ಬೆಂಗಳೂರು: ಕೃತಿಕ್ ಕೃಷ್ಣ (94, 115 ಎಸೆತ, 4 ಬೌಂಡರಿ, 3 ಸಿಕ್ಸರ್) ಕೇವಲ ಆರು ರನ್ಗಳಿಂದ ಶತಕ ತಪ್ಪಿಸಿಕೊಂಡರು. ಅವರ ಭರ್ಜರಿ ಆಟದ ಬಲದಿಂದ ಮೈಸೂರು ವಲಯ ತಂಡವು ಜಯಭೇರಿ ಬಾರಿಸಿತು. ಕೆಎಸ್ಸಿಎ 23 ವರ್ಷದೊಳಗಿನವರ ಅಂತರವಲಯ ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ 70 ರನ್ಗಳಿಂದ ಶಿವಮೊಗ್ಗ ತಂಡವನ್ನು ಮಣಿಸಿತು.
ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೈಸೂರು ನಿಗದಿತ 50 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 267 ರನ್ ಗಳಿಸಿತು. ಧೀಮಂತ್ ಬಿ.(ಔಟಾಗದೆ 71) ಅರ್ಧಶತಕ ಗಳಿಸಿದರು. ಗುರಿ ಬೆನ್ನತ್ತಿದ ಶಿವಮೊಗ್ಗ 8 ವಿಕೆಟ್ ಕಳೆದುಕೊಂಡು 197 ರನ್ ಗಳಿಸಲಷ್ಟೇ ಶಕ್ತವಾಯಿತು.
ಮಳೆಯಿಂದ ಅಡ್ಡಿಯಾದ ಇತರ ಎರಡು ಪಂದ್ಯಗಳಲ್ಲಿ ರಾಯಚೂರು ಹಾಗೂ ಧಾರವಾಡ ವಲಯ ತಂಡಗಳು ಜಯ ಸಾಧಿಸಿದವು.
ಸಂಕ್ಷಿಪ್ತ ಸ್ಕೋರುಗಳು: ಮೈಸೂರು ವಲಯ: 50 ಓವರ್ಗಳಲ್ಲಿ 2 ವಿಕೆಟ್ಗೆ 267 (ಕೃತಿಕ್ ಕೃಷ್ಣ 94, ಧೀಮಂತ್ ಬಿ. ಔಟಾಗದೆ 71, ಕಿಶನ್ ಎಸ್.ಬೆದಾರೆ ಔಟಾಗದೆ 25). ಶಿವಮೊಗ್ಗ ವಲಯ: 50 ಓವರ್ಗಳಲ್ಲಿ 8 ವಿಕೆಟ್ಗೆ 197 (ಮುಬಾರಕ್ ಎಸ್. 30, ಸೌರಭ್ ಎಸ್.ಆರ್. 40, ನಿಕ್ಷೇಪ್ ಪಿ. ಖಾನಾಪುರ ಔಟಾಗದೆ 37; ಶಶಾಂಕ್ ಕೆ. 48ಕ್ಕೆ 3, ಸಾಯಿಶಿವ ನಾರಾಯಣ್ ಎಲ್. 32ಕ್ಕೆ 2). ಫಲಿತಾಂಶ: ಮೈಸೂರು ವಲಯಕ್ಕೆ 70 ರನ್ಗಳ ಜಯ.
ಆದಿತ್ಯ ಗ್ಲೋಬಲ್ ಒಂದನೇ ಕ್ರೀಡಾಂಗಣ: ರಾಯಚೂರು ವಲಯ: 49.4 ಓವರ್ಗಳಲ್ಲಿ 255 (ರಾಘವೇಂದ್ರ ಎನ್. 75, ಸೌರಭ್ ಮಿತ್ತೂರ್ 41, ಅಭಿಷೇಕ್ ಎಸ್.ಕೆ. 34, ವಿದ್ಯಾಧರ ಪಾಟೀಲ್ 27, ಮಾಧವ ಪಿ.ಬಜಾಜ್ 34, ಮಂಜುನಾಥ ಜಿ. 42ಕ್ಕೆ 2; ಸಂಜಯ್ ಬಿ. 52ಕ್ಕೆ 4, ಚಂದನ್ ಎಸ್. ಗುಜ್ಜರ್ 21ಕ್ಕೆ 2). ತುಮಕೂರು ವಲಯ: 38.1 ಓವರ್ಗಳಲ್ಲಿ 9 ವಿಕೆಟ್ಗೆ 158 (ಪುನೀತ್ ಔಟಾಗದೆ 66, ಅಭಿಷೇಕ್ ಎಚ್.ಪಿ. 25; ವಿದ್ಯಾಧರ ಪಾಟೀಲ್ 32ಕ್ಕೆ 5, ರಾಘವೇಂದ್ರ ಎನ್. 3ಕ್ಕೆ 2). ಫಲಿತಾಂಶ: ಮಳೆ ಅಡ್ಡಿ, ರನ್ರೇಟ್ ಆಧಾರದಲ್ಲಿ ರಾಯಚೂರು ವಲಯಕ್ಕೆ ಜಯ.
ಗ್ರೀನ್ ಸ್ಪೋರ್ಟ್ಸ್ ವಿಲೇಜ್ ಕ್ರೀಡಾಂಗಣ: ಮಂಗಳೂರು ವಲಯ: 42.2 ಓವರ್ಗಳಲ್ಲಿ 152 (ಆರ್ಯನ್ 21, ಮೊಹಮ್ಮದ್ ಅರ್ಮಾನ್ 50, ಅಭಿಷೇಕ್ 22; ಮುದ್ದಸ್ಸೀರ್ ನಜರ್ 16ಕ್ಕೆ 3, ಇಂದ್ರಸೇನ್ ಟಿ.ದಾನಿ 40ಕ್ಕೆ 3, ರೋಹಿತ್ ಕುಮಾರ್ ಎ.ಸಿ. 26ಕ್ಕೆ 2). ಧಾರವಾಡ ವಲಯ: 21 ಓವರ್ಗಳಲ್ಲಿ 2 ವಿಕೆಟ್ಗೆ 75 (ಪರೀಕ್ಷಿತ್ ಒಕ್ಕುಂದ ಔಟಾಗದೆ 33). ಫಲಿತಾಂಶ: ಮಳೆ ಅಡ್ಡಿ, ರನ್ರೇಟ್ ಆಧಾರದ ಮೇಲೆ ಧಾರವಾಡ ವಲಯಕ್ಕೆ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.