<p><strong>ಮೈಸೂರು:</strong> ಶ್ರೀಧರ್ ಎನ್.ಸವನೂರ ಮತ್ತು ಭಾವನಾ ಎಂ.ಪಾಟೀಲ ಅವರು ದಸರಾ ಅಂಗವಾಗಿ ಬುಧವಾರ ಆಯೋಜಿಸಿದ್ದ ಸೈಕ್ಲಿಂಗ್ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಚಾಂಪಿಯನ್ ಆದರು.</p>.<p>ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಅನುಭವ ಹೊಂದಿರುವ ಬಾಗಲಕೋಟೆಯ ಶ್ರೀಧರ್ ಅವರು 90 ಕಿ.ಮೀ. ಸ್ಪರ್ಧೆಯ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ಅಗ್ರಸ್ಥಾನ ಪಡೆದರು. ಬಾಗಲಕೋಟೆಯ ರಾಜು ಎ. ಬಾಟಿ ಮತ್ತು ಬಸಪ್ಪ ಎಂ.ತೇರದಾಳ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.</p>.<p>ಮಹಿಳೆಯರಿಗೆ ಆಯೋಜಿಸಿದ್ದ 50 ಕಿ.ಮೀ. ಸ್ಪರ್ಧೆಯಲ್ಲಿ ಭಾವನಾ ಮೊದಲ ಸ್ಥಾನ ಗಳಿಸಿದರು. ವಿಜಯಪುರದ ಸ್ಪರ್ಧಿಗಳಾದ ಪಾಯಲ್ ಕೆ.ಚವಾಣ್ ಮತ್ತು ಸೌಮ್ಯಾ ಸಿ.ಅಂತಪುರ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.</p>.<p>ಪುರುಷರ ವಿಭಾಗದಲ್ಲಿ 180 ಮತ್ತು ಮಹಿಳೆಯರ ವಿಭಾಗದಲ್ಲಿ 80 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಎರಡೂ ವಿಭಾಗಗಳಲ್ಲಿ ಮೊದಲ ಆರು ಸ್ಥಾನಗಳನ್ನು ಪಡೆದವರು ಕ್ರಮವಾಗಿ ₹ 30 ಸಾವಿರ, ₹ 25 ಸಾವಿರ, ₹ 20 ಸಾವಿರ, ₹ 15 ಸಾವಿರ, ₹ 10 ಸಾವಿರ ಮತ್ತು ₹ 5 ಸಾವಿರ ನಗದು ಬಹುಮಾನ ಪಡೆದುಕೊಂಡರು.</p>.<p><strong>ಫಲಿತಾಂಶದ ವಿವರ: ಪುರುಷರ ವಿಭಾಗ:</strong> ಶ್ರೀಧರ್ ಎನ್.ಸವನೂರ (ಬಾಗಲಕೋಟೆ)–1, ರಾಜು ಎ ಬಾಟಿ (ಬಾಗಲಕೋಟೆ)–2, ಬಸಪ್ಪ ಎಂ.ತೇರದಾಳ (ಬಾಗಲಕೋಟೆ)–3, ಸಂತೋಷ್ ವಿ.ವಿಭೂತಿಹಳ್ಳಿ (ಗದಗ)–4, ಸಂತೋಷ್ ಎಸ್.ಕುರಣಿ (ವಿಜಯಪುರ)–5, ಬಸವರಾಜ್ ಟಿ.ಬಾಗಲಕೋಟೆ (ಬಾಗಲಕೋಟೆ)–6</p>.<p><strong>ಮಹಿಳೆಯರ ವಿಭಾಗ:</strong> ಭಾವನಾ ಎಂ.ಪಾಟೀಲ (ಬಾಗಲಕೋಟೆ)–1, ಪಾಯಲ್ ಕೆ.ಚವಾಣ್ (ವಿಜಯಪುರ)–2, ಸೌಮ್ಯಾ ಸಿ.ಅಂತಪುರ (ವಿಜಯಪುರ)–3, ದಾನಮ್ಮ ಕೆ.ಜಿ (ವಿಜಯಪುರ)–4, ರೇಣಿಕಾ ಪಿ.ದಂಡಿನ್ (ಬಾಗಲಕೋಟೆ)–5, ಕಾವೇರಿ ಮುರ್ನಾಲ್ (ವಿಜಯಪುರ)–6</p>.<p><strong>ಬಿದ್ದು ಗಾಯಗೊಂಡ ಯಲುಗುರೇಶ್</strong></p>.<p>ಕಳೆದ ದಸರಾದಲ್ಲಿ ಪುರುಷರ ‘ಟೀಮ್ ಟೈಮ್ ಟ್ರಯಲ್’ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ವಿಜಯಪುರ ತಂಡದಲ್ಲಿದ್ದ ಯಲುಗುರೇಶ್ ಗಡ್ಡಿ ಅವರಿಗೆ ದುರದೃಷ್ಟ ಕಾಡಿತು. ಸ್ಪರ್ಧೆ ಆರಂಭವಾಗಿ ಸುಮಾರು 3 ಕಿ.ಮೀ ಕ್ರಮಿಸಿದಾಗ ಬಿದ್ದು ಸ್ಪರ್ಧೆಯಿಂದ ಹಿಂದೆ ಸರಿದರು. ಅವರ ಎಡಗೈ ಮಣಿಕಟ್ಟಿನ ಮೂಳೆ ಮುರಿದಿದೆ.</p>.<p>‘ನನ್ನ ಮುಂದಿದ್ದ ಸೈಕ್ಲಿಸ್ಟ್ ಬಿದ್ದರು. ಅವರ ಸೈಕಲ್ಗೆ ತಾಗಿ ನಾನೂ ಬಿದ್ದುಬಿಟ್ಟೆ. ತುಂಬಾ ನಿರಾಸೆಯಾಗಿದೆ’ ಎಂದು ಯಲುಗುರೇಶ್ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಶ್ರೀಧರ್ ಎನ್.ಸವನೂರ ಮತ್ತು ಭಾವನಾ ಎಂ.ಪಾಟೀಲ ಅವರು ದಸರಾ ಅಂಗವಾಗಿ ಬುಧವಾರ ಆಯೋಜಿಸಿದ್ದ ಸೈಕ್ಲಿಂಗ್ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಚಾಂಪಿಯನ್ ಆದರು.</p>.<p>ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಅನುಭವ ಹೊಂದಿರುವ ಬಾಗಲಕೋಟೆಯ ಶ್ರೀಧರ್ ಅವರು 90 ಕಿ.ಮೀ. ಸ್ಪರ್ಧೆಯ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ಅಗ್ರಸ್ಥಾನ ಪಡೆದರು. ಬಾಗಲಕೋಟೆಯ ರಾಜು ಎ. ಬಾಟಿ ಮತ್ತು ಬಸಪ್ಪ ಎಂ.ತೇರದಾಳ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.</p>.<p>ಮಹಿಳೆಯರಿಗೆ ಆಯೋಜಿಸಿದ್ದ 50 ಕಿ.ಮೀ. ಸ್ಪರ್ಧೆಯಲ್ಲಿ ಭಾವನಾ ಮೊದಲ ಸ್ಥಾನ ಗಳಿಸಿದರು. ವಿಜಯಪುರದ ಸ್ಪರ್ಧಿಗಳಾದ ಪಾಯಲ್ ಕೆ.ಚವಾಣ್ ಮತ್ತು ಸೌಮ್ಯಾ ಸಿ.ಅಂತಪುರ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.</p>.<p>ಪುರುಷರ ವಿಭಾಗದಲ್ಲಿ 180 ಮತ್ತು ಮಹಿಳೆಯರ ವಿಭಾಗದಲ್ಲಿ 80 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಎರಡೂ ವಿಭಾಗಗಳಲ್ಲಿ ಮೊದಲ ಆರು ಸ್ಥಾನಗಳನ್ನು ಪಡೆದವರು ಕ್ರಮವಾಗಿ ₹ 30 ಸಾವಿರ, ₹ 25 ಸಾವಿರ, ₹ 20 ಸಾವಿರ, ₹ 15 ಸಾವಿರ, ₹ 10 ಸಾವಿರ ಮತ್ತು ₹ 5 ಸಾವಿರ ನಗದು ಬಹುಮಾನ ಪಡೆದುಕೊಂಡರು.</p>.<p><strong>ಫಲಿತಾಂಶದ ವಿವರ: ಪುರುಷರ ವಿಭಾಗ:</strong> ಶ್ರೀಧರ್ ಎನ್.ಸವನೂರ (ಬಾಗಲಕೋಟೆ)–1, ರಾಜು ಎ ಬಾಟಿ (ಬಾಗಲಕೋಟೆ)–2, ಬಸಪ್ಪ ಎಂ.ತೇರದಾಳ (ಬಾಗಲಕೋಟೆ)–3, ಸಂತೋಷ್ ವಿ.ವಿಭೂತಿಹಳ್ಳಿ (ಗದಗ)–4, ಸಂತೋಷ್ ಎಸ್.ಕುರಣಿ (ವಿಜಯಪುರ)–5, ಬಸವರಾಜ್ ಟಿ.ಬಾಗಲಕೋಟೆ (ಬಾಗಲಕೋಟೆ)–6</p>.<p><strong>ಮಹಿಳೆಯರ ವಿಭಾಗ:</strong> ಭಾವನಾ ಎಂ.ಪಾಟೀಲ (ಬಾಗಲಕೋಟೆ)–1, ಪಾಯಲ್ ಕೆ.ಚವಾಣ್ (ವಿಜಯಪುರ)–2, ಸೌಮ್ಯಾ ಸಿ.ಅಂತಪುರ (ವಿಜಯಪುರ)–3, ದಾನಮ್ಮ ಕೆ.ಜಿ (ವಿಜಯಪುರ)–4, ರೇಣಿಕಾ ಪಿ.ದಂಡಿನ್ (ಬಾಗಲಕೋಟೆ)–5, ಕಾವೇರಿ ಮುರ್ನಾಲ್ (ವಿಜಯಪುರ)–6</p>.<p><strong>ಬಿದ್ದು ಗಾಯಗೊಂಡ ಯಲುಗುರೇಶ್</strong></p>.<p>ಕಳೆದ ದಸರಾದಲ್ಲಿ ಪುರುಷರ ‘ಟೀಮ್ ಟೈಮ್ ಟ್ರಯಲ್’ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ವಿಜಯಪುರ ತಂಡದಲ್ಲಿದ್ದ ಯಲುಗುರೇಶ್ ಗಡ್ಡಿ ಅವರಿಗೆ ದುರದೃಷ್ಟ ಕಾಡಿತು. ಸ್ಪರ್ಧೆ ಆರಂಭವಾಗಿ ಸುಮಾರು 3 ಕಿ.ಮೀ ಕ್ರಮಿಸಿದಾಗ ಬಿದ್ದು ಸ್ಪರ್ಧೆಯಿಂದ ಹಿಂದೆ ಸರಿದರು. ಅವರ ಎಡಗೈ ಮಣಿಕಟ್ಟಿನ ಮೂಳೆ ಮುರಿದಿದೆ.</p>.<p>‘ನನ್ನ ಮುಂದಿದ್ದ ಸೈಕ್ಲಿಸ್ಟ್ ಬಿದ್ದರು. ಅವರ ಸೈಕಲ್ಗೆ ತಾಗಿ ನಾನೂ ಬಿದ್ದುಬಿಟ್ಟೆ. ತುಂಬಾ ನಿರಾಸೆಯಾಗಿದೆ’ ಎಂದು ಯಲುಗುರೇಶ್ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>