<p><strong>ಧಾರವಾಡ:</strong> ಪಂದ್ಯದ ಆರಂಭದಿಂದಲೇ ವೇಗವಾಗಿ ಅಂಕಗಳನ್ನು ಕಲೆಹಾಕಿದ ಹರಿಯಾಣ ತಂಡ 14 ವರ್ಷದ ಒಳಗಿನವರ 64ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ಭಾನುವಾರ ಪ್ರಶಸ್ತಿ ಜಯಿಸಿತು.</p>.<p>ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಇಲ್ಲಿನಡೆದ ಟೂರ್ನಿಯ ಫೈನಲ್ನಲ್ಲಿ ಹರಿಯಾಣ 48–19ರಲ್ಲಿ ಉತ್ತರಪ್ರದೇಶವನ್ನು ಮಣಿಸಿತು.</p>.<p>ಮೊದಲರ್ಧದ ಆಟ ಮುಗಿದಾಗ ಹರಿಯಾಣ 22–12ರಲ್ಲಿ ಮುನ್ನಡೆ ಹೊಂದಿತ್ತು. ಆರಂಭದಲ್ಲಿ ಲಭಿಸಿದ್ದ ಮುನ್ನಡೆಯನ್ನು ಕೊನೆಯವರೆಗೂ ಉಳಿಸಿಕೊಂಡಿದ್ದರಿಂದ ತಂಡಕ್ಕೆ ಪ್ರಶಸ್ತಿ ಜಯಿಸಲು ಸಾಧ್ಯವಾಯಿತು. ದ್ವಿತೀಯಾರ್ಧದಲ್ಲಿಯೂ ಆಕ್ರಮಣಕಾರಿ ಆಟಕ್ಕೆ ಒತ್ತು ಕೊಟ್ಟ ಹರಿಯಾಣದ ಆಟಗಾರ್ತಿಯರು 26 ಅಂಕ ಕಲೆಹಾಕಿದರು. ಈ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ 7 ಅಂಕ ಗಳಿಸಲಷ್ಟೇ ಸಾಧ್ಯವಾಯಿತು.</p>.<p>ಉತ್ತರಪ್ರದೇಶ ತಂಡದ ಸಿಮ್ರನ್ ತಿವಾರಿ (ಅತ್ಯುತ್ತಮ ರೈಡರ್), ದೆಹಲಿ ತಂಡದ ಮನೀಷಾ (ಅತ್ಯುತ್ತಮ ಕ್ಯಾಚರ್) ಮತ್ತು ಹರಿಯಾಣದ ಜ್ಯೋತಿ (ಅತ್ಯುತ್ತಮ ಆಲ್ರೌಂಡರ್) ವೈಯಕ್ತಿಕ ಪ್ರಶಸ್ತಿಗೆ ಭಾಜನರಾದರು. ಕರ್ನಾಟಕಕ್ಕೆ ಅತ್ಯುತ್ತಮ ತಂಡ ಪ್ರಶಸ್ತಿ ಲಭಿಸಿತು.</p>.<p>ಮೂರನೇ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ದೆಹಲಿ 27–26ರಲ್ಲಿ ಚತ್ತೀಸಗಡ ಎದುರು ಜಯ ಪಡೆಯಿತು. ಪ್ರತಿ ಹಂತದಲ್ಲಿ ಉಭಯ ತಂಡಗಳಿಂದಲೂ ಚುರುಕಿನ ಹೋರಾಟ ಕಂಡುಬಂತು. ರಜೆಯ ದಿನವಾಗಿದ್ದ ಕಾರಣ ಭಾನುವಾರದ ಪಂದ್ಯಗಳನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಕಬಡ್ಡಿ ಪ್ರೇಮಿಗಳು ಕ್ರೀಡಾಂಗಣಕ್ಕೆ ಬಂದಿದ್ದರು.</p>.<p>ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಶಾಸಕ ಅಮೃತ ದೇಸಾಯಿ,ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ವಲಯದ ಹೆಚ್ಚುವರಿ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಉಪನಿರ್ದೇಶಕ ಆರ್.ಎಸ್.ಮಳ್ಳೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ಪಂದ್ಯದ ಆರಂಭದಿಂದಲೇ ವೇಗವಾಗಿ ಅಂಕಗಳನ್ನು ಕಲೆಹಾಕಿದ ಹರಿಯಾಣ ತಂಡ 14 ವರ್ಷದ ಒಳಗಿನವರ 64ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ಭಾನುವಾರ ಪ್ರಶಸ್ತಿ ಜಯಿಸಿತು.</p>.<p>ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಇಲ್ಲಿನಡೆದ ಟೂರ್ನಿಯ ಫೈನಲ್ನಲ್ಲಿ ಹರಿಯಾಣ 48–19ರಲ್ಲಿ ಉತ್ತರಪ್ರದೇಶವನ್ನು ಮಣಿಸಿತು.</p>.<p>ಮೊದಲರ್ಧದ ಆಟ ಮುಗಿದಾಗ ಹರಿಯಾಣ 22–12ರಲ್ಲಿ ಮುನ್ನಡೆ ಹೊಂದಿತ್ತು. ಆರಂಭದಲ್ಲಿ ಲಭಿಸಿದ್ದ ಮುನ್ನಡೆಯನ್ನು ಕೊನೆಯವರೆಗೂ ಉಳಿಸಿಕೊಂಡಿದ್ದರಿಂದ ತಂಡಕ್ಕೆ ಪ್ರಶಸ್ತಿ ಜಯಿಸಲು ಸಾಧ್ಯವಾಯಿತು. ದ್ವಿತೀಯಾರ್ಧದಲ್ಲಿಯೂ ಆಕ್ರಮಣಕಾರಿ ಆಟಕ್ಕೆ ಒತ್ತು ಕೊಟ್ಟ ಹರಿಯಾಣದ ಆಟಗಾರ್ತಿಯರು 26 ಅಂಕ ಕಲೆಹಾಕಿದರು. ಈ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ 7 ಅಂಕ ಗಳಿಸಲಷ್ಟೇ ಸಾಧ್ಯವಾಯಿತು.</p>.<p>ಉತ್ತರಪ್ರದೇಶ ತಂಡದ ಸಿಮ್ರನ್ ತಿವಾರಿ (ಅತ್ಯುತ್ತಮ ರೈಡರ್), ದೆಹಲಿ ತಂಡದ ಮನೀಷಾ (ಅತ್ಯುತ್ತಮ ಕ್ಯಾಚರ್) ಮತ್ತು ಹರಿಯಾಣದ ಜ್ಯೋತಿ (ಅತ್ಯುತ್ತಮ ಆಲ್ರೌಂಡರ್) ವೈಯಕ್ತಿಕ ಪ್ರಶಸ್ತಿಗೆ ಭಾಜನರಾದರು. ಕರ್ನಾಟಕಕ್ಕೆ ಅತ್ಯುತ್ತಮ ತಂಡ ಪ್ರಶಸ್ತಿ ಲಭಿಸಿತು.</p>.<p>ಮೂರನೇ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ದೆಹಲಿ 27–26ರಲ್ಲಿ ಚತ್ತೀಸಗಡ ಎದುರು ಜಯ ಪಡೆಯಿತು. ಪ್ರತಿ ಹಂತದಲ್ಲಿ ಉಭಯ ತಂಡಗಳಿಂದಲೂ ಚುರುಕಿನ ಹೋರಾಟ ಕಂಡುಬಂತು. ರಜೆಯ ದಿನವಾಗಿದ್ದ ಕಾರಣ ಭಾನುವಾರದ ಪಂದ್ಯಗಳನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಕಬಡ್ಡಿ ಪ್ರೇಮಿಗಳು ಕ್ರೀಡಾಂಗಣಕ್ಕೆ ಬಂದಿದ್ದರು.</p>.<p>ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಶಾಸಕ ಅಮೃತ ದೇಸಾಯಿ,ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ವಲಯದ ಹೆಚ್ಚುವರಿ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಉಪನಿರ್ದೇಶಕ ಆರ್.ಎಸ್.ಮಳ್ಳೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>