<p><strong>ಮುಂಬೈ</strong>: ಭಾರತ ಪುರುಷರ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಮೈದಾನದಲ್ಲಿ ಅವರನ್ನು ಕಂಡು ಹುಚ್ಚೆದ್ದು ಕುಣಿಯುವ ಅಭಿಮಾನಿಗಳು, ಹೊರಗಡೆ ಕಂಡರೆ ಮುಗಿಬೀಳದೇ ಇರುತ್ತಾರೆಯೇ? ಸೋಮವಾರ ಮುಂಬೈನಲ್ಲಿ ಸಹ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.</p>.<p>ತಮ್ಮ ಸ್ನೇಹಿತರೊಬ್ಬರ ಭೇಟಿಗೆ ಹೋಟೆಲ್ಗೆ ಬಂದಿದ್ದ ರೋಹಿತ್ ಶರ್ಮಾ, ಹೊರಗೆ ತೆರಳುವಾಗ ಭಾರೀ ಪ್ರಮಾಣದ ಅಭಿಮಾನಿಗಳು ಎದುರಾದರು. ತಮ್ಮ ನೆಚ್ಚಿನ ಆಟಗಾರನ ಜೊತೆ ಸೆಲ್ಫಿ, ಆಟೊಗ್ರಾಫ್ಗಾಗಿ ಮುಗಿಬಿದ್ದರು. ಹೊರಗಡೆ ತೆರಳಲು ಅವರಿಗೆ ಅವಕಾಶವೇ ಸಿಗಲಿಲ್ಲ. ಈ ಸಂದರ್ಭ ಭದ್ರತಾ ಸಿಬ್ಬಂದಿ ಸುರಕ್ಷತೆ ದೃಷ್ಟಿಯಿಂದ ಹೋಟೆಲ್ ಒಳಗಿರುವುದೇ ಕ್ಷೇಮ ಎಂದು ಹೇಳಿ ಕಳುಹಿಸಿದರು.<br /><br />ಈ ವೇಳೆ, ದಾರಿ ಕಾಣದೇ ರೋಹಿತ್ ತಮ್ಮ ಹಣೆ ಮೇಲೆ ಕೈ ಇಟ್ಟುಕೊಂಡು ಒಳಗೆ ಹೋದರು.</p>.<p>ಏಷ್ಯಾ ಕಪ್ ಕ್ರಿಕೆಟ್ ಸರಣಿಗೂ ಮುನ್ನ ವಿಶ್ರಾಂತಿ ಪಡೆಯುತ್ತಿರುವ ರೋಹಿತ್ ಶರ್ಮಾ ಮುಂಬೈನ ಅಭಿಮಾನಿಗಳಿಂದ ಅಕ್ಷರಶಃ ಮುತ್ತಿಗೆಗೆ ಒಳಗಾಗಿದ್ದರು. ಸಾವಿರಾರು ಅಭಿಮಾನಿಗಳನ್ನು ಒಮ್ಮಲೆ ಆಗಮಿಸಿದ್ದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ರೋಹಿತ್ ಅವರನ್ನು ಸುತ್ತುವರಿದು ಕರೆದೊಯ್ದರು.</p>.<p>ಐಪಿಎಲ್ನ ಮುಂಬೈ ಇಂಡಿಯನ್ಸ್ ತಂಡ ಮತ್ತು ಭಾರತ ಮೂರು ಮಾದರಿಯ ಕ್ರಿಕೆಟ್ ತಂಡಗಳ ನಾಯಕರಾಗಿ ಅವರು ಗಮನ ಸೆಳೆದಿದ್ದಾರೆ.</p>.<p>ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ–20ಸರಣಿಯಲ್ಲಿ ಭಾರತ, ರೋಹಿತ್ ಶರ್ಮಾ ನೇತೃತ್ವದಲ್ಲಿ 4–1ಅಂತರದ ಗೆಲುವು ದಾಖಲಿಸಿತ್ತು.</p>.<p>ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಟಿ–20 ಕ್ರಿಕೆಟ್ ಟೂರ್ನಿಗೆ ಇತ್ತೀಚೆಗೆ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಭಾರತ ಪುರುಷರ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಮೈದಾನದಲ್ಲಿ ಅವರನ್ನು ಕಂಡು ಹುಚ್ಚೆದ್ದು ಕುಣಿಯುವ ಅಭಿಮಾನಿಗಳು, ಹೊರಗಡೆ ಕಂಡರೆ ಮುಗಿಬೀಳದೇ ಇರುತ್ತಾರೆಯೇ? ಸೋಮವಾರ ಮುಂಬೈನಲ್ಲಿ ಸಹ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.</p>.<p>ತಮ್ಮ ಸ್ನೇಹಿತರೊಬ್ಬರ ಭೇಟಿಗೆ ಹೋಟೆಲ್ಗೆ ಬಂದಿದ್ದ ರೋಹಿತ್ ಶರ್ಮಾ, ಹೊರಗೆ ತೆರಳುವಾಗ ಭಾರೀ ಪ್ರಮಾಣದ ಅಭಿಮಾನಿಗಳು ಎದುರಾದರು. ತಮ್ಮ ನೆಚ್ಚಿನ ಆಟಗಾರನ ಜೊತೆ ಸೆಲ್ಫಿ, ಆಟೊಗ್ರಾಫ್ಗಾಗಿ ಮುಗಿಬಿದ್ದರು. ಹೊರಗಡೆ ತೆರಳಲು ಅವರಿಗೆ ಅವಕಾಶವೇ ಸಿಗಲಿಲ್ಲ. ಈ ಸಂದರ್ಭ ಭದ್ರತಾ ಸಿಬ್ಬಂದಿ ಸುರಕ್ಷತೆ ದೃಷ್ಟಿಯಿಂದ ಹೋಟೆಲ್ ಒಳಗಿರುವುದೇ ಕ್ಷೇಮ ಎಂದು ಹೇಳಿ ಕಳುಹಿಸಿದರು.<br /><br />ಈ ವೇಳೆ, ದಾರಿ ಕಾಣದೇ ರೋಹಿತ್ ತಮ್ಮ ಹಣೆ ಮೇಲೆ ಕೈ ಇಟ್ಟುಕೊಂಡು ಒಳಗೆ ಹೋದರು.</p>.<p>ಏಷ್ಯಾ ಕಪ್ ಕ್ರಿಕೆಟ್ ಸರಣಿಗೂ ಮುನ್ನ ವಿಶ್ರಾಂತಿ ಪಡೆಯುತ್ತಿರುವ ರೋಹಿತ್ ಶರ್ಮಾ ಮುಂಬೈನ ಅಭಿಮಾನಿಗಳಿಂದ ಅಕ್ಷರಶಃ ಮುತ್ತಿಗೆಗೆ ಒಳಗಾಗಿದ್ದರು. ಸಾವಿರಾರು ಅಭಿಮಾನಿಗಳನ್ನು ಒಮ್ಮಲೆ ಆಗಮಿಸಿದ್ದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ರೋಹಿತ್ ಅವರನ್ನು ಸುತ್ತುವರಿದು ಕರೆದೊಯ್ದರು.</p>.<p>ಐಪಿಎಲ್ನ ಮುಂಬೈ ಇಂಡಿಯನ್ಸ್ ತಂಡ ಮತ್ತು ಭಾರತ ಮೂರು ಮಾದರಿಯ ಕ್ರಿಕೆಟ್ ತಂಡಗಳ ನಾಯಕರಾಗಿ ಅವರು ಗಮನ ಸೆಳೆದಿದ್ದಾರೆ.</p>.<p>ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ–20ಸರಣಿಯಲ್ಲಿ ಭಾರತ, ರೋಹಿತ್ ಶರ್ಮಾ ನೇತೃತ್ವದಲ್ಲಿ 4–1ಅಂತರದ ಗೆಲುವು ದಾಖಲಿಸಿತ್ತು.</p>.<p>ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಟಿ–20 ಕ್ರಿಕೆಟ್ ಟೂರ್ನಿಗೆ ಇತ್ತೀಚೆಗೆ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>