ಬುಧವಾರ ಆನ್ಲೈನ್ ಮೂಲಕ 25 ಸಾವಿರ ವಿದ್ಯಾರ್ಥಿಗಳಿಗೆ ಪಾಠ ಹೇಳಿದ ಅವರು, ‘ಎಲ್ಲರ ಜೀವನದಲ್ಲಿಯೂ ಹಲವಾರು ಅಡೆತಡೆಗಳು ಬರುತ್ತವೆ. ಅದರೆ ನಿರಂತರವಾಗಿ ಶ್ರಮಿಸುತ್ತ ಮುಂದುವರಿಯಬೇಕು. ಗುರಿಯನ್ನು ತಲುಪುವಾಗ ಚಿತ್ತ ಕಲಕುವ ಸಾಧ್ಯತೆಗಳು ಹಲವಿರುತ್ತವೆ. ಏಕಾಗ್ರತೆ, ಕಠಿಣ ಪರಿಶ್ರಮದಿಂದ ಮುನ್ನುಗ್ಗಬೇಕು’ ಎಂದರು. ’ಲೆಜೆಂಡ್ಸ್ ಆನ್ ಅನ್ಅಕಾಡೆಮಿ’ ಕಾರ್ಯಕ್ರಮ ಅಂಗವಾಗಿ ಅವರು ಸಂವಾದ ನಡೆಸಿದರು.