ಚೆನ್ನೈ: ಭಾರತ ಮೋಟರ್ಸ್ಪೋರ್ಟ್ಸ್ ಕ್ಲಬ್ಗಳ ಫೆಡರೇಷನ್ (ಎಫ್ಎಫ್ಎಸ್ಸಿಐ) ಅಧ್ಯಕ್ಷ ಜೆ.ಪೃಥ್ವಿರಾಜ್ ಮೇಲೆ ಹೇರಿದ್ದ ನಿಷೇಧವನ್ನು ಭಾರತೀಯ ಮೋಟರ್ ಸ್ಪೋರ್ಟ್ಸ್ ಮೇಲ್ಮನವಿ ಸಮಿತಿ (ಐಎಂಎಸ್ಎಸಿ) ಸೋಮವಾರ ಹಿಂತೆಗೆದುಕೊಂಡಿದೆ. ಹೋದ ವರ್ಷ ಜೋಧಪುರದಲ್ಲಿ ನಡೆದ ರ್ಯಾಲಿಯ ವೇಳೆ ಮೂವರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಪೃಥ್ವಿರಾಜ್ ಮೇಲೆ ನಿಷೇಧ ಹೇರಲಾಗಿತ್ತು.