ಕೋಲ್ಕತ್ತ: ಹೊಸ ನಿಯಮ ಜಾರಿಯಿಂದಾಗಿ ಡೇವಿಸ್ ಕಪ್ನಲ್ಲಿ ಸಾಮರ್ಥ್ಯ ತೋರಲು ಸಾಕಷ್ಟು ಅವಕಾಶಗಳು ಲಭಿಸಲಿವೆ ಎಂದು ಭಾರತದ ಪ್ರಜ್ಞೇಶ್ ಗುಣೇಶ್ವರನ್ ಅಭಿಪ್ರಾಯಪಟ್ಟರು.
ಇಟಲಿ ಎದುರಿನ ಅರ್ಹತಾ ಸುತ್ತಿನ ಹಣಾಹಣಿಯಲ್ಲಿ ಕಣಕ್ಕೆ ಇಳಿಯಲು ಗುಣೇಶ್ವರನ್ ಸಿದ್ಧತೆ ನಡೆಸುತ್ತಿದ್ದಾರೆ. ಅವರು ಸಿಂಗಲ್ಸ್ ವಿಭಾಗದಲ್ಲಿ ಈಗಭಾರತದ ಪ್ರಮುಖ ಆಟಗಾರ ಆಗಿದ್ದಾರೆ.
ಮ್ಯಾಡ್ರಿಡ್ನಲ್ಲಿ ನವೆಂಬರ್ನಲ್ಲಿ ವಿಶ್ವ ಗುಂಪು ಫೈನಲ್ಸ್ ನಡೆಯಲಿದೆ. ಇದಕ್ಕೂ ಮೊದಲು ವಿಶ್ವದ ವಿವಿಧ ಕಡೆಗಳಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಹೊಸ ನಿಯಮದ ಪ್ರಕಾರ ಶುಕ್ರವಾರ ಮತ್ತು ಶನಿವಾರಗಳಲ್ಲಿ ಮೂರು ಸೆಟ್ಗಳ ಸ್ಪರ್ಧೆಗಳು ನಡೆಯಲಿವೆ. 24 ತಂಡಗಳು ಹಣಾಹಣಿಯಲ್ಲಿ ಇವೆ.
ಸೋಮವಾರ ಬಿಡುಗಡೆಯಾದ ವಿಶ್ವ ರ್ಯಾಂಕಿಂಗ್ನಲ್ಲಿ ಗುಣೇಶ್ವರನ್ ಅಪೂರ್ವ ಸಾಧನೆ ಮಾಡಿದ್ದಾರೆ. ಏಳು ಸ್ಥಾನಗಳ ಏರಿಕೆ ಕಂಡಿರುವ ಅವರು ಜೀವನಶ್ರೇಷ್ಠ 102ನೇ ಸ್ಥಾನ ತಲುಪಿದ್ದಾರೆ.