<p><strong>ಪಾಲ್ಗರ್ </strong>(<strong>ಮಹಾರಾಷ್ಟ್ರ)</strong>: ಲಾಕ್ಡೌನ್ ಕಾರಣ ಎರಡು ತಿಂಗಳ ಕಾಲ ‘ಗೃಹ ಬಂಧನ’ದಲ್ಲಿದ್ದ ಭಾರತ ಕ್ರಿಕೆಟ್ ತಂಡದ ಮಧ್ಯಮ ವೇಗದ ಬೌಲರ್ ಶಾರ್ದೂಲ್, ಶನಿವಾರ ಅಭ್ಯಾಸ ನಡೆಸಿದ್ದಾರೆ.</p>.<p>ಕೇಂದ್ರ ಸರ್ಕಾರವು ಕ್ರೀಡಾ ಚಟುವಟಿಕೆಗಳ ಮೇಲಿನ ನಿರ್ಬಂಧ ಸಡಿಲಿಸಿದ ಬಳಿಕ ಹೊರಾಂಗಣ ಕ್ರೀಡಾಂಗಣದಲ್ಲಿ ತಾಲೀಮು ನಡೆಸಿದ ಭಾರತದ ಮೊದಲ ಕ್ರಿಕೆಟಿಗ ಅವರಾಗಿದ್ದಾರೆ.</p>.<p>ಬೊಯಿಸರ್ನಲ್ಲಿರುವ ಪಾಲ್ಗರ್ ದಹನು ತಾಲ್ಲೂಕ್ ಕ್ರೀಡಾ ಸಂಸ್ಥೆಯ ಮೈದಾನದಲ್ಲಿ ಶಾರ್ದೂಲ್ ಅವರು ಅಭ್ಯಾಸ ಮಾಡಿದರು. ಮುಂಬೈ ತಂಡದ ಬ್ಯಾಟ್ಸ್ಮನ್ ಹಾರ್ದಿಕ್ ತೋಮರ್ ಸೇರಿದಂತೆ ಇತರೆ ಕೆಲ ಆಟಗಾರರೂ ನೆಟ್ಸ್ನಲ್ಲಿ ಬೆವರು ಸುರಿಸಿದರು.</p>.<p>‘ಎರಡು ತಿಂಗಳ ನಂತರ ಮೈದಾನದಲ್ಲಿ ಅಭ್ಯಾಸ ನಡೆಸಿದ್ದು ಖುಷಿ ನೀಡಿತು’ ಎಂದು ಶಾರ್ದೂಲ್ ತಿಳಿಸಿದ್ದಾರೆ.</p>.<p>‘ಅಭ್ಯಾಸದಲ್ಲಿ ಪಾಲ್ಗೊಂಡ ಎಲ್ಲಾ ಆಟಗಾರರನ್ನೂ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಯಿತು. ಬೌಲರ್ಗಳು ತಾವು ತಂದಿದ್ದ ಚೆಂಡಿನಿಂದಲೇ ಅಭ್ಯಾಸ ನಡೆಸಿದರು. ಅವುಗಳಿಗೆ ಸೋಂಕು ನಿವಾರಕಗಳನ್ನೂ ಸಿಂಪಡಿಸಲಾಗಿತ್ತು. ಅಭ್ಯಾಸದ ವೇಳೆ ಎಲ್ಲರೂ ಅಂತರ ಕಾಪಾಡಿಕೊಂಡರು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಲ್ಗರ್ </strong>(<strong>ಮಹಾರಾಷ್ಟ್ರ)</strong>: ಲಾಕ್ಡೌನ್ ಕಾರಣ ಎರಡು ತಿಂಗಳ ಕಾಲ ‘ಗೃಹ ಬಂಧನ’ದಲ್ಲಿದ್ದ ಭಾರತ ಕ್ರಿಕೆಟ್ ತಂಡದ ಮಧ್ಯಮ ವೇಗದ ಬೌಲರ್ ಶಾರ್ದೂಲ್, ಶನಿವಾರ ಅಭ್ಯಾಸ ನಡೆಸಿದ್ದಾರೆ.</p>.<p>ಕೇಂದ್ರ ಸರ್ಕಾರವು ಕ್ರೀಡಾ ಚಟುವಟಿಕೆಗಳ ಮೇಲಿನ ನಿರ್ಬಂಧ ಸಡಿಲಿಸಿದ ಬಳಿಕ ಹೊರಾಂಗಣ ಕ್ರೀಡಾಂಗಣದಲ್ಲಿ ತಾಲೀಮು ನಡೆಸಿದ ಭಾರತದ ಮೊದಲ ಕ್ರಿಕೆಟಿಗ ಅವರಾಗಿದ್ದಾರೆ.</p>.<p>ಬೊಯಿಸರ್ನಲ್ಲಿರುವ ಪಾಲ್ಗರ್ ದಹನು ತಾಲ್ಲೂಕ್ ಕ್ರೀಡಾ ಸಂಸ್ಥೆಯ ಮೈದಾನದಲ್ಲಿ ಶಾರ್ದೂಲ್ ಅವರು ಅಭ್ಯಾಸ ಮಾಡಿದರು. ಮುಂಬೈ ತಂಡದ ಬ್ಯಾಟ್ಸ್ಮನ್ ಹಾರ್ದಿಕ್ ತೋಮರ್ ಸೇರಿದಂತೆ ಇತರೆ ಕೆಲ ಆಟಗಾರರೂ ನೆಟ್ಸ್ನಲ್ಲಿ ಬೆವರು ಸುರಿಸಿದರು.</p>.<p>‘ಎರಡು ತಿಂಗಳ ನಂತರ ಮೈದಾನದಲ್ಲಿ ಅಭ್ಯಾಸ ನಡೆಸಿದ್ದು ಖುಷಿ ನೀಡಿತು’ ಎಂದು ಶಾರ್ದೂಲ್ ತಿಳಿಸಿದ್ದಾರೆ.</p>.<p>‘ಅಭ್ಯಾಸದಲ್ಲಿ ಪಾಲ್ಗೊಂಡ ಎಲ್ಲಾ ಆಟಗಾರರನ್ನೂ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಯಿತು. ಬೌಲರ್ಗಳು ತಾವು ತಂದಿದ್ದ ಚೆಂಡಿನಿಂದಲೇ ಅಭ್ಯಾಸ ನಡೆಸಿದರು. ಅವುಗಳಿಗೆ ಸೋಂಕು ನಿವಾರಕಗಳನ್ನೂ ಸಿಂಪಡಿಸಲಾಗಿತ್ತು. ಅಭ್ಯಾಸದ ವೇಳೆ ಎಲ್ಲರೂ ಅಂತರ ಕಾಪಾಡಿಕೊಂಡರು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>