ಆರ್‌.ಸಮರ್ಥ್, ದೇವದತ್ತ ಪಡಿಕ್ಕಲ್, ಮನೀಷ್‌ ಪಾಂಡೆ, ಅಭಿನವ್‌ ಮನೋಹರ್, ನಿಕಿನ್‌ ಜೋಸ್, ಬಿ.ಆರ್‌.ಶರತ್, ಕೆ.ಗೌತಮ್, ಶುಭಾಂಗ್‌ ಹೆಗ್ಡೆ, ವೈಶಾಖ್ ವಿಜಯಕುಮಾರ್, ವಿದ್ವತ್‌ ಕಾವೇರಪ್ಪ, ವಿ.ಕೌಶಿಕ್, ಮನ್ವಂತ್‌ ಕುಮಾರ್, ಮೋನಿಶ್ ರೆಡ್ಡಿ, ಎಲ್‌.ಆರ್‌.ಚೇತನ್, ಕೆ.ಎಲ್‌.ಶ್ರೀಜಿತ್, ಲವನೀತ್‌ ಸಿಸೋಡಿಯ, ಆರ್‌.ಸ್ಮರಣ್, ಅಭಿಲಾಷ್‌ ಶೆಟ್ಟಿ, ಸಿ.ಎ.ಕಾರ್ತಿಕ್, ಜೆ.ಸುಚಿತ್, ಪ್ರಣವ್‌ ಭಾಟಿಯಾ, ಮನೋಜ್‌ ಭಾಂಡಗೆ, ರಿಷಿ ಬೋಪಣ್ಣ, ಪ್ರವೀಣ್‌ ದುಬೆ, ಎಂ.ವೆಂಕಟೇಶ್. ಕೋಚ್‌: ‍ಪಿ.ವಿ.ಶಶಿಕಾಂತ್

23 ವರ್ಷದೊಳಗಿನ ಸಂಭಾವ್ಯರ ತಂಡ: ವಿಶಾಲ್‌ ಒಣತ್, ರೋಹನ್‌ ಪಾಟೀಲ್, ತಿಪ್ಪಾ ರೆಡ್ಡಿ, ಕೆ.ವಿ.ಅನೀಶ್, ಬಿ.ವಿಜಯರಾಜ್, ಮೆಕ್‌ನೀಲ್‌ ನೊರೊನಾ, ಲೋಚನ್‌ ಗೌಡ, ಆರ್‌.ಸ್ಮರಣ್, ಅನೀಶ್ವರ್‌ ಗೌತಮ್, ಅಕ್ಷನ್‌ ರಾವ್, ಎಸ್‌.ಪಿ.ಶ್ರೇಯಸ್, ಕೃತಿಕ್‌ ಕೃಷ್ಣ, ಆಶೀಶ್‌ ಮಹೇಶ್, ಶುಭಾಂಗ್‌ ಹೆಗ್ಡೆ, ಎ.ಸಿ.ರೋಹಿತ್‌ ಕುಮಾರ್, ಕೆ.ಶಶಿಕುಮಾರ್, ಮೊಹ್ಸಿನ್‌ ಖಾನ್, ನೇಥನ್‌ ಡಿಮೆಲೊ, ಪರಾಸ್ ಗುರುಬಕ್ಷ್‌ ಆರ್ಯ, ಮನ್ವಂತ್‌ ಕುಮಾರ್, ಯಶೋವರ್ಧನ್ ಪರಂತಪ್, ರಾಜ್‌ವೀರ್ ವಾಧ್ವಾ, ವಿದ್ಯಾಧರ್‌ ಪಾಟೀಲ್, ಎಲ್‌.ಆರ್‌.ಕುಮಾರ್, ಮೋನಿಶ್‌ ರೆಡ್ಡಿ, ಭೀಮ ರಾವ್. ಕೋಚ್: ರಾಜಶೇಖರ್ ಶಾನಭಾಳ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT