ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಮರ್ಚಂಟ್ ಟ್ರೋಫಿ: ಕರ್ನಾಟಕಕ್ಕೆ ಆದೇಶ್ ಅರಸ್ ನಾಯಕ

Last Updated 25 ನವೆಂಬರ್ 2022, 13:55 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾಜಿನಗರ ಕ್ರಿಕೆಟರ್ಸ್‌ನ ಆದೇಶ್ ಡಿ ಅರಸ್ ಬಿಸಿಸಿಐ 16 ವರ್ಷದೊಳಗಿನವರ ವಿಜಯ್ ಮರ್ಚಂಟ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಲಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಶುಕ್ರವಾರ ತಂಡವನ್ನು ಪ್ರಕಟಿಸಿದೆ.ಡಿಸೆಂಬರ್ 23ರಿಂದ ವಿದರ್ಭದಲ್ಲಿ ಟೂರ್ನಿಯು ನಡೆಯಲಿದೆ. ಆಯ್ಕೆಯಾಗಿರುವ ಆಟಗಾರರು ಶನಿವಾರ ಬೆಳಿಗ್ಗೆ 8.30ಕ್ಕೆ ಕೆಎಸ್‌ಸಿಎ ‘ಎ’ ಮೈದಾನದಲ್ಲಿ ಹಾಜರಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಂಡ: ಆದೇಶ್ ಡಿ ಅರಸ್ (ನಾಯಕ; ರಾಜಾಜಿನಗರ ಕ್ರಿಕೆಟರ್ಸ್), ಎಸ್. ಅನಂತ್ (ಬೆಂಗಳೂರು ಎಸ್‌ಸಿ), ಅರ್ಣವ್ ಮಿಶ್ರಾ (ವಲ್ಚರ್ಸ್‌ ಸಿಸಿ), ಸಿದ್ಧೇಶ್ ಎ ಅಸಲಕರ್(ಧಾರವಾಡ ವಲಯ/ಸೋಷಿಯಲ್ ಕ್ರಿಕೆಟರ್ಸ್), ಎಸ್. ದೈವಿಕ್ (ದ ಬೆಂಗಳೂರು ಕ್ರಿಕೆಟರ್ಸ್), ಅನಿಕೇತ್ ರೆಡ್ಡಿ (ರಾಯಚೂರು ವಲಯ/ವಿಜಯಾ ಸಿಸಿ), ಆರ್ಣವ್ ಶರ್ಮಾ (ವಿಕೆಟ್‌ಕೀಪರ್– ಬೆಂಗಳೂರು ಎಸ್‌ಸಿ), ರಿಷಭ್ ಬಿ ನಾಯಕ (ವಿಕೆಟ್‌ಕೀಪರ್–ಮಂಗಳೂರು ವಲಯ/ವಿಶ್ವೇಶ್ವರಪುರಂ ಸಿಸಿ), ಅಕ್ಷತ್ ಪ್ರಭಾಕರ್ (ವಿಜಯಾ ಸಿಸಿ), ಮಣಿಕಾಂತ್ ಶಿವಾನಂದ (ಧಾರವಾಡ ವಲಯ/ವಲ್ಚರ್ಸ್‌ ಸಿಸಿ), ಈಸಾ ಎಚ್ ಪುತ್ತಿಗೆ (ಕೆಂಬ್ರಿಡ್ಜ್ ಸಿಸಿ), ಸಮ್ಯಕ್ ವೆಲಾಲೊರ್ (ವಲ್ಚರ್ಸ್‌ ಸಿಸಿ), ಕೆ.ಎ. ತೇಜಸ್ (ರಾಜಾಜಿನಗರ ಕ್ರಿಕೆಟರ್ಸ್), ಮೊಹಮ್ಮದ್ ಇಬ್ರಾಹಿಂ ರಯಾನ್ (ಶಿವಮೊಗ್ಗ ವಲಯ/ಕೆಂಬ್ರಿಡ್ಜ್ ಸಿಸಿ), ಆರ್. ಹಿಮೇಶ್ (ಮೈಸೂರು ವಲಯ/ಸ್ವಸ್ತಿಕ್ ಯೂನಿಯನ್). ಕುನಾಲ್ ಕಪೂರ್ (ಕೋಚ್), ಸ್ನೇಹಿತ್ ರೈ (ಸ್ಟ್ರೆಂಥ್–ಕಂಡಿಷನಿಂಗ್), ಎಚ್‌.ಎಸ್. ಗೌತಮ್ (ಫಿಸಿಯೊ), ಪಿ.ವಿ. ಸುಮಂತ್ (ಮ್ಯಾನೇಜರ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT