ನಂತರ, ಭಾರತ ತಂಡ ಹಲವು ಬಾರಿ ಗೋಲು ಗಳಿಸಲು ಯತ್ನಿಸಿತು. ಆದರೆ, ಎದುರಾಳಿ ತಂಡದ ರಕ್ಷಣಾ ಪಡೆಯ ಆಟಗಾರರು ಅದಕ್ಕೆ ಅವಕಾಶ ನೀಡಲಿಲ್ಲ. ಅವರ ಎಚ್ಚರಿಕೆಯ ಆಟಕ್ಕೆ ಪ್ರತಿತಂತ್ರ ಹೆಣೆಯಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಭಾರತಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತು. ಈ ಅವಕಾಶವನ್ನು ವಿಕ್ರಮ್ ಅವರು ಸದುಪಯೋಗಪಡಿಸಿಕೊಂಡರು. ಅವರು ಹಿನ್ನಡೆಯನ್ನು 2–1ಕ್ಕೆ ತಗ್ಗಿಸಿದರು.