<p><strong>ಕಟಕ್:</strong> ಮೊದಲೆರಡು ಶ್ರೇಯಾಂಕ ಪಡೆದಿರುವ ತರುಣ್ ಮನ್ನೇಪಲ್ಲಿ ಮತ್ತು ಕಿರಣ್ ಜಾರ್ಜ್ ಅವರು ಮಂಗಳವಾರ ಒಡಿಶಾ ಮಾಸ್ಟರ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬೈ ಪಡೆದು ಪುರುಷರ ಸಿಂಗಲ್ಸ್ನಲ್ಲಿ ಎರಡನೇ ಸುತ್ತಿಗೆ ಮುನ್ನಡೆದರು.</p>.<p>ತರುಣ್ ಮತ್ತು ಕಿರಣ್ ಅವರೊಂದಿಗೆ ನಾಲ್ಕನೇ ಶ್ರೇಯಾಂಕದ ಪ್ರಿಯಾಂಶು ರಾಜಾವತ್, ಆರನೇ ಶ್ರೇಯಾಂಕದ ಮನರಾಜ್ ಸಿಂಗ್, ಏಳನೇ ಶ್ರೇಯಾಂಕದ ಎಸ್. ಶಂಕರ್ ಮುತ್ತುಸಾಮಿ ಸುಬ್ರಮಣಿಯನ್, ಎಂಟನೇ ಶ್ರೇಯಾಂಕದ ರಿತ್ವಿಕ್ ಸಂಜೀವಿ ಕೂಡ ಮೊದಲ ಸುತ್ತಿನಲ್ಲಿ ಬೈ ಪಡೆದರು.</p>.<p>ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆವಿನ್ ತಂಗಂ 21-18, 19-21, 21-16 ಅಂತರದಲ್ಲಿ ಸ್ವದೇಶದ ಆರ್ಯಮನ್ ಟಂಡನ್ ಅವರನ್ನು ಸೋಲಿಸಿದರೆ; ತುಷಾರ್ ಸುವೀರ್ 21-19, 8-21, 21-14ರಿಂದ ಆಲಪ್ ಮಿಶ್ರಾ ಅವರನ್ನು ಮಣಿಸಿದರು.</p>.<p>ಮತ್ತೊಂದು ಪಂದ್ಯದಲ್ಲಿ ದರ್ಶನ್ ಪೂಜಾರಿ 21-9, 21-12 ಅಂತರದಿಂದ ಅಮೆರಿಕದ ಕೆವಿನ್ ಅರೋಕಿಯಾ ವಾಲ್ಟರ್ ಅವರನ್ನು ಸೋಲಿಸಿದರು. ಟೂರ್ನಿಯು ಒಟ್ಟು ₹98.86 ಲಕ್ಷ ಬಹುಮಾನ ಮೊತ್ತವನ್ನು ಒಳಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಟಕ್:</strong> ಮೊದಲೆರಡು ಶ್ರೇಯಾಂಕ ಪಡೆದಿರುವ ತರುಣ್ ಮನ್ನೇಪಲ್ಲಿ ಮತ್ತು ಕಿರಣ್ ಜಾರ್ಜ್ ಅವರು ಮಂಗಳವಾರ ಒಡಿಶಾ ಮಾಸ್ಟರ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬೈ ಪಡೆದು ಪುರುಷರ ಸಿಂಗಲ್ಸ್ನಲ್ಲಿ ಎರಡನೇ ಸುತ್ತಿಗೆ ಮುನ್ನಡೆದರು.</p>.<p>ತರುಣ್ ಮತ್ತು ಕಿರಣ್ ಅವರೊಂದಿಗೆ ನಾಲ್ಕನೇ ಶ್ರೇಯಾಂಕದ ಪ್ರಿಯಾಂಶು ರಾಜಾವತ್, ಆರನೇ ಶ್ರೇಯಾಂಕದ ಮನರಾಜ್ ಸಿಂಗ್, ಏಳನೇ ಶ್ರೇಯಾಂಕದ ಎಸ್. ಶಂಕರ್ ಮುತ್ತುಸಾಮಿ ಸುಬ್ರಮಣಿಯನ್, ಎಂಟನೇ ಶ್ರೇಯಾಂಕದ ರಿತ್ವಿಕ್ ಸಂಜೀವಿ ಕೂಡ ಮೊದಲ ಸುತ್ತಿನಲ್ಲಿ ಬೈ ಪಡೆದರು.</p>.<p>ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆವಿನ್ ತಂಗಂ 21-18, 19-21, 21-16 ಅಂತರದಲ್ಲಿ ಸ್ವದೇಶದ ಆರ್ಯಮನ್ ಟಂಡನ್ ಅವರನ್ನು ಸೋಲಿಸಿದರೆ; ತುಷಾರ್ ಸುವೀರ್ 21-19, 8-21, 21-14ರಿಂದ ಆಲಪ್ ಮಿಶ್ರಾ ಅವರನ್ನು ಮಣಿಸಿದರು.</p>.<p>ಮತ್ತೊಂದು ಪಂದ್ಯದಲ್ಲಿ ದರ್ಶನ್ ಪೂಜಾರಿ 21-9, 21-12 ಅಂತರದಿಂದ ಅಮೆರಿಕದ ಕೆವಿನ್ ಅರೋಕಿಯಾ ವಾಲ್ಟರ್ ಅವರನ್ನು ಸೋಲಿಸಿದರು. ಟೂರ್ನಿಯು ಒಟ್ಟು ₹98.86 ಲಕ್ಷ ಬಹುಮಾನ ಮೊತ್ತವನ್ನು ಒಳಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>