<p><strong>ಮೈಸೂರು: </strong>ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿರುವ ಮೈಸೂರು ವಾರಿಯರ್ಸ್ ತಂಡ ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲಿದೆ ಎಂದು ನಾಯಕ ಜೆ.ಸುಚಿತ್ ವಿಶ್ವಾಸ ವ್ಯಕ್ತಪಡಿಸಿದರು.</p>.<p>ನಗರದಲ್ಲಿ ಗುರುವಾರ ಕೆಪಿಎಲ್ ಏಳನೇ ಆವೃತ್ತಿಯ ಟೂರ್ನಿಗೆ ತಂಡದ ಆಟಗಾರರ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಹಲವು ‘ಮ್ಯಾಚ್ ವಿನ್ನರ್’ಗಳನ್ನು ಹೊಂದಿರುವ ತಂಡ ಸಮತೋಲನದಿಂದ ಕೂಡಿದೆ. ಈ ಹಿಂದಿನ ವರ್ಷಗಳಲ್ಲಿ ಟ್ರೋಫಿ ಗೆದ್ದ ತಂಡದಲ್ಲಿದ್ದ 5–6 ಆಟಗಾರರು ಈ ಬಾರಿ ವಾರಿಯರ್ಸ್ ತಂಡದಲ್ಲಿದ್ದಾರೆ. ಸಂಘಟಿತ ಹೋರಾಟ ನೀಡುವಲ್ಲಿ ಯಶಸ್ವಿಯಾದರೆ ಕಪ್ ಜಯಿಸುವುದು ಕಷ್ಟವಲ್ಲ ಎಂದರು.</p>.<p>ವಾರಿಯರ್ಸ್ ತಂಡವನ್ನು ಈ ಬಾರಿ ಸುಚಿತ್ ಮುನ್ನಡೆಸಲಿದ್ದಾರೆ. ಆಲ್ರೌಂಡರ್ ಆಗಿರುವ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾರೆ.</p>.<p>ಅನುಭವ ಹಂಚಿಕೊಳ್ಳುವೆ: ‘ಭಾರತ ತಂಡ ಮತ್ತು ಐಪಿಎಲ್ನ ಕೆಲವು ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಆ ವೇಳೆ ಪಡೆದಿರುವ ಅನುಭವವನ್ನು ತಂಡದ ಕೋಚ್ ಹಾಗೂ ಆಟಗಾರರ ಜತೆ ಹಂಚಿಕೊಳ್ಳುವೆ’ ಎಂದು ತಂಡದ ಸಲಹೆಗಾರ ವೆಂಕಟೇಶ್ ಪ್ರಸಾದ್ ಹೇಳಿದರು.</p>.<p>ವಾರಿಯರ್ಸ್ ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರಿದ್ದಾರೆ. ಐಪಿಎಲ್ನಲ್ಲಿ ಮತ್ತು ಕಳೆದ ಕೆಲ ವರ್ಷಗಳಿಂದ ಕೆಪಿಎಲ್ನಲ್ಲಿ ಆಡುತ್ತಿರುವವರು ತಂಡದಲ್ಲಿದ್ದಾರೆ. ಆಟಗಾರರು ಕಳೆದ ಕೆಲ ದಿನಗಳಿಂದ ಕಠಿಣ ಅಭ್ಯಾಸ ನಡೆಸುತ್ತಿದ್ದು, ಟೂರ್ನಿಗೆ ಸಜ್ಜಾಗುತ್ತಿದ್ದಾರೆ ಎಂದರು.</p>.<p>ಕೋಚ್ ಆರ್.ಎಕ್ಸ್.ಮುರಳೀಧರ ಮಾತನಾಡಿ, ವೆಂಕಟೇಶ್ ಪ್ರಸಾದ್ ಅವರು ತಂಡವನ್ನು ಸೇರಿಕೊಂಡಿರುವುದರಿಂದ ಹೆಚ್ಚಿನ ಬಲ ಬಂದಿದೆ. ಅವರ ಅಪಾರ ಅನುಭವ ಆಟಗಾರರ ನೆರವಿಗೆ ಬರಲಿದೆ. ಉತ್ತಮ ಆಲ್ರೌಂಡರ್ಗಳನ್ನು ಹೊಂದಿರುವುದು ಸಕಾರಾತ್ಮಕ ಅಂಶ ಎಂದು ಹೇಳಿದರು.</p>.<p>ತಂಡದ ಮಾಲೀಕ ಅರ್ಜುನ್ ರಂಗ ಮಾತನಾಡಿ, ವೆಂಕಟೇಶ್ ಪ್ರಸಾದ್ ಅವರು ಸಲಹೆಗಾರರಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಆಟಗಾರರು ಟೂರ್ನಿಗೆ ಸಜ್ಜಾಗುತ್ತಿದ್ದಾರೆ ಎಂದು ತಿಳಿಸಿದರು.</p>.<p>ಕಳೆದ ಬಾರಿ ಅಗ್ರ ಕ್ರಮಾಂಕದ ಬ್ಯಾಟಿಂಗ್ನಲ್ಲಿ ಬಲ ಇರಲಿಲ್ಲ. ಈ ಸಲ ಶೋಯಬ್ ಮ್ಯಾನೇಜರ್, ಕೆ.ವಿ.ಸಿದ್ಧಾರ್ಥ್ ಅವರು ತಂಡಕ್ಕೆ ಬಂದಿದ್ದಾರೆ. ಅರ್ಜುನ್ ಹೊಯ್ಸಳ, ರಾಜೂ ಭಟ್ಕಳ್, ಅಮಿತ್ ವರ್ಮಾ ಅವರಂತಹ ಅನುಭವಿಗಳು ಇದ್ದಾರೆ ಎಂದು ಹೇಳಿದರು.</p>.<p>ವಾರಿಯರ್ಸ್ ತಂಡ 2014 ರಲ್ಲಿ ಕೆಪಿಎಲ್ನಲ್ಲಿ ಮೊದಲ ಬಾರಿ ಪಾಲ್ಗೊಂಡಿತ್ತು. ಅದೇ ವರ್ಷ ಚಾಂಪಿಯನ್ ಆಗಿ ಸ್ಮರಣೀಯ ಸಾಧನೆ ತನ್ನದಾಗಿಸಿಕೊಂಡಿತ್ತು.</p>.<p>ತಂಡದ ಸಹಮಾಲೀಕ ಪವನ್ ರಂಗ, ಮ್ಯಾನೇಜರ್ ಎಂ.ಆರ್.ಸುರೇಶ್, ಎನ್.ಆರ್.ಸಮೂಹದ ಪಾಲುದಾರರಾದ ಕಿರಣ್ ರಂಗ, ಅನಿರುದ್ಧ್ ರಂಗ, ಕೆಎಸ್ಸಿಎ ವ್ಯವಸ್ಥಾಪಕ ಸಮಿತಿ ಸದಸ್ಯ ಎ.ವಿ.ಶಶಿಧರ್, ಮೈಸೂರು ವಲಯ ನಿಮಂತ್ರಕ ಬಾಲಚಂದರ್, ತಂಡದ ಸಹಾಯಕ ಸಿಬ್ಬಂದಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿರುವ ಮೈಸೂರು ವಾರಿಯರ್ಸ್ ತಂಡ ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲಿದೆ ಎಂದು ನಾಯಕ ಜೆ.ಸುಚಿತ್ ವಿಶ್ವಾಸ ವ್ಯಕ್ತಪಡಿಸಿದರು.</p>.<p>ನಗರದಲ್ಲಿ ಗುರುವಾರ ಕೆಪಿಎಲ್ ಏಳನೇ ಆವೃತ್ತಿಯ ಟೂರ್ನಿಗೆ ತಂಡದ ಆಟಗಾರರ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಹಲವು ‘ಮ್ಯಾಚ್ ವಿನ್ನರ್’ಗಳನ್ನು ಹೊಂದಿರುವ ತಂಡ ಸಮತೋಲನದಿಂದ ಕೂಡಿದೆ. ಈ ಹಿಂದಿನ ವರ್ಷಗಳಲ್ಲಿ ಟ್ರೋಫಿ ಗೆದ್ದ ತಂಡದಲ್ಲಿದ್ದ 5–6 ಆಟಗಾರರು ಈ ಬಾರಿ ವಾರಿಯರ್ಸ್ ತಂಡದಲ್ಲಿದ್ದಾರೆ. ಸಂಘಟಿತ ಹೋರಾಟ ನೀಡುವಲ್ಲಿ ಯಶಸ್ವಿಯಾದರೆ ಕಪ್ ಜಯಿಸುವುದು ಕಷ್ಟವಲ್ಲ ಎಂದರು.</p>.<p>ವಾರಿಯರ್ಸ್ ತಂಡವನ್ನು ಈ ಬಾರಿ ಸುಚಿತ್ ಮುನ್ನಡೆಸಲಿದ್ದಾರೆ. ಆಲ್ರೌಂಡರ್ ಆಗಿರುವ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾರೆ.</p>.<p>ಅನುಭವ ಹಂಚಿಕೊಳ್ಳುವೆ: ‘ಭಾರತ ತಂಡ ಮತ್ತು ಐಪಿಎಲ್ನ ಕೆಲವು ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಆ ವೇಳೆ ಪಡೆದಿರುವ ಅನುಭವವನ್ನು ತಂಡದ ಕೋಚ್ ಹಾಗೂ ಆಟಗಾರರ ಜತೆ ಹಂಚಿಕೊಳ್ಳುವೆ’ ಎಂದು ತಂಡದ ಸಲಹೆಗಾರ ವೆಂಕಟೇಶ್ ಪ್ರಸಾದ್ ಹೇಳಿದರು.</p>.<p>ವಾರಿಯರ್ಸ್ ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರಿದ್ದಾರೆ. ಐಪಿಎಲ್ನಲ್ಲಿ ಮತ್ತು ಕಳೆದ ಕೆಲ ವರ್ಷಗಳಿಂದ ಕೆಪಿಎಲ್ನಲ್ಲಿ ಆಡುತ್ತಿರುವವರು ತಂಡದಲ್ಲಿದ್ದಾರೆ. ಆಟಗಾರರು ಕಳೆದ ಕೆಲ ದಿನಗಳಿಂದ ಕಠಿಣ ಅಭ್ಯಾಸ ನಡೆಸುತ್ತಿದ್ದು, ಟೂರ್ನಿಗೆ ಸಜ್ಜಾಗುತ್ತಿದ್ದಾರೆ ಎಂದರು.</p>.<p>ಕೋಚ್ ಆರ್.ಎಕ್ಸ್.ಮುರಳೀಧರ ಮಾತನಾಡಿ, ವೆಂಕಟೇಶ್ ಪ್ರಸಾದ್ ಅವರು ತಂಡವನ್ನು ಸೇರಿಕೊಂಡಿರುವುದರಿಂದ ಹೆಚ್ಚಿನ ಬಲ ಬಂದಿದೆ. ಅವರ ಅಪಾರ ಅನುಭವ ಆಟಗಾರರ ನೆರವಿಗೆ ಬರಲಿದೆ. ಉತ್ತಮ ಆಲ್ರೌಂಡರ್ಗಳನ್ನು ಹೊಂದಿರುವುದು ಸಕಾರಾತ್ಮಕ ಅಂಶ ಎಂದು ಹೇಳಿದರು.</p>.<p>ತಂಡದ ಮಾಲೀಕ ಅರ್ಜುನ್ ರಂಗ ಮಾತನಾಡಿ, ವೆಂಕಟೇಶ್ ಪ್ರಸಾದ್ ಅವರು ಸಲಹೆಗಾರರಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಆಟಗಾರರು ಟೂರ್ನಿಗೆ ಸಜ್ಜಾಗುತ್ತಿದ್ದಾರೆ ಎಂದು ತಿಳಿಸಿದರು.</p>.<p>ಕಳೆದ ಬಾರಿ ಅಗ್ರ ಕ್ರಮಾಂಕದ ಬ್ಯಾಟಿಂಗ್ನಲ್ಲಿ ಬಲ ಇರಲಿಲ್ಲ. ಈ ಸಲ ಶೋಯಬ್ ಮ್ಯಾನೇಜರ್, ಕೆ.ವಿ.ಸಿದ್ಧಾರ್ಥ್ ಅವರು ತಂಡಕ್ಕೆ ಬಂದಿದ್ದಾರೆ. ಅರ್ಜುನ್ ಹೊಯ್ಸಳ, ರಾಜೂ ಭಟ್ಕಳ್, ಅಮಿತ್ ವರ್ಮಾ ಅವರಂತಹ ಅನುಭವಿಗಳು ಇದ್ದಾರೆ ಎಂದು ಹೇಳಿದರು.</p>.<p>ವಾರಿಯರ್ಸ್ ತಂಡ 2014 ರಲ್ಲಿ ಕೆಪಿಎಲ್ನಲ್ಲಿ ಮೊದಲ ಬಾರಿ ಪಾಲ್ಗೊಂಡಿತ್ತು. ಅದೇ ವರ್ಷ ಚಾಂಪಿಯನ್ ಆಗಿ ಸ್ಮರಣೀಯ ಸಾಧನೆ ತನ್ನದಾಗಿಸಿಕೊಂಡಿತ್ತು.</p>.<p>ತಂಡದ ಸಹಮಾಲೀಕ ಪವನ್ ರಂಗ, ಮ್ಯಾನೇಜರ್ ಎಂ.ಆರ್.ಸುರೇಶ್, ಎನ್.ಆರ್.ಸಮೂಹದ ಪಾಲುದಾರರಾದ ಕಿರಣ್ ರಂಗ, ಅನಿರುದ್ಧ್ ರಂಗ, ಕೆಎಸ್ಸಿಎ ವ್ಯವಸ್ಥಾಪಕ ಸಮಿತಿ ಸದಸ್ಯ ಎ.ವಿ.ಶಶಿಧರ್, ಮೈಸೂರು ವಲಯ ನಿಮಂತ್ರಕ ಬಾಲಚಂದರ್, ತಂಡದ ಸಹಾಯಕ ಸಿಬ್ಬಂದಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>