2000ನೇ ಇಸವಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎನ್ಸಿಎ ಆರಂಭವಾಯಿತು. ಗಾಯಗೊಂಡ ಕ್ರಿಕೆಟ್ ಆಟಗಾರರಿಗೆ ಪುನಶ್ಚೇತನ, ತಂಡಗಳಿಗೆ ವಿಶೇಷ ಶಿಬಿರಗಳನ್ನು ಆಯೋಜಿಸುವ ಕಾರ್ಯವನ್ನು ಎನ್ಸಿಎ
ಮಾಡುತ್ತಿದೆ. ಇದರ ಮೊದಲ ಅಧ್ಯಕ್ಷರಾಗಿ ರಾಜ್ಸಿಂಗ್ ಡುಂಗರಪುರ್ ಕಾರ್ಯನಿರ್ವಹಿಸಿದ್ದರು. ಅವರ ನಂತರ ಸುನಿಲ್ ಗಾವಸ್ಕರ್ (2001 ರಿಂದ 2005), ಕಪಿಲ್ ದೇವ್ (2006), ರವಿಶಾಸ್ತ್ರಿ (2007), ಅನಿಲ್ ಕುಂಬ್ಳೆ (2010–12 ಮತ್ತು 2014) ಅವರು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್, ಶಿವಲಾಲ್ ಯಾದವ್, ಸಂದೀಪ್ ಪಾಟೀಲ, ಡೇವ್ ವಾಟ್ಮೋರ್ ಅವರು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.