<p>ಭುವನೇಶ್ವರ: ದಿವ್ಯಾ ಜ್ಞಾನಾನಂದ ಅವರ ಅಜೇಯ ಶತಕದ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ ಸೀನಿಯರ್ ಮಹಿಳೆಯರ ಏಕದಿನ ಕ್ರಿಕೆಟ್ ಟ್ರೋಫಿ ಟೂರ್ನಿಯಲ್ಲಿ 89 ರನ್ಗಳಿಂದ ವಿದರ್ಭ ತಂಡವನ್ನು ಮಣಿಸಿತು.</p>.<p>ಭುವನೇಶ್ವರದ ಕೆಐಐಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು ದಿವ್ಯಾ (ಔಟಾಗದೆ 137; 137ಎ, 4X15, 6X6) ಅವರ ಬ್ಯಾಟಿಂಗ್ ಬಲದಿಂದ 50 ಓವರ್ಗಳಲ್ಲಿ 7 ವಿಕೆಟ್ಗೆ 250 ರನ್ ಗಳಿಸಿತು. ರೋಷನಿ ಕಿರಣ್ (38), ಪುಷ್ಪಾ ಕಿರೇಸೂರು (35) ಉಪಯುಕ್ತ ಕಾಣಿಕೆ ನೀಡಿದರು.</p>.<p>ಗುರಿಯನ್ನು ಬೆನ್ನಟ್ಟಿದ ವಿದರ್ಭದ ಬ್ಯಾಟರ್ಗಳು ಕರ್ನಾಟಕದ ಬೌಲರ್ಗಳ ದಾಳಿಯೆದುರು ತತ್ತರಿಸಿದರು. ಹೀಗಾಗಿ, 41.4 ಓವರ್ಗಳಲ್ಲಿ 161 ರನ್ಗೆ ತಂಡವು ಕುಸಿಯಿತು. ಎಲ್.ಎಂ. ಇನಾಮದಾರ (61;80ಎ, 4X8) ಮತ್ತು ಡಿ.ಡಿ. ಕಸತ್ (45) ಹೊರತುಪಡಿಸಿ ಉಳಿದವರು ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬೌಲಿಂಗ್ನಲ್ಲೂ ಮಿಂಚಿದ ಪುಷ್ಪಾ 25 ರನ್ಗೆ ಮೂರು ವಿಕೆಟ್ ಗಳಿಸಿದರು. ಸಹನಾ ಎಸ್. ಪವಾರ್ ಮತ್ತು ರೋಹಿತಾ ಚೌಧರಿ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದರು.</p>.<p>ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 50 ಓವರ್ಗಳಲ್ಲಿ 7 ವಿಕೆಟ್ಗೆ 250 (ರೋಷನಿ ಕಿರಣ್ 38, ವೃಂದಾ ದಿನೇಶ್ 23, ದಿವ್ಯಾ ಜ್ಞಾನಾನಂದ ಔಟಾಗದೆ 137, ಪುಷ್ಪಾ ಕಿರೇಸೂರು 35). ವಿದರ್ಭ: 41.4 ಓವರ್ಗಳಲ್ಲಿ 161 (ಡಿ.ಡಿ. ಕಸತ್ 45, ಎಲ್.ಎಂ. ಇನಾಮದಾರ 61; ಪುಷ್ಪಾ ಕಿರೇಸೂರು 25ಕ್ಕೆ 3, ರೋಹಿತಾ ಚೌಧರಿ 28ಕ್ಕೆ 2, ಸಹನಾ ಎಸ್. ಪವಾರ್ 30ಕ್ಕೆ 3)</p>.<p>ಫಲಿತಾಂಶ: ಕರ್ನಾಟಕಕ್ಕೆ 89 ರನ್ ಜಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭುವನೇಶ್ವರ: ದಿವ್ಯಾ ಜ್ಞಾನಾನಂದ ಅವರ ಅಜೇಯ ಶತಕದ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ ಸೀನಿಯರ್ ಮಹಿಳೆಯರ ಏಕದಿನ ಕ್ರಿಕೆಟ್ ಟ್ರೋಫಿ ಟೂರ್ನಿಯಲ್ಲಿ 89 ರನ್ಗಳಿಂದ ವಿದರ್ಭ ತಂಡವನ್ನು ಮಣಿಸಿತು.</p>.<p>ಭುವನೇಶ್ವರದ ಕೆಐಐಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು ದಿವ್ಯಾ (ಔಟಾಗದೆ 137; 137ಎ, 4X15, 6X6) ಅವರ ಬ್ಯಾಟಿಂಗ್ ಬಲದಿಂದ 50 ಓವರ್ಗಳಲ್ಲಿ 7 ವಿಕೆಟ್ಗೆ 250 ರನ್ ಗಳಿಸಿತು. ರೋಷನಿ ಕಿರಣ್ (38), ಪುಷ್ಪಾ ಕಿರೇಸೂರು (35) ಉಪಯುಕ್ತ ಕಾಣಿಕೆ ನೀಡಿದರು.</p>.<p>ಗುರಿಯನ್ನು ಬೆನ್ನಟ್ಟಿದ ವಿದರ್ಭದ ಬ್ಯಾಟರ್ಗಳು ಕರ್ನಾಟಕದ ಬೌಲರ್ಗಳ ದಾಳಿಯೆದುರು ತತ್ತರಿಸಿದರು. ಹೀಗಾಗಿ, 41.4 ಓವರ್ಗಳಲ್ಲಿ 161 ರನ್ಗೆ ತಂಡವು ಕುಸಿಯಿತು. ಎಲ್.ಎಂ. ಇನಾಮದಾರ (61;80ಎ, 4X8) ಮತ್ತು ಡಿ.ಡಿ. ಕಸತ್ (45) ಹೊರತುಪಡಿಸಿ ಉಳಿದವರು ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬೌಲಿಂಗ್ನಲ್ಲೂ ಮಿಂಚಿದ ಪುಷ್ಪಾ 25 ರನ್ಗೆ ಮೂರು ವಿಕೆಟ್ ಗಳಿಸಿದರು. ಸಹನಾ ಎಸ್. ಪವಾರ್ ಮತ್ತು ರೋಹಿತಾ ಚೌಧರಿ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದರು.</p>.<p>ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 50 ಓವರ್ಗಳಲ್ಲಿ 7 ವಿಕೆಟ್ಗೆ 250 (ರೋಷನಿ ಕಿರಣ್ 38, ವೃಂದಾ ದಿನೇಶ್ 23, ದಿವ್ಯಾ ಜ್ಞಾನಾನಂದ ಔಟಾಗದೆ 137, ಪುಷ್ಪಾ ಕಿರೇಸೂರು 35). ವಿದರ್ಭ: 41.4 ಓವರ್ಗಳಲ್ಲಿ 161 (ಡಿ.ಡಿ. ಕಸತ್ 45, ಎಲ್.ಎಂ. ಇನಾಮದಾರ 61; ಪುಷ್ಪಾ ಕಿರೇಸೂರು 25ಕ್ಕೆ 3, ರೋಹಿತಾ ಚೌಧರಿ 28ಕ್ಕೆ 2, ಸಹನಾ ಎಸ್. ಪವಾರ್ 30ಕ್ಕೆ 3)</p>.<p>ಫಲಿತಾಂಶ: ಕರ್ನಾಟಕಕ್ಕೆ 89 ರನ್ ಜಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>