‘ಅನಧಿಕೃತ ವ್ಯಕ್ತಿಗಳು’ ಪ್ರಧಾನ ಕಚೇರಿಯೊಳಗೆ ಪ್ರವೇಶಿಸಬಾರದು ಎಂಬ ನೋಟಿಸ್ ಅನ್ನು ಕಾರ್ಯಕಾರಿ ಸಮಿತಿಯ ಒಂಬತ್ತು ಸದಸ್ಯರು ಕಳೆದ ಶುಕ್ರವಾರ ಕಚೇರಿ ಆವರಣದಲ್ಲಿ ಅಂಟಿಸಿದ್ದರು. ಇತ್ತೀಚೆಗೆ ಉಷಾ ನೇಮಕ ಮಾಡಿರುವ ಇಬ್ಬರು ಸದಸ್ಯರನ್ನು ಗುರಿಯಾಗಿಸಿ ಈ ನೋಟಿಸ್ ಅಂಟಿಸಲಾಗಿತ್ತು. ‘ಇದು ದಬ್ಬಾಳಿಕೆಯ ಕ್ರಮ’ ಎಂದು ಉಷಾ ಟೀಕಿಸಿದ್ದಾರೆ.