ನವದೆಹಲಿ: ಭಾರತ ತಂಡದ ಮಾಜಿ ಸ್ಪಿನ್ನರ್ ನಿಖಿಲ್ ಚೋಪ್ರಾ, ದೆಹಲಿಯ ಬ್ಯಾಟರ್ ಮಿಥುನ್ ಮನ್ಹಾಸ್ ಮತ್ತು ಹಾಲಿ ಜೂನಿಯರ್ ಆಯ್ಕೆಗಾರ ಕೃಷ್ಣ ಮೋಹನ್ ಅವರು ಬಿಸಿಸಿಐ ಸೀನಿಯರ್ ತಂಡದ ಆಯ್ಕೆಗಾರ ಸ್ಥಾನದ ಪೈಪೋಟಿಯಲ್ಲಿದ್ದಾರೆ.
ಐವರು ಸದಸ್ಯರ ಆಯ್ಕೆ ಸಮಿತಿಯಲ್ಲಿನ ಒಂದು ಸ್ಥಾನಕ್ಕೆ ಜನವರಿಯಲ್ಲಿ ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಿತ್ತು.
ಈಗ ಪಶ್ಚಿಮ ವಲಯವನ್ನು ಈಗ ಇಬ್ಬರು– ಸಲೀಲ್ ಅಂಕೋಲಾ ಮತ್ತು ಅಧ್ಯಕ್ಷ ಅಜಿತ್ ಅಗರ್ಕರ್ ಪ್ರತಿನಿಧಿಸುತ್ತಿದ್ದಾರೆ. ಉತ್ತರ ವಲಯದಿಂದ ಆಯ್ಕೆಗಾರನ ನೇಮಕವಾದಲ್ಲಿ ಸಲೀಲ್ ಅಂಕೋಲಾ ಸ್ಥಾನ ತೆರವು ಮಾಡಬೇಕಾಗುತ್ತದೆ. ಚೇತನ್ ಶರ್ಮಾ ಅವರ ರಾಜೀನಾಮೆಯಿಂದ ಉತ್ತರ ವಲಯ ಆಯ್ಕೆಗಾರ ಹುದ್ದೆ ತೆರವಾಗಿತ್ತು.
ಕೃಷ್ಣ ಮೋಹನ್ 2021ರಿಂದ ಜೂನಿಯರ್ ತಂಡದ ಆಯ್ಕೆಸಮಿತಿಯಲ್ಲಿದ್ದಾರೆ. ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾ ಸಹ ರೇಸ್ನಲ್ಲಿದ್ದಾರೆ.