ಪಂದ್ಯದ ಆರಂಭದಿಂದಲೇ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಭಾರತದ ಆಟಗಾರರು ಗೋಲು ಹೊಡೆಯುವ ಪ್ರಯತ್ನಗಳಿಗೆ ಅರ್ಜೆಂಟೀನಾ ರಕ್ಷಣಾ ಪಡೆಯು ತಡೆಯೊಡ್ಡಿತು. ಆದರೆ ಹರ್ಮನ್ಪ್ರೀತ್ ಸಿಂಗ್ ಅವರ ಚುರುಕಿನ ಆಟವು 17ನೇ ನಿಮಿಷದಲ್ಲಿ ಫಲ ಕೊಟ್ಟಿತು. ಮೂವರು ರಕ್ಷಣಾ ಆಟಗಾರರು ಮತ್ತು ಗೋಲುಕೀಪರ್ನನ್ನು ವಂಚಿಸಿದ ಅವರು ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದ ರೀತಿ ಸೊಗಸಾಗಿತ್ತು. ಭಾರತ ತಂಡದ ಪಾಳಯದಲ್ಲಿ ಸಂಭ್ರಮ ಗರಿಗೆದರಿತು.