ಯು.ಟಿ.ಖಾದರ್ ನಿವಾಸದಲ್ಲಿ ಪಾರ್ಟಿ
ಸಿದ್ದರಾಮಯ್ಯ ಭೇಟಿ ನೀಡಿದ ಜಾಗದಲ್ಲೆಲ್ಲ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಸಂತೋಷ್ ಕುಟುಂಬಕ್ಕೆ ಸಾಂತ್ವನ ಹೇಳಬೇಕಿದ್ದ ಅವರು ಸಚಿವ ಯು.ಟಿ.ಖಾದರ್ ನಿವಾಸಕ್ಕೆ ಹೋಗಿ ಪಾರ್ಟಿ ಮಾಡಿದ್ದಾರೆ. ಜತೆಗೆ ನೃತ್ಯ ಮಾಡಿದ್ದಾರೆ. ಸಮೀಪದಲ್ಲೇ ಸಂತೋಷ್ ಮನೆ ಇದ್ದರೂ ಅಲ್ಲಿಗೆ ಹೋಗದೆ ಮಾನವೀಯತೆ ಮರೆತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.