<p><strong>ಜಕಾರ್ತಾ:</strong> ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್,ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಭಾರತದ ಆಟಗಾರ್ತಿ ಬುಧವಾರ ಮೂರು ಸೆಟ್ಗಳ ಸೆಣಸಾಟದಲ್ಲಿ ಜಪಾನ್ನ ಸಯಾಕಾ ತಕಾಹಶಿ ಅವರಿಗೆ ಮಣಿದರು.</p>.<p>ಸಂಕ್ರಾಂತಿಯ ದಿನ ಭಾರತದ ಆಟಗಾರರಿಗೆ ಗೆಲುವಿನ ಸವಿ ಸಿಗಲಿಲ್ಲ. ಪುರುಷರ ವಿಭಾಗದಲ್ಲಿ ವಿಶ್ವ ಚಾಂಪಿಯನ್ಷಿಪ್ನ ಕಂಚಿನ ಪದಕ ವಿಜೇತ ಬಿ.ಸಾಯಿಪ್ರಣೀತ್, ಕಿದಂಬಿ ಶ್ರೀಕಾಂತ್ ಮತ್ತು ಸೌರಭ್ ವರ್ಮಾ ಬೇಗನೇ ಗಂಟುಮೂಟೆ ಕಟ್ಟಿದರು.</p>.<p>ಕಳೆದ ವರ್ಷ ದಯನೀಯ ವೈಫಲ್ಯ ಕಾಣುವ ಮೊದಲು, ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಸೈನಾ, 50 ನಿಮಿಷಗಳ ಹೋರಾಟ ಕಂಡ ಪಂದ್ಯದಲ್ಲಿ 21-19,13-21, 5–21 ರಿಂದ ತಕಾಹಶಿ ಎದುರು ಹಿಮ್ಮೆಟ್ಟಿದರು.</p>.<p>ವಿಶ್ವ ಕ್ರಮಾಂಕಪಟ್ಟಿಯಲ್ಲಿ 12ನೇ ಸ್ಥಾನದಲ್ಲಿರುವ ಕಿದಂಬಿ ಶ್ರೀಕಾಂತ್, ಸ್ಥಳೀಯ ಆಟಗಾರ ಶೆಸರ್ ಹಿರೆನ್ ರುಸ್ಟಾವಿಟೊ ಅವರಿಗೆ ಮಣಿಸಿದರು.ಮೊದಲ ಗೇಮ್ ಸೋತರೂ ತಿರುಗಿಬಿದ್ದ ರುಸ್ಟಾವಿಟೊ 18–21, 21–12, 21–14 ರಿಂದ ಭಾರತದ ಆಟಗಾರರನ್ನು 62 ನಿಮಿಷಗಳ ಆಟದಲ್ಲಿ ಸೋಲಿಸಿದರು.</p>.<p>ಇದರಿಂದ ಶ್ರೀಕಾಂತ್ ಸತತ ಎರಡನೇ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಂತೆ ಆಗಿದೆ. ಕಳೆದ ವಾರ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲೂ ಅವರು ಎರಡನೇ ಸುತ್ತಿಗೆ ತಲುಪಲು ವಿಫಲರಾಗಿದ್ದರು.</p>.<p>ಸಾಯಿಪ್ರಣೀತ್ ಕೂಡ ಮೊದಲ ಸುತ್ತಿನಲ್ಲಿ 21–16, 18–21, 10–21ರಿಂದ ಎಂಟನೇ ಶ್ರೇಯಾಂಕದ ಶೀ ಯು ಕಿ (ಚೀನಾ) ಅವರಿಗೆ ಮಣಿದರು. ಚೀನಾದ ಇನ್ನೊಬ್ಬ ಆಟಗಾರ ಲು ಗುವಾಂಗ್ ಝು 17–21, 21–5, 21–10 ರಿಂದ ಸೌರಭ್ ಅವರನ್ನು ಹಿಮ್ಮೆಟ್ಟಿಸಿದರು.</p>.<p>ಮಿಕ್ಸೆಡ್ ಡಬಲ್ಸ್ನಲ್ಲಿ ಪ್ರಣವ್ ಜೆರಿ ಚೋಪ್ರಾ– ಸಿಕ್ಕಿ ರೆಡ್ಡಿ 8–21, 14–21 ರಿಂದ ದಕ್ಷಿಣ ಕೊರಿಯಾದ ಕೊ ಸುಂಗ್ ಹ್ಯುನ್– ಯೊಮ್ ಹೆ ವಾನ್ ಅವರಿಗೆ ಮಣಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಕಾರ್ತಾ:</strong> ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್,ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಭಾರತದ ಆಟಗಾರ್ತಿ ಬುಧವಾರ ಮೂರು ಸೆಟ್ಗಳ ಸೆಣಸಾಟದಲ್ಲಿ ಜಪಾನ್ನ ಸಯಾಕಾ ತಕಾಹಶಿ ಅವರಿಗೆ ಮಣಿದರು.</p>.<p>ಸಂಕ್ರಾಂತಿಯ ದಿನ ಭಾರತದ ಆಟಗಾರರಿಗೆ ಗೆಲುವಿನ ಸವಿ ಸಿಗಲಿಲ್ಲ. ಪುರುಷರ ವಿಭಾಗದಲ್ಲಿ ವಿಶ್ವ ಚಾಂಪಿಯನ್ಷಿಪ್ನ ಕಂಚಿನ ಪದಕ ವಿಜೇತ ಬಿ.ಸಾಯಿಪ್ರಣೀತ್, ಕಿದಂಬಿ ಶ್ರೀಕಾಂತ್ ಮತ್ತು ಸೌರಭ್ ವರ್ಮಾ ಬೇಗನೇ ಗಂಟುಮೂಟೆ ಕಟ್ಟಿದರು.</p>.<p>ಕಳೆದ ವರ್ಷ ದಯನೀಯ ವೈಫಲ್ಯ ಕಾಣುವ ಮೊದಲು, ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಸೈನಾ, 50 ನಿಮಿಷಗಳ ಹೋರಾಟ ಕಂಡ ಪಂದ್ಯದಲ್ಲಿ 21-19,13-21, 5–21 ರಿಂದ ತಕಾಹಶಿ ಎದುರು ಹಿಮ್ಮೆಟ್ಟಿದರು.</p>.<p>ವಿಶ್ವ ಕ್ರಮಾಂಕಪಟ್ಟಿಯಲ್ಲಿ 12ನೇ ಸ್ಥಾನದಲ್ಲಿರುವ ಕಿದಂಬಿ ಶ್ರೀಕಾಂತ್, ಸ್ಥಳೀಯ ಆಟಗಾರ ಶೆಸರ್ ಹಿರೆನ್ ರುಸ್ಟಾವಿಟೊ ಅವರಿಗೆ ಮಣಿಸಿದರು.ಮೊದಲ ಗೇಮ್ ಸೋತರೂ ತಿರುಗಿಬಿದ್ದ ರುಸ್ಟಾವಿಟೊ 18–21, 21–12, 21–14 ರಿಂದ ಭಾರತದ ಆಟಗಾರರನ್ನು 62 ನಿಮಿಷಗಳ ಆಟದಲ್ಲಿ ಸೋಲಿಸಿದರು.</p>.<p>ಇದರಿಂದ ಶ್ರೀಕಾಂತ್ ಸತತ ಎರಡನೇ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಂತೆ ಆಗಿದೆ. ಕಳೆದ ವಾರ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲೂ ಅವರು ಎರಡನೇ ಸುತ್ತಿಗೆ ತಲುಪಲು ವಿಫಲರಾಗಿದ್ದರು.</p>.<p>ಸಾಯಿಪ್ರಣೀತ್ ಕೂಡ ಮೊದಲ ಸುತ್ತಿನಲ್ಲಿ 21–16, 18–21, 10–21ರಿಂದ ಎಂಟನೇ ಶ್ರೇಯಾಂಕದ ಶೀ ಯು ಕಿ (ಚೀನಾ) ಅವರಿಗೆ ಮಣಿದರು. ಚೀನಾದ ಇನ್ನೊಬ್ಬ ಆಟಗಾರ ಲು ಗುವಾಂಗ್ ಝು 17–21, 21–5, 21–10 ರಿಂದ ಸೌರಭ್ ಅವರನ್ನು ಹಿಮ್ಮೆಟ್ಟಿಸಿದರು.</p>.<p>ಮಿಕ್ಸೆಡ್ ಡಬಲ್ಸ್ನಲ್ಲಿ ಪ್ರಣವ್ ಜೆರಿ ಚೋಪ್ರಾ– ಸಿಕ್ಕಿ ರೆಡ್ಡಿ 8–21, 14–21 ರಿಂದ ದಕ್ಷಿಣ ಕೊರಿಯಾದ ಕೊ ಸುಂಗ್ ಹ್ಯುನ್– ಯೊಮ್ ಹೆ ವಾನ್ ಅವರಿಗೆ ಮಣಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>