ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಸ್ತಂಭನ: ಮೈದಾನದಲ್ಲೇ ಫುಟ್‌ಬಾಲ್‌ ಆಟಗಾರ ಸಾವು

Last Updated 30 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

ಮಲಪ್ಪುರಂ: ಅಂಗಣದಲ್ಲೇ ಫುಟ್‌ಬಾಲ್‌ ಆಟಗಾರ ಹೃದಯಸ್ತಂಭನದಿಂದ ಮೃತಪಟ್ಟ ಘಟನೆ ಕೇರಳದ ಪೆರಿಂದಲ್‌ಮಣ್ಣದಲ್ಲಿ ನೆಡದಿದೆ. ಧನರಾಜನ್‌ ರಾಧಾಕೃಷ್ಣನ್‌ (39) ಮೃತಪಟ್ಟವರು.

ಎಫ್‌ಸಿ ಪೆರಿಂದಲ್‌ಮಣ್ಣ ಹಾಗೂ ತ್ರಿಶೂರಿನ ಶಾಸ್ತಾ ಮೆಡಿಕಲ್ಸ್ ಎಫ್‌ಸಿ ನಡುವೆ ಸೆವೆನ್ಸ್ ಪಂದ್ಯ ನಡೆಯುತ್ತಿತ್ತು. ಪೆರಿಂದಲ್‌ಮಣ್ಣ ತಂಡಕ್ಕೆ ಆಡುತ್ತಿದ್ದ ಧನರಾಜನ್‌ 27ನೇ ನಿಮಿಷ ಕುಸಿದು ಬಿದ್ದರು. ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ರಾತ್ರಿ 10.20ರ ವೇಳೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 2012 ರಿಂದ 14ರ ಅವಧಿಯಲ್ಲಿ ಕೋಲ್ಕತ್ತ ಪ್ರಮುಖ ಕ್ಲಬ್‌ಗಳಿಗೆ ಆಡಿದ್ದ ಅವರು ಸಂತೋಷ್‌ ಟ್ರೋಫಿ ಟೂರ್ನಿಯಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT