<p><strong>ನವದೆಹಲಿ:</strong> ದೇಶದಲ್ಲಿ ಫುಟ್ಬಾಲ್ ರೆಫ್ರಿಗಳ ಸ್ಥಿತಿಗತಿಯ ಪರಾಮರ್ಶೆ ನಡೆಸಲು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಅಧ್ಯಕ್ಷ ಕಲ್ಯಾಣ್ ಚೌಬೆ ಅವರು ಡಿ.31ರಂದು ಸಭೆಯನ್ನು ಕರೆದಿದ್ದಾರೆ.</p>.<p>ಕಲ್ಯಾಣ್ ಚೌಬೆ ಅವರು ರೆಫ್ರಿಗಳ ಸಮಿತಿಯ ಸದಸ್ಯರು, ಎಐಎಫ್ಎಫ್ ಮುಖ್ಯ ರೆಫ್ರಿಯಿಂಗ್ ಅಧಿಕಾರಿ ಟ್ರೆವರ್ ಕೆಟಲ್ ಮತ್ತು ರೆಫ್ರಿಗಳ ಮೌಲ್ಯಮಾಪಕರ ತಂಡವನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಲು ಮತ್ತು ಮುಂದಿನ ಮಾರ್ಗಗಳ ಕುರಿತು ಚರ್ಚಿಸಲು ಸಿದ್ಧರಾಗಿದ್ದಾರೆ ಎಂದು ಎಐಎಫ್ಎಫ್ ಹೇಳಿದೆ.</p>.<p>ಇತ್ತೀಚೆಗೆ ರೆಫರಿಗಳು ತೆಗೆದುಕೊಂಡ ಕೆಲ ನಿರ್ಧಾರಗಳು ಫುಟ್ಬಾಲ್ ಕ್ಷೇತ್ರದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ. ಇಂಡಿಯನ್ ಸೂಪರ್ ಲೀಗ್ನ ಮುಂಬೈ ಸಿಟಿ ಎಫ್ಸಿ ಮತ್ತು ಮೋಹನ್ ಬಾಗನ್ ತಂಡಗಳ ನಡುವಣ ಪಂದ್ಯದಲ್ಲಿ ಏಳು ಆಟಗಾರರನ್ನು ಹೊರಕಳುಹಿಸಲಾಗಿತ್ತು. ರೆಫ್ರಿಗಳ ಈ ನಿರ್ಧಾರ ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಇದೇ ಪಂದ್ಯದಲ್ಲಿ ಏಳು ಮಂದಿಗೆ ಎಚ್ಚರಿಕೆ ನೀಡಲಾಗಿತ್ತು. ಆತಿಥೇಯ ಮುಂಬೈ ಸಿಟಿ ಈ ಪಂದ್ಯವನ್ನು 2–1 ಗೋಲುಗಳಿಂದ ಗೆದ್ದುಕೊಂಡಿತ್ತು.</p>.<p>ಎಫ್ಸಿ ಗೋವಾ ವಿರುದ್ಧದ ಪಂದ್ಯದಲ್ಲಿ ರೆಫ್ರೀಗಳ ನಿರ್ಧಾರದ ಬಗ್ಗೆ ಈಸ್ಟ್ ಬೆಂಗಾಲ್ ತಂಡವು ದೂರು ದಾಖಲಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೇಶದಲ್ಲಿ ಫುಟ್ಬಾಲ್ ರೆಫ್ರಿಗಳ ಸ್ಥಿತಿಗತಿಯ ಪರಾಮರ್ಶೆ ನಡೆಸಲು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಅಧ್ಯಕ್ಷ ಕಲ್ಯಾಣ್ ಚೌಬೆ ಅವರು ಡಿ.31ರಂದು ಸಭೆಯನ್ನು ಕರೆದಿದ್ದಾರೆ.</p>.<p>ಕಲ್ಯಾಣ್ ಚೌಬೆ ಅವರು ರೆಫ್ರಿಗಳ ಸಮಿತಿಯ ಸದಸ್ಯರು, ಎಐಎಫ್ಎಫ್ ಮುಖ್ಯ ರೆಫ್ರಿಯಿಂಗ್ ಅಧಿಕಾರಿ ಟ್ರೆವರ್ ಕೆಟಲ್ ಮತ್ತು ರೆಫ್ರಿಗಳ ಮೌಲ್ಯಮಾಪಕರ ತಂಡವನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಲು ಮತ್ತು ಮುಂದಿನ ಮಾರ್ಗಗಳ ಕುರಿತು ಚರ್ಚಿಸಲು ಸಿದ್ಧರಾಗಿದ್ದಾರೆ ಎಂದು ಎಐಎಫ್ಎಫ್ ಹೇಳಿದೆ.</p>.<p>ಇತ್ತೀಚೆಗೆ ರೆಫರಿಗಳು ತೆಗೆದುಕೊಂಡ ಕೆಲ ನಿರ್ಧಾರಗಳು ಫುಟ್ಬಾಲ್ ಕ್ಷೇತ್ರದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ. ಇಂಡಿಯನ್ ಸೂಪರ್ ಲೀಗ್ನ ಮುಂಬೈ ಸಿಟಿ ಎಫ್ಸಿ ಮತ್ತು ಮೋಹನ್ ಬಾಗನ್ ತಂಡಗಳ ನಡುವಣ ಪಂದ್ಯದಲ್ಲಿ ಏಳು ಆಟಗಾರರನ್ನು ಹೊರಕಳುಹಿಸಲಾಗಿತ್ತು. ರೆಫ್ರಿಗಳ ಈ ನಿರ್ಧಾರ ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಇದೇ ಪಂದ್ಯದಲ್ಲಿ ಏಳು ಮಂದಿಗೆ ಎಚ್ಚರಿಕೆ ನೀಡಲಾಗಿತ್ತು. ಆತಿಥೇಯ ಮುಂಬೈ ಸಿಟಿ ಈ ಪಂದ್ಯವನ್ನು 2–1 ಗೋಲುಗಳಿಂದ ಗೆದ್ದುಕೊಂಡಿತ್ತು.</p>.<p>ಎಫ್ಸಿ ಗೋವಾ ವಿರುದ್ಧದ ಪಂದ್ಯದಲ್ಲಿ ರೆಫ್ರೀಗಳ ನಿರ್ಧಾರದ ಬಗ್ಗೆ ಈಸ್ಟ್ ಬೆಂಗಾಲ್ ತಂಡವು ದೂರು ದಾಖಲಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>