ಬುಲ್ಸ್ ತಂಡದ ಆಟಗಾರರು ಹಾಗೂ ಸಿಬ್ಬಂದಿ ನಗರದ ತಕ್ಷಶಿಲಾ ಅಕಾಡೆಮಿ ಸಹಯೋಗದಲ್ಲಿ ಗುರುವಾರ ಹುಬ್ಬಳ್ಳಿಯಲ್ಲಿ ‘ಅನಾಥ ಮಕ್ಕಳಿಗಾಗಿ ಸ್ಫೂರ್ತಿ’ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಆಟಗಾರರು ಮಕ್ಕಳ ಜೊತೆ ಬೆರೆತು ಸಂಭ್ರಮಿಸಿ, ಹೆಜ್ಜೆ ಹಾಕಿದರು. ಅವರೊಂದಿಗೆ ಊಟ ಮಾಡಿದರು. ಸಾಧನೆಗೆ ಸ್ಫೂರ್ತಿಯಾಗುವ ಮಾತು ಗಳನ್ನು ಹೇಳಿದರು.