<p><strong>ಕೋಲ್ಕತ್ತ:</strong> ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಆಡುವ ಎಟಿಕೆ ಮೋಹನ ಬಾಗನ್ (ಎಟಿಕೆಎಂಬಿ) ತಂಡವು ರಾಯ್ ಕೃಷ್ಣ ಜೊತೆಗಿನ ಒಪ್ಪಂದವನ್ನು ವಿಸ್ತರಿಸಿಕೊಂಡಿದೆ.</p>.<p>ಕ್ಲಬ್ನ ‘ಮೋಹನ್ ಬಾಗನ್ ದಿನಾಚರಣೆ‘ಯ ದಿನವೇ ಫಿಜಿಯ ಆಟಗಾರನೊಂದಿಗಿನ ಒಪ್ಪಂದವನ್ನು ವಿಸ್ತರಿಸಲಾಗಿದೆ.</p>.<p>‘ವಿಶೇಷ ದಿನವೇ ಕ್ಲಬ್ನೊಂದಿಗೆ ಮುಂದುವರಿಯುತ್ತಿರುವ ಗೌರವ ದೊರೆತಿದೆ. ಕ್ಲಬ್ನ ಎಲ್ಲರ ಸಹಕಾರ ಮೊದಲಿನಂತೆಯೇ ಮುಂದುವರಿಯಲಿದೆ ಎಂಬ ವಿಶ್ವಾಸವಿದೆ‘ ಎಂದು 33 ವರ್ಷದ ಕೃಷ್ಣ ಹೇಳಿದ್ದಾರೆ.</p>.<p>ಎಟಿಕೆಎಂಬಿ ತಂಡವು ಮಾಲ್ಡೀವ್ಸ್ನಲ್ಲಿ ನಡೆಯಲಿರುವ ಎಎಫ್ಸಿ ಕಪ್ ಟೂರ್ನಿಗಾಗಿ ಈಗಾಗಲೇ ಸಿದ್ಧತೆಯನ್ನು ಆರಂಭಿಸಿದೆ. ಟೂರ್ನಿಯಲ್ಲಿ ಆಗಸ್ಟ್ 18ರಂದು ನಡೆಯುವ ‘ಡಿ’ ಗುಂಪಿನ ಪಂದ್ಯದಲ್ಲಿ, ಬೆಂಗಳೂರು ಎಫ್ಸಿ– ಈಗಲ್ಸ್ ಎಫ್ಸಿ ನಡುವಣ ವಿಜೇತರನ್ನು ಎದುರಿಸಲಿದೆ.</p>.<p>2019–20ರ ಋತುವಿನಲ್ಲಿ ಎಟಿಕೆ ಎಫ್ಸಿ ಪರ 15 ಗೋಲು ದಾಖಲಿಸಿದ್ದ ಕೃಷ್ಣ, ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಋತುವಿನಲ್ಲಿ ಕೃಷ್ಣ 23 ಪಂದ್ಯಗಳಲ್ಲಿ 22 ಗೋಲುಗಳನ್ನು ಹೊಡೆದು ‘ಚಿನ್ನದ ಚೆಂಡು‘ ಗೌರವಕ್ಕೆ ಭಾಜನರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಆಡುವ ಎಟಿಕೆ ಮೋಹನ ಬಾಗನ್ (ಎಟಿಕೆಎಂಬಿ) ತಂಡವು ರಾಯ್ ಕೃಷ್ಣ ಜೊತೆಗಿನ ಒಪ್ಪಂದವನ್ನು ವಿಸ್ತರಿಸಿಕೊಂಡಿದೆ.</p>.<p>ಕ್ಲಬ್ನ ‘ಮೋಹನ್ ಬಾಗನ್ ದಿನಾಚರಣೆ‘ಯ ದಿನವೇ ಫಿಜಿಯ ಆಟಗಾರನೊಂದಿಗಿನ ಒಪ್ಪಂದವನ್ನು ವಿಸ್ತರಿಸಲಾಗಿದೆ.</p>.<p>‘ವಿಶೇಷ ದಿನವೇ ಕ್ಲಬ್ನೊಂದಿಗೆ ಮುಂದುವರಿಯುತ್ತಿರುವ ಗೌರವ ದೊರೆತಿದೆ. ಕ್ಲಬ್ನ ಎಲ್ಲರ ಸಹಕಾರ ಮೊದಲಿನಂತೆಯೇ ಮುಂದುವರಿಯಲಿದೆ ಎಂಬ ವಿಶ್ವಾಸವಿದೆ‘ ಎಂದು 33 ವರ್ಷದ ಕೃಷ್ಣ ಹೇಳಿದ್ದಾರೆ.</p>.<p>ಎಟಿಕೆಎಂಬಿ ತಂಡವು ಮಾಲ್ಡೀವ್ಸ್ನಲ್ಲಿ ನಡೆಯಲಿರುವ ಎಎಫ್ಸಿ ಕಪ್ ಟೂರ್ನಿಗಾಗಿ ಈಗಾಗಲೇ ಸಿದ್ಧತೆಯನ್ನು ಆರಂಭಿಸಿದೆ. ಟೂರ್ನಿಯಲ್ಲಿ ಆಗಸ್ಟ್ 18ರಂದು ನಡೆಯುವ ‘ಡಿ’ ಗುಂಪಿನ ಪಂದ್ಯದಲ್ಲಿ, ಬೆಂಗಳೂರು ಎಫ್ಸಿ– ಈಗಲ್ಸ್ ಎಫ್ಸಿ ನಡುವಣ ವಿಜೇತರನ್ನು ಎದುರಿಸಲಿದೆ.</p>.<p>2019–20ರ ಋತುವಿನಲ್ಲಿ ಎಟಿಕೆ ಎಫ್ಸಿ ಪರ 15 ಗೋಲು ದಾಖಲಿಸಿದ್ದ ಕೃಷ್ಣ, ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಋತುವಿನಲ್ಲಿ ಕೃಷ್ಣ 23 ಪಂದ್ಯಗಳಲ್ಲಿ 22 ಗೋಲುಗಳನ್ನು ಹೊಡೆದು ‘ಚಿನ್ನದ ಚೆಂಡು‘ ಗೌರವಕ್ಕೆ ಭಾಜನರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>