ಒಂದೇ ಒಂದು ದಿನವೂ ಅಭ್ಯಾಸವನ್ನು ತಪ್ಪಿಸಲು ಯಾವುದೇ ನೆಪವನ್ನು ದೀಪಾ ಹೇಳಿಲ್ಲ. ಮಕ್ಕಳಿಗಾಗಿ ತಾವು ಶಕ್ತಿಶಾಲಿಯಾಗಬೇಕು. ದೈಹಿಕವಾಗಿ ಬಲಾಢ್ಯರಾಗಬೇಕು ಎಂಬ ಏಕೈಕ ಗುರಿಯೇ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ. ನಾನು ಕೌಶಲಗಳನ್ನು ಹೇಳಿಕೊಟ್ಟಿರುವೆ. ಆದರೆ ಛಲ ಬಲ ಎಲ್ಲವೂ ಅವರದ್ದೇ. ಅವರಿಗೆ ತಾಲೀಮು ನೀಡುವ ಅವಕಾಶ ನನಗೆ ಸಿಕ್ಕಿದ್ದು ಭಾಗ್ಯವೇ ಸರಿ.