<p><strong>ಬ್ರಿಸ್ಬೇನ್:</strong> ಗಾಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ ಐತಿಹಾಸಿಕ ಸರಣಿ ಗೆಲುವಿನ ಬಳಿಕ ಟೀಮ್ ಇಂಡಿಯಾ ಮುಖ್ಯ ತರಬೇತುದಾರ ರವಿ ಶಾಸ್ತ್ರಿ, ಭಾರತ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆಸಿರುವ ಸ್ಫೂರ್ತಿದಾಯಕ ಭಾಷಣ ವೈರಲ್ ಆಗಿದ್ದು, ಇದೊಂದು ಅಸಾಮಾನ್ಯ ಗೆಲುವು ಎಂದಿದ್ದಾರೆ.</p>.<p>ನೀವು ತೋರಿಸಿದ ಧೈರ್ಯ, ಸಂಕಲ್ಪ, ಚೈತನ್ಯ ವಾಸ್ತವಕ್ಕೆ ದೂರವಾದದ್ದು. ಒಂದು ಸಲವೂ ತಂಡದ ಮನೋಬಲ ಕುಸಿದಿಲ್ಲ. 36 ರನ್ನಿಗೆ ಆಲೌಟ್, ಆದರೂ ಆತ್ಮನಂಬಿಕೆಯಿತ್ತು ಎಂದು ಕೋಚ್ ರವಿ ಶಾಸ್ತ್ರಿ ತಿಳಿಸಿದರು.</p>.<p>ಇದು ರಾತ್ರೋರಾತ್ರಿ ಆಗುವ ಸಾಧನೆಯಲ್ಲ. ಆದರೆ ಈಗ ನೀವು ಈ ಆತ್ಮ ನಂಬಿಕೆಯನ್ನು ಹೊಂದಿದ್ದೀರಿ. ಒಂದು ತಂಡವಾಗಿ ಆಟವನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗಿದ್ದೀರಿ ಎಂಬುದನ್ನು ನೋಡಬಹುದು. ಇಂದು ಭಾರತವನ್ನು ಮೆರೆತುಬಿಡಿ, ಇಡೀ ಜಗತ್ತೇ ಎದ್ದು ನಿಂತು ನಿಮ್ಮನ್ನು ನಮಸ್ಕರಿಸಲಿದೆ ಎಂದು ಹೇಳಿದರು.</p>.<p>ಇದನ್ನೂ ಓದಿ:<a href="https://www.prajavani.net/sports/cricket/india-vs-aus-credit-needs-to-be-given-virat-kohli-and-rcb-says-mohammed-sirajs-brother-797985.html" itemprop="url">ಕೊಹ್ಲಿ, ಆರ್ಸಿಬಿಗೆ ಶ್ರೇಯ ಸಲ್ಲಬೇಕು; ಸಿರಾಜ್ ಯಶಸ್ಸಿಗೆ ಸೋದರನ ಮಾತು </a></p>.<p>ಆದ್ದರಿಂದ ಇಂದು ನೀವು ಏನು ಮಾಡಿದ್ದೀರಿ ಎಂಬುದನ್ನು ನೆನಪಿಡಿ. ನೀವು ಈ ಕ್ಷಣವನ್ನು ಆನಂದಿಸಬೇಕು. ಸಾಧ್ಯವಾದಷ್ಟು ಆನಂದಿಸಿ ಎಂದು ಯುವ ತಂಡಕ್ಕೆ ಸಲಹೆ ಮಾಡಿದರು.</p>.<p>ಚೇತೇಶ್ವರ ಪೂಜಾರ ಅವರನ್ನು 'ಅಲ್ಟಿಮೇಟ್ ವಾರಿಯರ್' ಎಂದು ಉಲ್ಲೇಖಿಸಿರುವ ರವಿಶಾಸ್ತ್ರಿ, ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಟಿ. ನಟರಾಜನ್ ಪ್ರದರ್ಶನವನ್ನು ವಿಶೇಷವಾಗಿ ಕೊಂಡಾಡಿದರು.</p>.<p>ಇದು ಮೆಲ್ಬರ್ನ್ನಲ್ಲಿ ಪ್ರಾರಂಭವಾಯಿತು. ಸಿಡ್ನಿಯಲ್ಲಿ ಅದ್ಭುತ. ಬಳಿಕ ಇಲ್ಲಿ ಈ ರೀತಿಯ ಗೆಲುವು ನಿಜಕ್ಕೂ ಅಮೋಘ. ಈ ಸರಣಿಯ ಜಯಕ್ಕೆ ಸರಿಸಾಟಿಯಾದದ್ದು ಯಾವುದೂ ಇಲ್ಲ. ಅಡಿಲೇಡ್ನಲ್ಲಿ ಅತ್ಯಂತ ಕೆಟ್ಟ ಸೋಲಿನ ನಂತರ ತಂಡವು ಈ ರೀತಿ ಪುಟಿದೇಳುವುದು ಅಸಾಧಾರಣವೇ ಸರಿ. ಈ ಬಾರಿಯ ಪ್ರವಾಸವು ಅತ್ಯಂತ ಕಠಿಣವಾದದ್ದು. ಹಲವು ಕಾರಣಗಳಿಂದ ಕಷ್ಟಕರ ಹಾದಿ ಇದಾಗಿತ್ತು. ಸೋಲಿನ ಪ್ರಪಾತದಿಂದ ಎದ್ದು, ಯಶಸ್ಸಿನ ಉತ್ತುಂಗಕ್ಕೆ ತಲುಪಿದ ಆ ಸಾಧನೆಯನ್ನು ವರ್ಣಿಸಲು ಪದಗಳು ಸಾಲದು ಎಂದು ಹೇಳಿದರು.</p>.<p>ಸರಣಿಯಲ್ಲಿ 0-1ರ ಅಂತರದ ಹಿನ್ನೆಡೆ ಅನುಭವಿಸಿ ಸತತ ಗಾಯದ ಸಮಸ್ಯೆ ಎದುರಿಸಿದಾಗ ಯುವ ಪಡೆಯನ್ನು ತಾಳ್ಮೆಯ ನಾಯಕತ್ವದ ಮೂಲಕ ಮುನ್ನಡೆಸಿದ ಅಜಿಂಕ್ಯ ರಹಾನೆ ಅವರನ್ನು ಕೋಚ್ ರವಿ ಶಾಸ್ತ್ರಿ ಕೊಂಡಾಡಿದರು.</p>.<p>ನಾನು ಸಾಮಾನ್ಯವಾಗಿ ಕಣ್ಣೀರು ಸುರಿಸುವ ವ್ಯಕ್ತಿಯಲ್ಲ. ಆದರೆ ಈ ಅಸಾಮಾನ್ಯ ಗೆಲುವಿನಿಂದ ನನ್ನಲ್ಲೂ ಆನಂದಬಾಷ್ಪ ಸುರಿದಿದೆ. ಈ ಯುವಪಡೆಯ ಸಾಹಸ ಇತಿಹಾಸದಲ್ಲಿ ಅತಿಶ್ರೇಷ್ಠ ಸರಣಿ ಗೆಲುವುಗಳಲ್ಲಿ ಒಂದಾಗಿ ಗುರುತಿಸಲಿದೆ ಎಂದುಭಾವುಕರಾಗಿ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಿಸ್ಬೇನ್:</strong> ಗಾಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ ಐತಿಹಾಸಿಕ ಸರಣಿ ಗೆಲುವಿನ ಬಳಿಕ ಟೀಮ್ ಇಂಡಿಯಾ ಮುಖ್ಯ ತರಬೇತುದಾರ ರವಿ ಶಾಸ್ತ್ರಿ, ಭಾರತ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆಸಿರುವ ಸ್ಫೂರ್ತಿದಾಯಕ ಭಾಷಣ ವೈರಲ್ ಆಗಿದ್ದು, ಇದೊಂದು ಅಸಾಮಾನ್ಯ ಗೆಲುವು ಎಂದಿದ್ದಾರೆ.</p>.<p>ನೀವು ತೋರಿಸಿದ ಧೈರ್ಯ, ಸಂಕಲ್ಪ, ಚೈತನ್ಯ ವಾಸ್ತವಕ್ಕೆ ದೂರವಾದದ್ದು. ಒಂದು ಸಲವೂ ತಂಡದ ಮನೋಬಲ ಕುಸಿದಿಲ್ಲ. 36 ರನ್ನಿಗೆ ಆಲೌಟ್, ಆದರೂ ಆತ್ಮನಂಬಿಕೆಯಿತ್ತು ಎಂದು ಕೋಚ್ ರವಿ ಶಾಸ್ತ್ರಿ ತಿಳಿಸಿದರು.</p>.<p>ಇದು ರಾತ್ರೋರಾತ್ರಿ ಆಗುವ ಸಾಧನೆಯಲ್ಲ. ಆದರೆ ಈಗ ನೀವು ಈ ಆತ್ಮ ನಂಬಿಕೆಯನ್ನು ಹೊಂದಿದ್ದೀರಿ. ಒಂದು ತಂಡವಾಗಿ ಆಟವನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗಿದ್ದೀರಿ ಎಂಬುದನ್ನು ನೋಡಬಹುದು. ಇಂದು ಭಾರತವನ್ನು ಮೆರೆತುಬಿಡಿ, ಇಡೀ ಜಗತ್ತೇ ಎದ್ದು ನಿಂತು ನಿಮ್ಮನ್ನು ನಮಸ್ಕರಿಸಲಿದೆ ಎಂದು ಹೇಳಿದರು.</p>.<p>ಇದನ್ನೂ ಓದಿ:<a href="https://www.prajavani.net/sports/cricket/india-vs-aus-credit-needs-to-be-given-virat-kohli-and-rcb-says-mohammed-sirajs-brother-797985.html" itemprop="url">ಕೊಹ್ಲಿ, ಆರ್ಸಿಬಿಗೆ ಶ್ರೇಯ ಸಲ್ಲಬೇಕು; ಸಿರಾಜ್ ಯಶಸ್ಸಿಗೆ ಸೋದರನ ಮಾತು </a></p>.<p>ಆದ್ದರಿಂದ ಇಂದು ನೀವು ಏನು ಮಾಡಿದ್ದೀರಿ ಎಂಬುದನ್ನು ನೆನಪಿಡಿ. ನೀವು ಈ ಕ್ಷಣವನ್ನು ಆನಂದಿಸಬೇಕು. ಸಾಧ್ಯವಾದಷ್ಟು ಆನಂದಿಸಿ ಎಂದು ಯುವ ತಂಡಕ್ಕೆ ಸಲಹೆ ಮಾಡಿದರು.</p>.<p>ಚೇತೇಶ್ವರ ಪೂಜಾರ ಅವರನ್ನು 'ಅಲ್ಟಿಮೇಟ್ ವಾರಿಯರ್' ಎಂದು ಉಲ್ಲೇಖಿಸಿರುವ ರವಿಶಾಸ್ತ್ರಿ, ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಟಿ. ನಟರಾಜನ್ ಪ್ರದರ್ಶನವನ್ನು ವಿಶೇಷವಾಗಿ ಕೊಂಡಾಡಿದರು.</p>.<p>ಇದು ಮೆಲ್ಬರ್ನ್ನಲ್ಲಿ ಪ್ರಾರಂಭವಾಯಿತು. ಸಿಡ್ನಿಯಲ್ಲಿ ಅದ್ಭುತ. ಬಳಿಕ ಇಲ್ಲಿ ಈ ರೀತಿಯ ಗೆಲುವು ನಿಜಕ್ಕೂ ಅಮೋಘ. ಈ ಸರಣಿಯ ಜಯಕ್ಕೆ ಸರಿಸಾಟಿಯಾದದ್ದು ಯಾವುದೂ ಇಲ್ಲ. ಅಡಿಲೇಡ್ನಲ್ಲಿ ಅತ್ಯಂತ ಕೆಟ್ಟ ಸೋಲಿನ ನಂತರ ತಂಡವು ಈ ರೀತಿ ಪುಟಿದೇಳುವುದು ಅಸಾಧಾರಣವೇ ಸರಿ. ಈ ಬಾರಿಯ ಪ್ರವಾಸವು ಅತ್ಯಂತ ಕಠಿಣವಾದದ್ದು. ಹಲವು ಕಾರಣಗಳಿಂದ ಕಷ್ಟಕರ ಹಾದಿ ಇದಾಗಿತ್ತು. ಸೋಲಿನ ಪ್ರಪಾತದಿಂದ ಎದ್ದು, ಯಶಸ್ಸಿನ ಉತ್ತುಂಗಕ್ಕೆ ತಲುಪಿದ ಆ ಸಾಧನೆಯನ್ನು ವರ್ಣಿಸಲು ಪದಗಳು ಸಾಲದು ಎಂದು ಹೇಳಿದರು.</p>.<p>ಸರಣಿಯಲ್ಲಿ 0-1ರ ಅಂತರದ ಹಿನ್ನೆಡೆ ಅನುಭವಿಸಿ ಸತತ ಗಾಯದ ಸಮಸ್ಯೆ ಎದುರಿಸಿದಾಗ ಯುವ ಪಡೆಯನ್ನು ತಾಳ್ಮೆಯ ನಾಯಕತ್ವದ ಮೂಲಕ ಮುನ್ನಡೆಸಿದ ಅಜಿಂಕ್ಯ ರಹಾನೆ ಅವರನ್ನು ಕೋಚ್ ರವಿ ಶಾಸ್ತ್ರಿ ಕೊಂಡಾಡಿದರು.</p>.<p>ನಾನು ಸಾಮಾನ್ಯವಾಗಿ ಕಣ್ಣೀರು ಸುರಿಸುವ ವ್ಯಕ್ತಿಯಲ್ಲ. ಆದರೆ ಈ ಅಸಾಮಾನ್ಯ ಗೆಲುವಿನಿಂದ ನನ್ನಲ್ಲೂ ಆನಂದಬಾಷ್ಪ ಸುರಿದಿದೆ. ಈ ಯುವಪಡೆಯ ಸಾಹಸ ಇತಿಹಾಸದಲ್ಲಿ ಅತಿಶ್ರೇಷ್ಠ ಸರಣಿ ಗೆಲುವುಗಳಲ್ಲಿ ಒಂದಾಗಿ ಗುರುತಿಸಲಿದೆ ಎಂದುಭಾವುಕರಾಗಿ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>