ಈ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸಿ ಹಲವು ದಶಕಗಳೇ ಕಳೆದಿವೆ. ತ್ಯಾಜ್ಯ ವಿಲೇವಾರಿ, ಚರಂಡಿ ಸ್ವಚ್ಛತೆಯೂ ದೂರ ಮಾತಾಗಿದೆ. ವಾರ್ಡ್ ನಂಬರ್ 7ರ ವ್ಯಾಪ್ತಿಗೆ ಬರುವ ಬೆಟಗೇರಿಯ ತೆಂಗಿನಕಾಯಿ ಬಜಾರ, ಮುಳಗುಂದ ಓಣಿ, ಪೆಂಡರ ಗಲ್ಲಿ, ಬೆಲೇರಿ ಓಣಿ, ಹುಚ್ಚನಗೌಡ್ರ ಓಣಿ, ಚನ್ನನಗೌಡ್ರ ಓಣಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಕಾಮಗಾರಿಗಾಗಿ ರಸ್ತೆ ಅಗೆದು, ನಂತರ ಸಮತಟ್ಟು ಮಾಡದೇ ಹಾಗೆ ಬಿಡಲಾಗಿದೆ. ಇದರಿಂದ ಪಾದಚಾರಿಗಳ ಹಾಗೂ ವಾಹನ ಸವಾರರರಿಗೆ ತೀವ್ರ ತೊಂದರೆಯಾಗಿದೆ.