ಕೋಲ್ಕತ್ತ: ಬಂಗಾಳ ರಾಜ್ಯ ಕ್ರಿಕೆಟ್ ತಂಡದ ಆಟಗಾರರಿಗೆ ಮಂಗಳವಾರ ಹಿರಿಯ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ಆನ್ಲೈನ್ನಲ್ಲಿ ಪಾಠ ಮಾಡಿದರು.
ಬಂಗಾಳ ತಂಡದ ಕೋಚ್ ಅರುಣ ಲಾಲ್, ಮ್ಯಾನೇಜರ್ ಜಾಯದೀಪ್ ಮುಖರ್ಜಿ,23 ವರ್ಷದೊಳಗಿನವರ ತಂಡದ ಕೋಚ್ ಸೌರಶಿಶ್ ಲಹಿರಿ, ಆಟಗಾರ ಅಭಿಷೇಕ್ ರಾಮನ್, ಖಾಜಿ ಜುನೈರ್ ಶಫಿ ಮತ್ತಿತರರು ಹಾಜರಿದ್ದರು.
‘ಲಕ್ಷ್ಮಣ್ ಅವರಿಂದ ಬಹಳ ಉಪಯುಕ್ತವಾದ ಸಲಹೆಗಳು ದೊರೆತವು. ಅವರ ಅನುಭವದ ಸಲಹೆಗಳು ನಮ್ಮ ಆಟದ ಕೌಶಲ್ಯಗಳನ್ನು ಹೆಚ್ಚಿಸಲು ಸಹಕಾರಿಯಾಗಲಿವೆ. ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದರು’ ಎಂದು ರಾಮನ್ ತಿಳಿಸಿದರು.