ವಿಶ್ವಾಸ್ ಗಳಿಸಿದ ಗೋಲಿನ ನಂತರ ಪಂದ್ಯದಲ್ಲಿ ಸಮಬಲ ಸಾಧಿಸಲು ಎಡಿಇ ತಂಡಕ್ಕೆ ಉತ್ತಮ ಅವಕಾಶ ಲಭಿಸಿತ್ತು. ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ‘ಡಿ’ ವಲಯದಲ್ಲಿ ಬಿಎಫ್ಸಿ ಆಟಗಾರ ಎಸಗಿದ ತಪ್ಪಿಗೆ ರೆಫರಿ ಕಮಲ್, ಪೆನಾಲ್ಟಿ ನೀಡಿದರು. ಸ್ಟೀಫನ್ ರಾಜ್ಕಿರಣ್ ಒದ್ದ ಚೆಂಡನ್ನು ಬಿಎಫ್ಸಿ ಗೋಲ್ಕೀಪರ್ ಆದಿತ್ಯ ಪಾತ್ರಾ ಮೋಹಕವಾಗಿ ತಡೆದು ತಂಡವನ್ನು ಅಪಾಯದಿಂದ ರಕ್ಷಿಸಿದರು.