ಮಂಡಳಿಯು ಇತ್ತೀಚೆಗಷ್ಟೇ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಯನ್ನು ಹೊಸದಾಗಿ ರೂಪಿಸಿದ್ದು, ಮಾಜಿ ಆಟಗಾರರಾದ ಮದನ್ ಲಾಲ್, ರುದ್ರಪ್ರತಾಪ್ ಸಿಂಗ್ ಮತ್ತು ಸುಲಕ್ಷಣಾ ನಾಯಕ್ ಅವರನ್ನು ನೇಮಕ ಮಾಡಿತ್ತು. ‘ಹೊಸ ಸಿಎಸಿಯನ್ನು ರೂಪಿಸಲಾಗಿದೆ. ಈ ತಿಂಗಳ ಕೊನೆಯೊಳಗೆ ಅವರು ಇಬ್ಬರು ನೂತನ ಆಯ್ಕೆಗಾರರನ್ನು ಆರಿಸಲಿದ್ದಾರೆ’ ಎಂದು ಗಂಗೂಲಿ ತಿಳಿಸಿದರು.