<p><strong>ಶಿವಮೊಗ್ಗ</strong>: ಬೆಂಗಳೂರಿನ ವಿವಾನ್ ಸಚದೇವ್ ಮತ್ತು ಆರುಷಿ ಸೆವೆರಿನ್ ಹೆಲೆನ್ ಡಿಸಿಲ್ವ ಅವರು ರಾಜ್ಯ 19 ವರ್ಷದೊಳಗಿನವರ ಫಿಡೆ ರೇಟೆಡ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಓಪನ್ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.</p><p>ವಿವಾನ್ 9 ಸುತ್ತುಗಳಲ್ಲಿ ಒಂದೂ ಪಂದ್ಯ ಸೋಲದೇ 8.5 ಪಾಯಿಂಟ್ಸ್ ಕಲೆಹಾಕಿದರು. ಟ್ರೋಫಿ ಜೊತೆ ₹7000 ನಗದು ಬಹುಮಾನ ಪಡೆದರು.</p><p>ಚಾಣಕ್ಯ ಚೆಸ್ ಸ್ಕೂಲ್ ಮತ್ತು ಜೆಸಿಐ ಶಿವಮೊಗ್ಗ ಚಿರಂತನ ಜಂಟಿ ಆಶ್ರಯದಲ್ಲಿ ಈ ಮೂರು ದಿನಗಳ ಚಾಂಪಿಯನ್ಷಿಪ್ ಭಾನುವಾರ ಮುಕ್ತಾಯಗೊಂಡಿತು.</p><p>ಬೆಂಗಳೂರು ನಗರದ ಕೃಷ್ಣ (7.5), ದಕ್ಷಿಣ ಕನ್ನಡದ ರವೀಶ್ ಕೋಟೆ, ಬೆಂಗಳೂರಿನ ಅರುಳ್ ಆನಂದ್ (7.5) ಮತ್ತು ಮೈಸೂರಿನ ಈಶ್ವರ್ ವಿ. ಅಯ್ಯಪ್ಪನ್ (7) ಕಮವಾಗಿ ಎರಡರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.</p><p>ಬಾಲಕಿಯರ ವಿಭಾಗದಲ್ಲಿ ಆರುಷಿ ಎಲ್ಲ ಸುತ್ತುಗಳನ್ನು ಗೆದ್ದು ಸಂಭವನೀಯ 9 ಪಾಯಿಂಟ್ಸ್ ಪಡೆದರು. ಅವರು ಟ್ರೋಫಿ ಜೊತೆ ₹7,000 ಬಹುಮಾನ ಪಡೆದರು. ಮೈಸೂರಿನ ಪ್ರಸಿದ್ಧಿ ಭಟ್ (7 ಪಾಯಿಂಟ್ಸ್), ಬೆಂಗಳೂರು ನಗರದ ದೃಷ್ಟಿ ಘೋಷ್ (6.5), ದಕ್ಷಿಣ ಕನ್ನಡದ ಆದ್ಯಾ ಶೆಟ್ಟಿ (6.5), ಬೆಂಗಳೂರು ನಗರದ ಕೃಪಾ ಎಸ್.ಉಕ್ಕಲಿ (6.5) ಅವರು ಎರಡರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಬೆಂಗಳೂರಿನ ವಿವಾನ್ ಸಚದೇವ್ ಮತ್ತು ಆರುಷಿ ಸೆವೆರಿನ್ ಹೆಲೆನ್ ಡಿಸಿಲ್ವ ಅವರು ರಾಜ್ಯ 19 ವರ್ಷದೊಳಗಿನವರ ಫಿಡೆ ರೇಟೆಡ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಓಪನ್ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.</p><p>ವಿವಾನ್ 9 ಸುತ್ತುಗಳಲ್ಲಿ ಒಂದೂ ಪಂದ್ಯ ಸೋಲದೇ 8.5 ಪಾಯಿಂಟ್ಸ್ ಕಲೆಹಾಕಿದರು. ಟ್ರೋಫಿ ಜೊತೆ ₹7000 ನಗದು ಬಹುಮಾನ ಪಡೆದರು.</p><p>ಚಾಣಕ್ಯ ಚೆಸ್ ಸ್ಕೂಲ್ ಮತ್ತು ಜೆಸಿಐ ಶಿವಮೊಗ್ಗ ಚಿರಂತನ ಜಂಟಿ ಆಶ್ರಯದಲ್ಲಿ ಈ ಮೂರು ದಿನಗಳ ಚಾಂಪಿಯನ್ಷಿಪ್ ಭಾನುವಾರ ಮುಕ್ತಾಯಗೊಂಡಿತು.</p><p>ಬೆಂಗಳೂರು ನಗರದ ಕೃಷ್ಣ (7.5), ದಕ್ಷಿಣ ಕನ್ನಡದ ರವೀಶ್ ಕೋಟೆ, ಬೆಂಗಳೂರಿನ ಅರುಳ್ ಆನಂದ್ (7.5) ಮತ್ತು ಮೈಸೂರಿನ ಈಶ್ವರ್ ವಿ. ಅಯ್ಯಪ್ಪನ್ (7) ಕಮವಾಗಿ ಎರಡರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.</p><p>ಬಾಲಕಿಯರ ವಿಭಾಗದಲ್ಲಿ ಆರುಷಿ ಎಲ್ಲ ಸುತ್ತುಗಳನ್ನು ಗೆದ್ದು ಸಂಭವನೀಯ 9 ಪಾಯಿಂಟ್ಸ್ ಪಡೆದರು. ಅವರು ಟ್ರೋಫಿ ಜೊತೆ ₹7,000 ಬಹುಮಾನ ಪಡೆದರು. ಮೈಸೂರಿನ ಪ್ರಸಿದ್ಧಿ ಭಟ್ (7 ಪಾಯಿಂಟ್ಸ್), ಬೆಂಗಳೂರು ನಗರದ ದೃಷ್ಟಿ ಘೋಷ್ (6.5), ದಕ್ಷಿಣ ಕನ್ನಡದ ಆದ್ಯಾ ಶೆಟ್ಟಿ (6.5), ಬೆಂಗಳೂರು ನಗರದ ಕೃಪಾ ಎಸ್.ಉಕ್ಕಲಿ (6.5) ಅವರು ಎರಡರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>