<p><strong>ನವದೆಹಲಿ:</strong> ನ್ಯೂಟ್ರಿಷನ್ ಹಾಗೂ ಫಿಟ್ನೆಸ್ ಅಗತ್ಯಗಳಿಗಾಗಿ ತಾನು ಲಂಡನ್ನಲ್ಲಿದ್ದು, ತನ್ನ ಕುಟುಂಬ ಹಾಗೂ ತರಬೇತುದಾರರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಸ್ಪಷ್ಟಪಡಿಸಿದ್ದಾರೆ.</p>.<p>ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, ಕಳೆದ 10 ದಿನಗಳಿಂದ ಲಂಡನ್ನಲ್ಲಿದ್ದಾರೆ. ಈ ಕುರಿತು ಅವರು ಗ್ಯಾಟೊರೇಡ್ ಕ್ರೀಡಾ ವಿಜ್ಞಾನ ಸಂಸ್ಥೆಯ (ಜಿಎಸ್ಎಸ್ಐ) ನ್ಯೂಟ್ರಿಷನಿಸ್ಟ್ ರೆಬೆಕ್ಕಾ ರ್ಯಾಂಡೆಲ್ ಅವರೊಂದಿಗೆ ಇರುವ ಚಿತ್ರವನ್ನು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.</p>.<p>ಕುಟುಂಬ, ರಾಷ್ಟ್ರೀಯ ಶಿಬಿರ, ಕೋಚ್ನೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ದೇಶವನ್ನು ತೊರೆದಿದ್ದಾರೆ ಎಂಬ ವದಂತಿಗಳನ್ನು ಸಿಂಧು ಅಲ್ಲಗಳೆದಿದ್ದಾರೆ.</p>.<p>‘ನ್ಯೂಟ್ರಿಷನ್ ಅಗತ್ಯಗಳಿಗಾಗಿ ನಾನು ಕೆಲವು ದಿನಗಳ ಹಿಂದೆ ಲಂಡನ್ಗೆ ಬಂದಿದ್ದೇನೆ. ಇದಕ್ಕೆ ನನ್ನ ಪೋಷಕರ ಒಪ್ಪಿಗೆಯೂ ಇದೆ. ಕುಟುಂಬದಲ್ಲಿ ಬಿರುಕು ಮೂಡಿಲ್ಲ‘ ಎಂದು ಮಂಗಳವಾರ ಟ್ವೀಟರ್ನಲ್ಲಿ ಸಿಂಧು ಬರೆದುಕೊಂಡಿದ್ದಾರೆ.</p>.<p>‘ಹೈದರಾಬಾದ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿ ಸಮರ್ಪಕ ತರಬೇತಿ ಸಿಗುತ್ತಿಲ್ಲ. ಹೀಗಾಗಿ ಸಿಂಧು ಲಂಡನ್ಗೆ ತೆರಳಿದ್ದಾರೆ‘ ಎಂದು ತಂದೆ ಪಿ.ವಿ.ರಮಣ ಹೇಳಿದ್ದರು. ಈ ಹೇಳಿಕೆಗೆ ಸಿಂಧು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.</p>.<p>‘ಹೈದರಾಬಾದ್ ಶಿಬಿರದಲ್ಲಿ ಸಿಂಧುಗೆ ಸೂಕ್ತ ತರಬೇತಿ ದೊರೆಯುತ್ತಿಲ್ಲ. 2018ರ ಏಷ್ಯನ್ ಕ್ರೀಡಾಕೂಟಗಳ ಬಳಿಕ ಗೋಪಿ (ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್) ಅವರು ಸಿಂಧು ಅಭ್ಯಾಸದ ಕಡೆಗೆ ಆಸಕ್ತಿ ವಹಿಸುತ್ತಿಲ್ಲ. ತರಬೇತಿಗಾಗಿ ಸೂಕ್ತ ತರಬೇತುದಾರರನ್ನು ನಿಯೋಜಿಸುತ್ತಿಲ್ಲ‘ ಎಂದು ರಮಣ ಆರೋಪಿಸಿದ್ದರು.</p>.<p>ರಮಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಗೋಪಿಚಂದ್ ನಿರಾಕರಿಸಿದ್ದಾರೆ.</p>.<p>‘ಸಿಂಧು ಅವರ ತಂದೆಯ ಹೇಳಿಕೆಗೆ ನಾನು ಪ್ರತಿಕ್ರಿಯಿಸಲಾರೆ. ಈ ಕುರಿತು ಸ್ವತಃ ಸಿಂಧು ಮಾತನಾಡಿದರೆ ನಾನು ಉತ್ತರಿಸುತ್ತೇನೆ‘ ಎಂದಿದ್ದಾರೆ.</p>.<p>‘ಕೋಚ್ ಗೋಪಿಚಂದ್ ಹಾಗೂ ರಾಷ್ಟ್ರೀಯ ಶಿಬಿರದಲ್ಲಿರುವ ಸೌಲಭ್ಯಗಳ ಬಗ್ಗೆ ನನಗೆ ತಕರಾರಿಲ್ಲ‘ ಎಂದು ಸಿಂಧು ಹೇಳಿದ್ದಾರೆ.</p>.<p>2021ರ ಜನವರಿಯಲ್ಲಿ ನಿಗದಿಯಾಗಿರುವ ಏಷ್ಯನ್ ಲೆಗ್ ಬ್ಯಾಡ್ಮಿಂಟನ್ ಟೂರ್ನಿಗೆ ಸಿಂಧು ಸಜ್ಜಾಗುತ್ತಿದ್ದಾರೆ.</p>.<p>ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ವಿಶ್ವ ಟೂರ್ ಫೈನಲ್ಸ್ ಅನ್ನು ಜನವರಿ 27ಕ್ಕೆ ಹಾಗೂ ಎರಡು ಏಷ್ಯನ್ ಓಪನ್ ಟೂರ್ನಿಗಳನ್ನು ಜನವರಿ (12–17 ಹಾಗೂ 19–24) ಮುಂದೂಡಿತ್ತು. ಏಷ್ಯನ್ ಓಪನ್ ಟೂರ್ನಿಗಳು ಬ್ಯಾಂಕಾಕ್ನಲ್ಲಿ ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ನ್ಯೂಟ್ರಿಷನ್ ಹಾಗೂ ಫಿಟ್ನೆಸ್ ಅಗತ್ಯಗಳಿಗಾಗಿ ತಾನು ಲಂಡನ್ನಲ್ಲಿದ್ದು, ತನ್ನ ಕುಟುಂಬ ಹಾಗೂ ತರಬೇತುದಾರರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಸ್ಪಷ್ಟಪಡಿಸಿದ್ದಾರೆ.</p>.<p>ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, ಕಳೆದ 10 ದಿನಗಳಿಂದ ಲಂಡನ್ನಲ್ಲಿದ್ದಾರೆ. ಈ ಕುರಿತು ಅವರು ಗ್ಯಾಟೊರೇಡ್ ಕ್ರೀಡಾ ವಿಜ್ಞಾನ ಸಂಸ್ಥೆಯ (ಜಿಎಸ್ಎಸ್ಐ) ನ್ಯೂಟ್ರಿಷನಿಸ್ಟ್ ರೆಬೆಕ್ಕಾ ರ್ಯಾಂಡೆಲ್ ಅವರೊಂದಿಗೆ ಇರುವ ಚಿತ್ರವನ್ನು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.</p>.<p>ಕುಟುಂಬ, ರಾಷ್ಟ್ರೀಯ ಶಿಬಿರ, ಕೋಚ್ನೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ದೇಶವನ್ನು ತೊರೆದಿದ್ದಾರೆ ಎಂಬ ವದಂತಿಗಳನ್ನು ಸಿಂಧು ಅಲ್ಲಗಳೆದಿದ್ದಾರೆ.</p>.<p>‘ನ್ಯೂಟ್ರಿಷನ್ ಅಗತ್ಯಗಳಿಗಾಗಿ ನಾನು ಕೆಲವು ದಿನಗಳ ಹಿಂದೆ ಲಂಡನ್ಗೆ ಬಂದಿದ್ದೇನೆ. ಇದಕ್ಕೆ ನನ್ನ ಪೋಷಕರ ಒಪ್ಪಿಗೆಯೂ ಇದೆ. ಕುಟುಂಬದಲ್ಲಿ ಬಿರುಕು ಮೂಡಿಲ್ಲ‘ ಎಂದು ಮಂಗಳವಾರ ಟ್ವೀಟರ್ನಲ್ಲಿ ಸಿಂಧು ಬರೆದುಕೊಂಡಿದ್ದಾರೆ.</p>.<p>‘ಹೈದರಾಬಾದ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿ ಸಮರ್ಪಕ ತರಬೇತಿ ಸಿಗುತ್ತಿಲ್ಲ. ಹೀಗಾಗಿ ಸಿಂಧು ಲಂಡನ್ಗೆ ತೆರಳಿದ್ದಾರೆ‘ ಎಂದು ತಂದೆ ಪಿ.ವಿ.ರಮಣ ಹೇಳಿದ್ದರು. ಈ ಹೇಳಿಕೆಗೆ ಸಿಂಧು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.</p>.<p>‘ಹೈದರಾಬಾದ್ ಶಿಬಿರದಲ್ಲಿ ಸಿಂಧುಗೆ ಸೂಕ್ತ ತರಬೇತಿ ದೊರೆಯುತ್ತಿಲ್ಲ. 2018ರ ಏಷ್ಯನ್ ಕ್ರೀಡಾಕೂಟಗಳ ಬಳಿಕ ಗೋಪಿ (ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್) ಅವರು ಸಿಂಧು ಅಭ್ಯಾಸದ ಕಡೆಗೆ ಆಸಕ್ತಿ ವಹಿಸುತ್ತಿಲ್ಲ. ತರಬೇತಿಗಾಗಿ ಸೂಕ್ತ ತರಬೇತುದಾರರನ್ನು ನಿಯೋಜಿಸುತ್ತಿಲ್ಲ‘ ಎಂದು ರಮಣ ಆರೋಪಿಸಿದ್ದರು.</p>.<p>ರಮಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಗೋಪಿಚಂದ್ ನಿರಾಕರಿಸಿದ್ದಾರೆ.</p>.<p>‘ಸಿಂಧು ಅವರ ತಂದೆಯ ಹೇಳಿಕೆಗೆ ನಾನು ಪ್ರತಿಕ್ರಿಯಿಸಲಾರೆ. ಈ ಕುರಿತು ಸ್ವತಃ ಸಿಂಧು ಮಾತನಾಡಿದರೆ ನಾನು ಉತ್ತರಿಸುತ್ತೇನೆ‘ ಎಂದಿದ್ದಾರೆ.</p>.<p>‘ಕೋಚ್ ಗೋಪಿಚಂದ್ ಹಾಗೂ ರಾಷ್ಟ್ರೀಯ ಶಿಬಿರದಲ್ಲಿರುವ ಸೌಲಭ್ಯಗಳ ಬಗ್ಗೆ ನನಗೆ ತಕರಾರಿಲ್ಲ‘ ಎಂದು ಸಿಂಧು ಹೇಳಿದ್ದಾರೆ.</p>.<p>2021ರ ಜನವರಿಯಲ್ಲಿ ನಿಗದಿಯಾಗಿರುವ ಏಷ್ಯನ್ ಲೆಗ್ ಬ್ಯಾಡ್ಮಿಂಟನ್ ಟೂರ್ನಿಗೆ ಸಿಂಧು ಸಜ್ಜಾಗುತ್ತಿದ್ದಾರೆ.</p>.<p>ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ವಿಶ್ವ ಟೂರ್ ಫೈನಲ್ಸ್ ಅನ್ನು ಜನವರಿ 27ಕ್ಕೆ ಹಾಗೂ ಎರಡು ಏಷ್ಯನ್ ಓಪನ್ ಟೂರ್ನಿಗಳನ್ನು ಜನವರಿ (12–17 ಹಾಗೂ 19–24) ಮುಂದೂಡಿತ್ತು. ಏಷ್ಯನ್ ಓಪನ್ ಟೂರ್ನಿಗಳು ಬ್ಯಾಂಕಾಕ್ನಲ್ಲಿ ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>