<p><strong>ಮೆಲ್ಬರ್ನ್ (ಪಿಟಿಐ): </strong>ಇಂಗ್ಲೆಂಡ್ ತಂಡದ ಎಡಗೈ ವೇಗಿ ಸ್ಯಾಮ್ ಕರನ್ ಟಿ20 ವಿಶ್ವಕಪ್ ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ.</p>.<p>ಈ ವರ್ಷದ ಆರಂಭದಲ್ಲಿ ಗಂಭೀರ ಗಾಯದಿಂದ ಚೇತರಿಸಿಕೊಂಡು ಕ್ರಿಕೆಟ್ ಮರಳಿದ್ದರು. ಟೂರ್ನಿಯಲ್ಲಿ ಒಟ್ಟು 13 ವಿಕೆಟ್ಗಳನ್ನು ಅವರು ಗಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಅವರು ಮೂರು ವಿಕೆಟ್ ಗಳಿಸಿದರು.</p>.<p>‘ಎಂ.ಸಿ.ಜಿಯ ಸ್ಕ್ವೇರ್ ಬೌಂಡರಿಲೈನ್ ದೊಡ್ಡ ಅಂತರಹೊಂದಿವೆ. ಈ ಕ್ರೀಡಾಂಗಣ ಹಾಗೂ ಪಿಚ್ಗೆ ತಕ್ಕಂತೆ ಬೌಲಿಂಗ್ ಮಾಡಲು ಬಹಳಷ್ಟು ಅಭ್ಯಾಸ ಬೇಕು. ಇದೊಂದು ಕಠಿಣ ಸವಾಲಾಗಿತ್ತು. ನಿಧಾನಗತಿಯ ಎಸೆತಗಳ ಮೂಲಕ ಬ್ಯಾಟರ್ಗಳಲ್ಲಿ ಗೊಂದಲ ಮೂಡಿಸುವಲ್ಲಿ ಸಫಲನಾದೆ’ ಎಂದು ಸ್ಯಾಮ್ ಹೇಳಿದರು.</p>.<p>‘ಬೆನ್ ಸ್ಟೋಕ್ಸ್ ಜೊತೆಗೆ ಆಡುತ್ತಿರುವುದು ನನ್ನ ಅದೃಷ್ಟ. ತಂಡದ ಗೆಲುವಿಗೆ ಸ್ಟೋಕ್ಸ್ ಕೊಡುವ ಕಾಣಿಕೆ ಬಹಳ ದೊಡ್ಡದು’ ಎಂದು ಶ್ಲಾಘಿಸಿದರು.</p>.<p>ಸೋಲಿನ ಲಗೇಜ್ ಹೊರಲಾಗದು</p>.<p>ಯಾವುದೇ ಸೋಲಿನ ಭಾರವನ್ನು ಹೆಚ್ಚು ಸಮಯ ಹೊರಲು ಸಾಧ್ಯವಿಲ್ಲ. ಆ ನಿರಾಶೆಯಿಂದ ಕಲಿತ ಪಾಠದ ಮೂಲಕ ದೊಡ್ಡ ಗೆಲುವು ಸಾಧಿಸಿದಾಗಲೇ ಸಂತೃಪ್ತಿ ಭಾವ ಎಂದು ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹೇಳಿದ್ದಾರೆ.</p>.<p>ವಿಶ್ವಕಪ್ ಟೂರ್ನಿಯ ಗುಂಪು ಹಂತದಲ್ಲಿ ಐರ್ಲೆಂಡ್ ವಿರುದ್ಧದ ಸೋಲಿನಿಂದ ಕಲಿತ ಪಾಠದ ಕುರಿತು ಅವರು ಸುದ್ದಿಗಾರರೊಂದಿಗೆ ಹಂಚಿಕೊಂಡರು.</p>.<p>‘ಆ ಸೋಲಿನಿಂದಾಗಿ ನಮ್ಮ ತಂಡವು ಟೂರ್ನಿಯಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇತ್ತು. ತುರ್ತಾಗಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿತ್ತು. ಇಂತಹ ಟೂರ್ನಿಗಳಲ್ಲಿ ಸೋಲಿನ ಭಾರವನ್ನು ಬಹಳಷ್ಟು ಸಮಯ ಹೆಗಲಮೇಲೆ ಹೊರಲಾಗದು. ಆದಷ್ಟು ಬೇಗ ಇಳಿಸಿಬಿಟ್ಟರೆ ಮುಂದಿನ ದಾರಿ ಸುಗಮ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೆಲ್ಬರ್ನ್ (ಪಿಟಿಐ): </strong>ಇಂಗ್ಲೆಂಡ್ ತಂಡದ ಎಡಗೈ ವೇಗಿ ಸ್ಯಾಮ್ ಕರನ್ ಟಿ20 ವಿಶ್ವಕಪ್ ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ.</p>.<p>ಈ ವರ್ಷದ ಆರಂಭದಲ್ಲಿ ಗಂಭೀರ ಗಾಯದಿಂದ ಚೇತರಿಸಿಕೊಂಡು ಕ್ರಿಕೆಟ್ ಮರಳಿದ್ದರು. ಟೂರ್ನಿಯಲ್ಲಿ ಒಟ್ಟು 13 ವಿಕೆಟ್ಗಳನ್ನು ಅವರು ಗಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಅವರು ಮೂರು ವಿಕೆಟ್ ಗಳಿಸಿದರು.</p>.<p>‘ಎಂ.ಸಿ.ಜಿಯ ಸ್ಕ್ವೇರ್ ಬೌಂಡರಿಲೈನ್ ದೊಡ್ಡ ಅಂತರಹೊಂದಿವೆ. ಈ ಕ್ರೀಡಾಂಗಣ ಹಾಗೂ ಪಿಚ್ಗೆ ತಕ್ಕಂತೆ ಬೌಲಿಂಗ್ ಮಾಡಲು ಬಹಳಷ್ಟು ಅಭ್ಯಾಸ ಬೇಕು. ಇದೊಂದು ಕಠಿಣ ಸವಾಲಾಗಿತ್ತು. ನಿಧಾನಗತಿಯ ಎಸೆತಗಳ ಮೂಲಕ ಬ್ಯಾಟರ್ಗಳಲ್ಲಿ ಗೊಂದಲ ಮೂಡಿಸುವಲ್ಲಿ ಸಫಲನಾದೆ’ ಎಂದು ಸ್ಯಾಮ್ ಹೇಳಿದರು.</p>.<p>‘ಬೆನ್ ಸ್ಟೋಕ್ಸ್ ಜೊತೆಗೆ ಆಡುತ್ತಿರುವುದು ನನ್ನ ಅದೃಷ್ಟ. ತಂಡದ ಗೆಲುವಿಗೆ ಸ್ಟೋಕ್ಸ್ ಕೊಡುವ ಕಾಣಿಕೆ ಬಹಳ ದೊಡ್ಡದು’ ಎಂದು ಶ್ಲಾಘಿಸಿದರು.</p>.<p>ಸೋಲಿನ ಲಗೇಜ್ ಹೊರಲಾಗದು</p>.<p>ಯಾವುದೇ ಸೋಲಿನ ಭಾರವನ್ನು ಹೆಚ್ಚು ಸಮಯ ಹೊರಲು ಸಾಧ್ಯವಿಲ್ಲ. ಆ ನಿರಾಶೆಯಿಂದ ಕಲಿತ ಪಾಠದ ಮೂಲಕ ದೊಡ್ಡ ಗೆಲುವು ಸಾಧಿಸಿದಾಗಲೇ ಸಂತೃಪ್ತಿ ಭಾವ ಎಂದು ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹೇಳಿದ್ದಾರೆ.</p>.<p>ವಿಶ್ವಕಪ್ ಟೂರ್ನಿಯ ಗುಂಪು ಹಂತದಲ್ಲಿ ಐರ್ಲೆಂಡ್ ವಿರುದ್ಧದ ಸೋಲಿನಿಂದ ಕಲಿತ ಪಾಠದ ಕುರಿತು ಅವರು ಸುದ್ದಿಗಾರರೊಂದಿಗೆ ಹಂಚಿಕೊಂಡರು.</p>.<p>‘ಆ ಸೋಲಿನಿಂದಾಗಿ ನಮ್ಮ ತಂಡವು ಟೂರ್ನಿಯಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇತ್ತು. ತುರ್ತಾಗಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿತ್ತು. ಇಂತಹ ಟೂರ್ನಿಗಳಲ್ಲಿ ಸೋಲಿನ ಭಾರವನ್ನು ಬಹಳಷ್ಟು ಸಮಯ ಹೆಗಲಮೇಲೆ ಹೊರಲಾಗದು. ಆದಷ್ಟು ಬೇಗ ಇಳಿಸಿಬಿಟ್ಟರೆ ಮುಂದಿನ ದಾರಿ ಸುಗಮ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>